ಬೆಂಗಳೂರು: ಸೆವೆನ್‌ ಸ್ಟಾರ್‌ ಹೋಟೆಲ್‌ಗೆ ನುಗ್ಗಿ ದಾಂಧಲೆ ನಡೆಸಿದ ಐವರು ಪುಂಡರ ಬಂಧನ

'ಲೋಕಲ್‌ ಹುಡುಗರ ಪವರ್‌ ತೋರಿಸುತ್ತೇವೆ' ಎಂದು ಹೇಳಿ ಕರೆ ಮಾಡಿ ಆರು ಮಂದಿ ಹುಡುಗರನ್ನು ಕರೆಸಿದ ಪುಂಡರು, ಏಳು ಮಂದಿ ದಾಂಧಲೆಕೋರರು ಕಲ್ಲಿನಿಂದ ಹೋಟೆಲ್‌ ಗಾಜಿಗೆ ಹೊಡೆದಿದ್ದಾರೆ. ಇವರನ್ನು ತಡೆದು ಸಮಾಧಾನ ಮಾಡಲು ಬಂದ ಹೋಟೆಲ್‌ ಮಾಲೀಕ ಹರೀಶ್‌ ಹಾಗೂ ಅವರ ತಂದೆ ಆಂಜನೇಯಲು ಕೊಂಡೇಟಿ ಅವರ ಮೇಲೂ ಹೇಮಂತ್‌, ಶರತ್‌, ಚಂದನ್‌ ಹಲ್ಲೆ ನಡೆಸಿದ್ದಾರೆ.

ಬೆಂಗಳೂರು: ಸೆವೆನ್‌ ಸ್ಟಾರ್‌ ಹೋಟೆಲ್‌ಗೆ ನುಗ್ಗಿ ದಾಂಧಲೆ ನಡೆಸಿದ ಐವರು ಪುಂಡರ ಬಂಧನ
Linkup
ಬೆಂಗಳೂರು: ನಗರದ ‘7 ಸ್ಟಾರ್‌ ಮಲ್ಟಿ ಕುಷೇನ್‌ ಹೋಟೆಲ್‌ ಮತ್ತು ರೆಸ್ಟೋರೆಂಟ್‌'ಗೆ ನುಗ್ಗಿ ದಾಂಧಲೆ ನಡೆಸಿದ ಐವರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೋಟೆಲ್‌ ಮಾಲೀಕ ಹರೀಶ್‌ ಕೊಂಡೇಟಿ ನೀಡಿದ ದೂರಿನ ಮೇರೆಗೆ ಶಿವರಾಜ್‌, ಹೇಮಂತ್‌, ಶರತ್‌ ಹಾಗೂ ಚಂದನ್‌ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಅಮೃತಹಳ್ಳಿಯ ಭುವನೇಶ್ವರಿ ಮುಖ್ಯ ರಸ್ತೆಯಲ್ಲಿರುವ '7 ಸ್ಟಾರ್‌ ಮಲ್ಟಿ ಕುಷೇನ್‌ ಹೋಟೆಲ್‌ ರೆಸ್ಟೋರೆಂಟ್‌'ನಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಊಟ ಪಾರ್ಸಲ್‌ ಕೊಡಲಾಗುತ್ತಿತ್ತು. ಹೋಟೆಲ್‌ನಲ್ಲಿ ಮನೀಶ್‌ ಎಂಬ ಯುವಕ ಅರೆಕಾಲಿಕ ಕೆಲಸ ಮಾಡುತ್ತಿದ್ದ. ಜು.4ರಂದು ರಾತ್ರಿ 8.30ರ ಸಮಯದಲ್ಲಿ ಮನೀಶ್‌ನನ್ನು ಕೇಳಿಕೊಂಡು ಶಿವರಾಜ್‌ ಹಾಗೂ ಆತನ ಸಹಚರರು ಬಂದಿದ್ದರು. ಹೋಟೆಲ್‌ ಮಾಲೀಕ ಹರೀಶ್‌, ಮನೀಶ್‌ ಊಟ ಡೆಲಿವರಿ ಮಾಡಲು ಹೋಗಿದ್ದು, ಬರುವವರೆಗೂ ಕಾಯುವಂತೆ ತಿಳಿಸಿದ್ದಾರೆ. ಈ ವೇಳೆ ತಕ್ಷಣವೇ ಕರೆಸುವಂತೆ ಮಾಲೀಕರಿಗೆ ದುಷ್ಕರ್ಮಿಗಳು ಸೂಚಿಸಿದ್ದಾರೆ. ಊಟ ಪಾರ್ಸಲ್‌ ಕೊಡಲು ಹೋಗಿರುವುದರಿಂದ ತಕ್ಷಣವೇ ಮನೀಶ್‌ ಬರಲು ಸಾಧ್ಯವಿಲ್ಲ ಎಂದಿದ್ದಾರೆ. ಈ ವೇಳೆ ಶಿವರಾಜು ಹುಡುಗರು ಹೋಟೆಲ್‌ ಮಾಲೀಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, 'ಲೋಕಲ್‌ ಹುಡುಗರ ಪವರ್‌ ತೋರಿಸುತ್ತೇವೆ' ಎಂದು ಹೇಳಿ ಕರೆ ಮಾಡಿ ಆರು ಮಂದಿ ಹುಡುಗರನ್ನು ಕರೆಸಿದ್ದಾನೆ. ಏಳು ಮಂದಿ ದಾಂಧಲೆಕೋರರು ಕಲ್ಲಿನಿಂದ ಹೋಟೆಲ್‌ ಗಾಜಿಗೆ ಹೊಡೆದಿದ್ದಾರೆ. ಇವರನ್ನು ತಡೆದು ಸಮಾಧಾನ ಮಾಡಲು ಬಂದ ಹೋಟೆಲ್‌ ಮಾಲೀಕ ಹರೀಶ್‌ ಹಾಗೂ ಅವರ ತಂದೆ ಆಂಜನೇಯಲು ಕೊಂಡೇಟಿ ಅವರ ಮೇಲೂ ಹೇಮಂತ್‌, ಶರತ್‌, ಚಂದನ್‌ ಹಲ್ಲೆ ನಡೆಸಿದ್ದಾರೆ. ಗಲಾಟೆಯ ಶಬ್ದ ಕೇಳಿ ಸುತ್ತಮುತ್ತಲ ಜನ ಗುಂಪುಗೂಡುತ್ತಿದ್ದಂತೆ ಹಲ್ಲೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಆಂಜನೇಯಲು ಕೊಂಡೇಟಿ ಅವರನ್ನು ಯಲಹಂಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಹರೀಶ್‌ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹೋಟೆಲ್‌ ಮೇಲೆ ದಾಂಧಲೆ ನಡೆಸಿದಾಗ ಐದು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ನಾಶ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.