ಮಣ್ಣಲ್ಲಿ ಮಣ್ಣಾದ 'ಕಲಾ ತಪಸ್ವಿ' ನಟ ರಾಜೇಶ್

ಅಭಿಮಾನಿ ನೀಡಿದ ತುಮಕೂರ್ ರೋಡ್ ಬಳಿಯ ಗೋವಿಂದಪುರದ ಜಾಗವೊಂದರಲ್ಲಿ ಕಲಾ ತಪಸ್ವಿ ರಾಜೇಶ್ ಅವರನ್ನು ಮಣ್ಣು ಮಾಡಲಾಗಿದೆ. ನಟ ಅರ್ಜುನ್ ಸರ್ಜಾ ಅವರು ಮಾವನ ಪಾರ್ಥಿವ ಶರೀರವನ್ನು ಮಣ್ಣು ಮಾಡಲು ಹೆಗಲು ಕೊಟ್ಟಿದ್ದಾರೆ.

ಮಣ್ಣಲ್ಲಿ ಮಣ್ಣಾದ 'ಕಲಾ ತಪಸ್ವಿ' ನಟ ರಾಜೇಶ್
Linkup
ನಟ ಅವರ ಅಂತ್ಯಕ್ರಿಯೆಯು ತುಮಕೂರು ರೋಡ್ ಹತ್ತಿರದ ಜಾಗವೊಂದರಲ್ಲಿ ನಡೆದಿದೆ. ಈ ಹಿಂದೆ ಹೆಬ್ಬಾಳದಲ್ಲಿ ಮಾಡಲಿದ್ದೇವೆ ಎಂದು ಅವರ ಕುಟುಂಬಸ್ಥರು ಹೇಳಿದ್ದರು. ಆದರೆ ರಾಜೇಶ್ ಅಭಿಮಾನಿಯ ಮನವಿ ಮೇರೆಗೆ ಅಂತ್ಯಕ್ರಿಯೆ ಸ್ಥಳವನ್ನು ಬದಲಿಸಲಾಗಿದೆ. ರಾಜೇಶ್ ಅವರನ್ನು ಮಣ್ಣು ಮಾಡಲಾಗಿದೆ. "ರಾಜೇಶ್ ಅವರ ಅಭಿಮಾನಿಯೊಬ್ಬರು ತುಮಕೂರು ರೋಡ್‌ನ ಬಳಿ ಗೋವಿಂದಪುರದ ಸಂಜಯ್ ಖಾನ್ ಹೋಟೆಲ್ ಪಕ್ಕದಲ್ಲಿ 10 ಗುಂಟೆ ಜಾಗ ನೀಡಿ, ಅಲ್ಲಿಯೇ ರಾಜೇಶ್ ಅಂತ್ಯಕ್ರಿಯೆ ಮಾಡಬೇಕು ಎಂದು ಮನವಿ ಮಾಡಿದ್ದಾರಂತೆ. ಸಿದ್ದಲಿಂಗಯ್ಯ ಎಂಬುವವರು ರಾಜೇಶ್ ಅವರಿಗೆ ಆತ್ಮೀಯರಾಗಿದ್ದರು. ರಾಜೇಶ್ ಅವರು ಸಿದ್ದಲಿಂಗಯ್ಯ ಮನೆಗೆ, ಅವರ ಮನೆಯ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರಂತೆ. ನಾವು ಎಷ್ಟೇ ದುಡ್ಡು ಕೊಡುತ್ತೇವೆ ಎಂದು ಹೇಳಿದರೂ ಅವರು ಕೇಳಲಿಲ್ಲ. ಅವರಿಗೆ ಧನ್ಯವಾದಗಳು" ಎಂದು ನಟ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಶ್ರೀನಾಥ್, ಗಿರಿಜಾ ಲೋಕೇಶ್, ಅನು ಪ್ರಭಾಕರ್, ರಾಜೇಶ್ ಮೊಮ್ಮಕ್ಕಳಾದ ಐಶ್ವರ್ಯಾ, ರಾಕ್‌ಲೈನ್ ವೆಂಕಟೇಶ್, ತಾರಾ, ಸುಮಲತಾ ಮುಂತಾದವರು ರಾಜೇಶ್ ಅಂತಿಮ ದರ್ಶನ ಪಡೆದಿದ್ದಾರೆ. ರಾಜೇಶ್ ಸರ್ಜಾ ಅವರಿಗೆ 5 ಜನ ಮಕ್ಕಳು. ಮಗಳು ಆಶಾರಾಣಿಯನ್ನು ನಟ ಅರ್ಜುನ್ ಸರ್ಜಾ ಅವರಿಗೆ ರಾಜೇಶ್ ಧಾರೆಯೆರೆದು ಕೊಟ್ಟಿದ್ದರು. ಕಳೆದ 10 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಗೆ ರಾಜೇಶ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕನ್ನಡದ 150ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.