ಹಳ್ಳಿ ಹೈದ ಜಗ್ಗೇಶ್ 'ನವರಸನಾಯಕ' ಆಗುವಂತೆ ಪವಾಡ ಮಾಡಿದ್ದ ರಾಯರು.; ಹುಬ್ಬಳ್ಳಿ ಧರ್ಮಛತ್ರದ ವಿಷ್ಯ ಗೊತ್ತಾ?

'ನವರಸನಾಯಕ' ಜಗ್ಗೇಶ್‌ಗೆ ಇಂದು ಒಂದಾದ ಮೇಲೆ ಒಂದರಂತೆ ಸಿನಿಮಾ ಅವಕಾಶಗಳು ಬರುತ್ತಿರಬಹುದು. ಆದರೆ ಈ ಹಿಂದೆ ಅವರು ಅವಕಾಶಕ್ಕಾಗಿ ಪರದಾಡುತ್ತಿದ್ದರು. ಆಗ ರಾಯರು ಕರುಣೆ ತೋರಿದ ಕಥೆ ಹೇಳಿದ್ದಾರೆ ಜಗ್ಗೇಶ್

ಹಳ್ಳಿ ಹೈದ ಜಗ್ಗೇಶ್ 'ನವರಸನಾಯಕ' ಆಗುವಂತೆ ಪವಾಡ ಮಾಡಿದ್ದ ರಾಯರು.; ಹುಬ್ಬಳ್ಳಿ ಧರ್ಮಛತ್ರದ ವಿಷ್ಯ ಗೊತ್ತಾ?
Linkup
ನಟ ಹಳ್ಳಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ನವರಸನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇಂದು ಅವರು ಹೀರೋ ಆಗಿದ್ರೂ ಕೂಡ ಅಂದು ಅವಕಾಶಕ್ಕಾಗಿ ಒದ್ದಾಡುತ್ತಿದ್ದರು. ಆರಂಭದಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದ ಅವರಿಗೆ ಹೀರೋ ಪಾತ್ರ ಸಿಕ್ಕಿತಂತೆ. ಅದಕ್ಕೆ ಕಾರಣ ಎಂದಿರುವ ಜಗ್ಗೇಶ್ ಹಳೆಯ ಕಥೆಯನ್ನು ಸ್ಮರಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ನಟ ಜಗ್ಗೇಶ್ ಹೇಳಿದ್ದೇನು? ಬಹಳ ವರ್ಷದ ನಂತರ ನಾನು ಮಂತ್ರಾಲಯದಲ್ಲಿ ಉಳಿಯುತ್ತಿದ್ದ ಹುಬ್ಬಳ್ಳಿ ಧರ್ಮಛತ್ರಕ್ಕೆ ಭೇಟಿ ಕೊಟ್ಟೆ. 1980-81ರಲ್ಲಿ ಸಿನಿಮಾ ರಂಗದಲ್ಲಿ ನನಗೆ ಅವಕಾಶ ಸಿಗುತ್ತಿರಲಿಲ್ಲ. ಒಂದು ದಿನ ಛಾಯಾಗ್ರಹಕ ಹಾಗು ಗುರುಗಳು ಸುಂದರನಾಥ ಸುವರ್ಣ ಅಂಬರೀಶ ಅವರ ಚಿತ್ರ 'ಗಜೇಂದ್ರ' ಅವಕಾಶಕ್ಕಾಗಿ ಸಹನಿರ್ದೇಶಕ ಡಿ.