ವಾಣಿಜ್ಯ ಚಟುವಟಿಕೆ ನಡೆಸಲು ಕೊರೊನಾ ಲಸಿಕೆ 100% ಕಡ್ಡಾಯ: ಆಗಸ್ಟ್‌ 31 ಡೆಡ್‌ಲೈನ್ ನೀಡಿದೆ ಬಿಬಿಎಂಪಿ

ಕನಿಷ್ಟ ಪಕ್ಷ ಒಂದು ಡೋಸ್ ಲಸಿಕೆಯನ್ನಾದ್ರೂ ಎಲ್ಲಾ ಸಿಬ್ಬಂದಿಯೂ ಪಡೆದಿರಬೇಕು. ಜೊತೆಯಲ್ಲೇ, ಲಸಿಕೆ ಪಡೆದ ದಾಖಲೆಯನ್ನೂ ಹೊಂದಿರಬೇಕು ಎಂದು ಬಿಬಿಎಂಪಿ ತಿಳಿಸಿದೆ. ಇದಕ್ಕಾಗಿ ಆಗಸ್ಟ್‌ 31ರ ಡೆಡ್‌ಲೈನ್ ಕೂಡಾ ನೀಡಿದೆ.

ವಾಣಿಜ್ಯ ಚಟುವಟಿಕೆ ನಡೆಸಲು ಕೊರೊನಾ ಲಸಿಕೆ 100% ಕಡ್ಡಾಯ: ಆಗಸ್ಟ್‌ 31 ಡೆಡ್‌ಲೈನ್ ನೀಡಿದೆ ಬಿಬಿಎಂಪಿ
Linkup
: ರಾಜಧಾನಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೊಟೇಲ್ ಹಾಗೂ ಕಚೇರಿಗಳಲ್ಲಿ ಎಲ್ಲಾ ಸಿಬ್ಬಂದಿ ಕೊರೊನಾ ಪಡೆದಿರಲೇಬೇಕು ಎಂದು ಹೇಳಿದೆ. ಕನಿಷ್ಟ ಪಕ್ಷ ಒಂದು ಡೋಸ್ ಲಸಿಕೆಯನ್ನಾದ್ರೂ ಎಲ್ಲಾ ಸಿಬ್ಬಂದಿಯೂ ಪಡೆದಿರಬೇಕು. ಜೊತೆಯಲ್ಲೇ, ಲಸಿಕೆ ಪಡೆದ ದಾಖಲೆಯನ್ನೂ ಹೊಂದಿರಬೇಕು ಎಂದು ಬಿಬಿಎಂಪಿ ತಿಳಿಸಿದೆ. ಇದಕ್ಕಾಗಿ ಆಗಸ್ಟ್‌ 31ರ ಡೆಡ್‌ಲೈನ್ ಕೂಡಾ ನೀಡಿದೆ. ಒಂದು ವೇಳೆ ಆಗಸ್ಟ್‌ 31ರ ಒಳಗೆ ಯಾವುದೇ ವಾಣಿಜ್ಯ ಮಳಿಗೆಯ ಯಾವುದೇ ಸಿಬ್ಬಂದಿ ಲಸಿಕೆ ಪಡೆಯದೇ ಕಾರ್ಯನಿರ್ವಹಣೆ ಮಾಡುತ್ತಿದ್ದರೆ ದಂಡ ವಿಧಿಸೋದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಬೆಂಗಳೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೊಟೇಲ್ ಹಾಗೂ ಕಚೇರಿಗಳಿಗೆ ಬಿಬಿಎಂಪಿ ಮಾರ್ಷಲ್‌ಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸೆಪ್ಟೆಂಬರ್ 1 ರಿಂದ ಈ ಕಾರ್ಯಾಚರಣೆ ಆರಂಭವಾಗಲಿದೆ. ನಗರದ ಪ್ರತಿಯೊಂದು ವಾಣಿಜ್ಯ ಚಟುವಟಿಕೆ ಮೇಲೂ ಬಿಬಿಎಂಪಿ ಮಾರ್ಷಲ್‌ಗಳು ನಿಗಾ ವಹಿಸಲಿದ್ದು, ಎಲ್ಲ ಸಿಬ್ಬಂದಿಯೂ ಶೇ. 100ರಷ್ಟು ಲಸಿಕೆ ಪಡೆದಿದ್ದಾರೋ ಇಲ್ಲವೋ ಎಂದು ಪರಿಶೀಲನೆ ನಡೆಸಲಿದ್ದಾರೆ. ಇಲ್ಲವಾದ್ರೆ ದಂಡ ವಿಧಿಸಲಿದ್ದಾರೆ. ದಂಡ ಮಾತ್ರವಲ್ಲ, ಭಾರತೀಯ ದಂಡ ಸಂಹಿತೆ 188ರ ಅಡಿ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆ 1897ರ ಅಡಿಯಲ್ಲೂ ಶಿಕ್ಷೆ ವಿಧಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ. ವಾಣಿಜ್ಯ ಚಟುವಟಿಕೆ ನಡೆಸುವ ಸಂಸ್ಥೆಗಳ ಮಾಲೀಕರು ತಮ್ಮ ಸ್ವಂತ ಹಣದಿಂದ ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಸಿಬ್ಬಂದಿಗೆ ಲಸಿಕೆ ಹಾಕಿಸಬಹುದು ಅಥವಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದು. ಒಟ್ಟಿನಲ್ಲಿ ಲಸಿಕೆ ಪಡೆದಿರೋದು ಕಡ್ಡಾಯ ಎಂದು ಬಿಬಿಎಂಪಿ ತಿಳಿಸಿದೆ. ರಾಜ್ಯದಲ್ಲಿ ಸದ್ಯ ವೈರಸ್ ಸೋಂಕು ನಿಧಾನವಾಗಿ ಕುಗ್ಗುತ್ತಿದೆ. ಇಂಥಾ ಹೊತ್ತಲ್ಲಿ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಸರಕಾರ ಮುಕ್ತ ಅವಕಾಶ ನೀಡುತ್ತಿದೆ. ಹೀಗಾಗಿ, ಕೋವಿಡ್ ನಿಯಮಾವಳಿಗಳನ್ನು ಪಾಲಿಸುವ ಜೊತೆಯಲ್ಲೇ, ಎಲ್ಲ ಸಿಬ್ಬಂದಿಯೂ ಶೇ.100ರಷ್ಟು ಲಸಿಕೆ ಪಡೆದಿರೋದು ಕಡ್ಡಾಯ ಎಂದು ಬಿಬಿಎಂಪಿ ಹೇಳಿದೆ. ಯಾವುದೇ ಒಬ್ಬ ಸಿಬ್ಬಂದಿಯೂ ಕನಿಷ್ಟ 1 ಡೋಸ್ ಲಸಿಕೆಯನ್ನಾದ್ರೂ ಪಡೆಯದೆ ಕಾರ್ಯ ನಿರ್ವಹಿಸುವಂತಿಲ್ಲ ಎಂದು ನಿಬಂಧನೆ ರೂಪಿಸಲಾಗಿದೆ. ಕೊರೊನಾ 3ನೇ ಅಲೆ ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಬಿಗಿ ಕ್ರಮ ಕೈಗೊಂಡಿದೆ.