ಹೂಗಳಿಂದ ಸುಗಂಧಭರಿತ ಊದುಬತ್ತಿ; ಐಐಎಚ್‌ಆರ್‌ ನಿಂದ ಸಂಶೋಧನೆ, ಮಾಲಿನ್ಯ ತಡೆಗೆ ಸಹಕಾರಿ!

ಹಲವು ದೇವಾಲಯಗಳಲ್ಲಿ ನಿತ್ಯವೂ ಸಾಕಷ್ಟು ಪ್ರಮಾಣದಲ್ಲಿ ಹೂವು ಬಳಕೆಯಾಗುತ್ತದೆ. ಬಳಸಿದ ಬಳಿಕ ಹೆಚ್ಚಿನ ಕಡೆ ಹೂವುಗಳು ಕಸದ ಬುಟ್ಟಿ ಸೇರುತ್ತಿವೆ. ಕಸ ನಿರ್ವಹಣೆಯೇ ಸವಾಲಾಗಿರುವ ಈ ದಿನಗಳಲ್ಲಿ ಹೂವನ್ನು ಅಗರಬತ್ತಿಯಂತಹ ಉತ್ಪನ್ನ ತಯಾರಿಗೆ ಬಳಸಿದಲ್ಲಿ ತ್ಯಾಜ್ಯ ಪ್ರಮಾಣದಲ್ಲಿ ಕೊಂಚ ಇಳಿಕೆ ಸಾಧ್ಯವಿದೆ.

ಹೂಗಳಿಂದ ಸುಗಂಧಭರಿತ ಊದುಬತ್ತಿ; ಐಐಎಚ್‌ಆರ್‌ ನಿಂದ ಸಂಶೋಧನೆ, ಮಾಲಿನ್ಯ ತಡೆಗೆ ಸಹಕಾರಿ!
Linkup
ಎಚ್‌.ಪಿ. ಪುಣ್ಯವತಿ, ಬೆಂಗಳೂರು ಬೆಂಗಳೂರು: ಬಳಸಿ ಎಸೆಯುವ ಹೂವುಗಳಿಂದ ತಯಾರಿಸುವ ನಿಟ್ಟಿನಲ್ಲಿ ಹೆಸರಘಟ್ಟದ ()ಯ ವಿಜ್ಞಾನಿಗಳ ತಂಡ ಕೈಗೊಂಡಿದೆ. ಐಐಎಚ್‌ಆರ್‌ನ 'ಪುಷ್ಪ ಮತ್ತು ಮತ್ತು ಔಷಧೀಯ ಬೆಳೆ'ಗಳ ವಿಭಾಗದ ಹಿರಿಯ ವಿಜ್ಞಾನಿ ಡಾ. ಜಿ.ಆರ್‌. ಸ್ಮಿತಾ ನೇತೃತ್ವದಲ್ಲಿ ಐವರ ತಂಡದಿಂದ ಸಂಶೋಧನೆ ಕೈಗೊಳ್ಳಲಾಗುತ್ತಿದೆ. ತಂತ್ರಜ್ಞಾನ ಅಭಿವೃದ್ಧಿ ಪೂರ್ಣಗೊಂಡ ಬಳಿಕ ಆಸಕ್ತ ಉದ್ಯಮಿಗಳಿಗೆ ಪರವಾನಗಿ ನೀಡಲು ಉದ್ದೇಶಿಸಲಾಗಿದೆ. ಹಲವು ದೇವಾಲಯಗಳಲ್ಲಿ ನಿತ್ಯವೂ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಬಳಸಿದ ಬಳಿಕ ಹೆಚ್ಚಿನ ಕಡೆ ಹೂವುಗಳು ಕಸದ ಬುಟ್ಟಿ ಸೇರುತ್ತಿವೆ. ಕಸ ನಿರ್ವಹಣೆಯೇ ಸವಾಲಾಗಿರುವ ಈ ದಿನಗಳಲ್ಲಿ ಹೂವನ್ನು ಅಗರಬತ್ತಿಯಂತಹ ಉತ್ಪನ್ನ ತಯಾರಿಗೆ ಬಳಸಿದಲ್ಲಿ ತ್ಯಾಜ್ಯ ಪ್ರಮಾಣದಲ್ಲಿ ಕೊಂಚ ಇಳಿಕೆ ಸಾಧ್ಯವಿದೆ. ಧಾರ್ಮಿಕ ಉದ್ದೇಶಗಳಿಗೆ ಬಳಸುವ ಹೂಗಳನ್ನು ನದಿ, ಕೆರೆಗಳಿಗೆ ಎಸೆಯುತ್ತಿರುವುದು ಜಲಮಾಲಿನ್ಯಕ್ಕೆ ಕಾರಣವಾಗಿದೆ. ಉಪ ಉತ್ಪನ್ನ ತಯಾರಿಗೆ ಪರ್ಯಾಯ ಮಾರ್ಗ ಕಂಡುಕೊಂಡಲ್ಲಿ ಮೌಲ್ಯವರ್ಧನೆಯೂ ಆಗಲಿದೆ. ಆರೋಗ್ಯಕ್ಕೆ ಪೂರಕ ಸಾಮಾನ್ಯವಾಗಿ ಊದುಬತ್ತಿಯಲ್ಲಿ ಚಾರ್‌ಕೋಲ್‌ ಬಳಲಾಗುತ್ತದೆ. ಹೀಗೆ ಬಳಸಿದ ಚಾರ್‌ಕೋಲ್‌ ಉರಿದು ಅದರಿಂದ ಹೊಮ್ಮುವ ಹೊಗೆಯು ಅಸ್ತಮಾ ಮತ್ತಿತರ ಶ್ವಾಸಕೋಶ ಸಂಬಂಧಿ ಕಾಯಿಲೆಗಳುಳ್ಳವರಿಗೆ ಅಪಾಯ ತಂದೊಡ್ಡುತ್ತದೆ. ಐಐಎಚ್‌ಆರ್‌ ಅಭಿವೃದ್ಧಿಪಡಿಸುತ್ತಿರುವ ತಂತ್ರಜ್ಞಾನದಲ್ಲಿ ಊದುಬತ್ತಿ ತಯಾರಿಗೆ ಚಾರ್‌ಕೋಲ್‌ ಬಳಸುವುದಿಲ್ಲ. ಬದಲಿಗೆ ಒಣಗಿದ ಹೂವಿನ ಪುಡಿಯನ್ನಷ್ಟೇ ಬಳಸಲಾಗುವುದು. ಇದು ಊದುಬತ್ತಿ ಬಳಕೆ ಆರೋಗ್ಯಕ್ಕೂ ಪೂರಕವಾಗಿರಲಿದೆ. ಎಲ್ಲಾ ಹೂಗಳಿಂದಲೂ ತಯಾರಿ ಸಾಧ್ಯ ಕೆಲವು ಹೂವುಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಮತ್ತೆ ಕೆಲವನ್ನು ಗಾಳಿಯಲ್ಲಿ, ಓವನ್‌ನಲ್ಲಿ ಒಣಗಿಸಲಾಗುತ್ತದೆ. ನಾನಾ ರೀತಿಯ ಹೂವುಗಳನ್ನು ಬೇರೆ ಬೇರೆ ವಿಧಾನದಲ್ಲಿಒಣಗಿಸಿಟ್ಟು, ಅದನ್ನು ಪುಡಿಮಾಡಿ ಊದುಬತ್ತಿ ತಯಾರಿಗೆ ಬಳಸಲಾಗುತ್ತದೆ. ಎಲ್ಲ ಬಗೆಯ ಹೂಗಳಲ್ಲೂ ಊದುಬತ್ತಿ ತಯಾರಿಸಬಹುದು. ಆಯಾ ಋುತುಮಾನದಲ್ಲಿ ಸಿಗುವ ಹೂಗಳನ್ನು ಇದಕ್ಕೆ ಬಳಸಲಾಗುವುದು. ಏಕ ಪುಷ್ಪ ಹಾಗೂ ಮಿಶ್ರಿತ ಪುಷ್ಪಗಳಿಂದ ಸುವಾಸನೆಯುಕ್ತ ಊದುಬತ್ತಿ ತಯಾರಿಸಬಹುದು. ಬಳಸಿ ಎಸೆಯುವ ಹೂಗಳನ್ನು ಸಂಗ್ರಹಿಸಿ, ಅದರಲ್ಲಿ ಕಸ ಮತ್ತು ಹೂಗಳನ್ನು ಬೇರ್ಪಡಿಸಲಾಗುವುದು. ನಂತರ ಅದನ್ನು ಒಣಗಿಸಿ ಪುಡಿ ಮಾಡಲಾಗುತ್ತದೆ. ಇವುಗಳನ್ನು ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಇತರರು ನಿರ್ವಹಿಸಲು ಸಾಧ್ಯವಿದೆ. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಅವಕಾಶವಿದೆ. ಡಾ. ಜಿ.ಆರ್‌. ಸ್ಮಿತಾ, ಹಿರಿಯ ವಿಜ್ಞಾನಿ, ಪುಷ್ಪ ಮತ್ತು ಔಷಧೀಯ ಬೆಳೆಗಳ ವಿಭಾಗ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