ಬಾಬು ಅವರಿಗೆ ಕೇಳಿಕೊಂಡರು. ಆದರೆ ನನ್ನ ದೌರ್ಭಾಗ್ಯ ಅವಕಾಶ ಸಿಗಲಿಲ್ಲ. ನೊಂದು ನಡೆದು ಬರುವಾಗ ಕೆಂಚಾಂಭ ಲಾಡ್ಜ್ ಬಳಿ ಒಬ್ಬ ಜೋತಿಷಿ ಕಂಡು ಕೇಳಿದಾಗ ನಿನಗೆ ಈ ಪ್ರಪಂಚದಲ್ಲಿ ಸಹಾಯ ಮಾಡೋದು ಒಬ್ಬರೆ ಅದು ರಾಯರು ಎಂದರು. ಮನೆಗೆ ಬಂದಾಗ ಅಮ್ಮ ತೊಳಸಿಕಟ್ಟೆ ಬಳಿ ಕೂತಿದ್ದವಳು ನನ್ನ ಕಂಡು ಲೇ ಮಗನೆ.. ನಿನಗೆ ಒಳ್ಳೇದು ಆಗಬೇಕು ಎಂದರೆ ರಾಯರ ಬಳಿ ಹೋಗು ಎಂದು ತನ್ನ ಎಲೆಅಡಿಕೆ ಕಡ್ಡಿಪುಡಿಗಾಗಿ ಕೂಡಿಟ್ಟ ಹಣ 500ರೂ ನನಗೆ ಕೊಟ್ಟಳು, ಆಶ್ಚರ್ಯವಾಯಿತು. ಮರು ಚಿಂತಿಸದೆ ಮಂತ್ರಾಲಯಕ್ಕೆ ಹೊರಟು ಇರಲು ಈ ಜಾಗ ಆಯ್ಕೆ ಮಾಡಿಕೊಂಡೆ. ಆಗ ದಿನಕ್ಕೆ 25 ಪೈಸೆ 3 ತಿಂಗಳು ಇಲ್ಲಿ ಉಳಿದು ರಾಯರ ಸೇವೆ ಮಾಡಿ ಮನೆಗೆ ಬಂದ ತಕ್ಷಣ ಕೆ ವಿ ಜಯರಾಮ್ ಅವರ 'ಶ್ವೇತ ಗುಲಾಬಿ' ಚಿತ್ರದಲ್ಲಿ ಮುಖ್ಯ ಖಳನಟ ಅವಕಾಶ ಸಿಕ್ಕಿತು ಅಲ್ಲಿಂದ ನನ್ನ ಬದುಕಲ್ಲಿ ನಂಬಲಾಗದ ರಾಯರ ಪವಾಡ ನಡೆದು ಸಾಮಾನ್ಯ ಹಳ್ಳಿ ಹುಡುಗ ನವರಸನಾಯಕನಾದೆ. ಮುಂದೆ ನಾನು ಪರಿಮಳನ ಮದುವೆಯಾಗಿ ಅವಳನ್ನು ಕರೆತಂದು ಇಲ್ಲಿ 1ತಿಂಗಳು ವಾಸಮಾಡಿದೆ. ಇದೆ ಜಾಗದಲ್ಲಿ ಒಬ್ಬ ಸಂತ ಸಿಕ್ಕಿ, ಪರಿಮಳನಿಗೆ ನಿನ್ನ ಗಂಡ ಮುಂದೆ ಬಹಳ ದೊಡ್ಡ ಸಾಧಕನಾಗುತ್ತಾನೆ ಎಂದಾಗ ಜೋರಾಗಿ ನಕ್ಕುಬಿಟ್ಟಳು ಅಂದು. ಇಂದು ಅದೆಲ್ಲ ನೆನಪು ಮಾಡಿಕೊಂಡರೆ ಹೇಗಪ್ಪ ಇದೆಲ್ಲಾ ಎನ್ನುತ್ತಾಳೆ. ರಾಯರ ಕಾರುಣ್ಯ ಹಾಗೆ ರಾಯರನ್ನು ಅನನ್ಯವಾಗಿ ನಂಬಿ ಕಾಯವಾಚಮನ ಶುದ್ಧಾತ್ಮನಾಗಿ ಉಳಿದರೆ ಬೇಡಿದ್ದು ನೀಡೋ ಕಾಮಧೇನು. ಕೊರೊನಾ ಸಂಕಷ್ಟ ಬಂದಾಗಿನಿಂದ ಸಂಕಲ್ಪ ಸೇವೆ ಮಾಡಲು ಆಗಲಿಲ್ಲಾ. ಎರಡೂವರೆ ವರ್ಷದ ಮೇಲೆ ಮತ್ತೆ ಬಂದು ನೆಲದಲ್ಲಿ ರಾಯರ ಸೇವೆ ಮಾಡುತ್ತಿರುವೆ. ನಿಮ್ಮ ಜೊತೆ ಹಂಚಿಕೊಳ್ಳುವ ಬೇಕು ಎಂದು ಮನಸಾಯಿತು ಲಗತ್ತಿಸಿಬಿಟ್ಟೆ ನನ್ನ ಭಾವನೆ. ಸಹಸ್ರದೋಷವಿರಲಿ ಬದುಕಲ್ಲಿ ಕಾಯವಾಚಮನ ರಾಯರ ನಂಬಿ ನಿಮ್ಮ ಬೆನ್ನಹಿಂದೆ ನಿಲ್ಲುವರು. ಬರಲು ಆಗದಿದ್ದರೆ ಮಂತ್ರಾಲಯಕ್ಕೆ ಚಿಂತೆಯಿಲ್ಲಾ ನಿಮ್ಮ ಬಡಾವಣೆಯ ರಾಯರಮಠವೆ ಸಾಕು ನಿಮ್ಮ ಕೂಗಿಗೆ ರಾಯರು ಕಣ್ಣುಬಿಡುತ್ತಾರೆ. ಶುಭಮಸ್ತು....