ಕೊರೊನಾ ವೈರಸ್ ಇಲ್ಲ ಅಂದವರಿಗೆ ಕಪಾಳಕ್ಕೆ ಹೊಡೆಯಿರಿ: ಕನ್ನಡ ನಟಿ ಸುನೇತ್ರಾ ಪಂಡಿತ್!

ನಟಿ / ಕಂಠದಾನ ಕಲಾವಿದೆ ಸುನೇತ್ರಾ ಪಂಡಿತ್ ಅವರ ಅಕ್ಕ ಕೊರೊನಾ ವೈರಸ್‌ನಿಂದ ನಿಧನರಾಗಿದ್ದಾರೆ. ಕೊರೊನಾ ವೈರಸ್‌ನಿಂದ ಆಗುತ್ತಿರುವ ಕಷ್ಟಗಳ ಬಗ್ಗೆ ಸುನೇತ್ರಾ ಮಾತನಾಡಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಕೊರೊನಾ ವೈರಸ್ ಇಲ್ಲ ಅಂದವರಿಗೆ ಕಪಾಳಕ್ಕೆ ಹೊಡೆಯಿರಿ: ಕನ್ನಡ ನಟಿ ಸುನೇತ್ರಾ ಪಂಡಿತ್!
Linkup
ನಟಿ, ಕಂಠದಾನ ಕಲಾವಿದೆ ಅವರ ಅಕ್ಕ ಕೊರೊನಾ ವೈರಸ್‌ನಿಂದ ನಿಧನರಾಗಿದ್ದಾರೆ. ಈ ಬಗ್ಗೆ ನಟ ಹಾಗೂ ಸುನೇತ್ರಾ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಇಲ್ಲ, ಮಾಧ್ಯಮಗಳು ಹೆದರಿಸುತ್ತವೆ ಎಂದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದ್ದಾರೆ. "ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಸಾಕಷ್ಟು ಅನುಭವಿಸಿದ್ದೇವೆ. ಗಾರೆ ಕೆಲಸ ಮಾಡುವವನು, ಕೂಲಿ ಮಾಡುವವನು ಅಂದು ದುಡಿಮೆ ಮಾಡಿಕೊಂಡು, ಅಂದೇ ಊಟ ಮಾಡುವವನ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಿ. ಚಾಕು ತೋರಿಸಿ ದುಡ್ಡು ವಸೂಲಿ ಮಾಡುವುದು ಶುರುವಾಗಿದೆ. ರಾತ್ರಿ ಹೀಗಾದರೆ ಏನು ಮಾಡ್ತೀರಿ? ಪೊಲೀಸ್‌ ಸ್ಟೇಶನ್‌ನಲ್ಲಿ ಸಿಬ್ಬಂದಿಗಳು ಕಡಿಮೆ ಇದ್ದಾರೆ. ಏನು ಮಾಡಬೇಕು?" ಎಂದು ರಮೇಶ್ ಪಂಡಿತ್ ಹೇಳಿದ್ದಾರೆ. "ಒಂದು ದಿನ ಕೇರ್‌ಲೆಸ್ ಆಗಿದ್ದಕ್ಕೆ ನನ್ನ ಅಕ್ಕ ಹೋದಳು. ಬಿಬಿಎಂಪಿ ಅವರು ಐಸಿಯು ಇರುವ ಆಸ್ಪತ್ರೆ ಮಾಡಿಸಿ. ಕೊರೊನಾ ರೋಗಿಗಳಿಗೆ ಎಲ್ಲ ಸೌಕರ್ಯ ಇರುವ ಆಸ್ಪತ್ರೆಗಳ ವ್ಯವಸ್ಥೆ ಮಾಡಿ. ಎಲ್ಲರಿಗೂ ಪ್ರೆಶರ್ ಇದೆ. ನಮ್ಮ ಅಕ್ಕ ಹೋಗಿಬಿಟ್ಲು, ನಾನು ಸತ್ತರೂ ನಾನು ಅವಳನ್ನು ಕರೆದುಕೊಂಡು ಬರೋಕೆ ಆಗಲ್ಲ. ಮಕ್ಕಳಿದ್ದಾರೆ. ಏನು ಮಾಡಬೇಕು?" ಎಂದು ಸುನೇತ್ರಾ ಪಂಡಿತ್ ಹೇಳಿದ್ದಾರೆ. "ಯಾರೋ ಏನೋ ಸಹಾಯ ಮಾಡ್ತಾರೆ, ಔಷಧಿ ಕೊಡ್ತಾರೆ ಅನ್ನೋದನ್ನೆಲ್ಲ ಬಿಡಿ, ಅದೆಲ್ಲ ಬೇಡ, ಗಾಳಿಯಿಂದ ಹರಡೋಕೆ ಶುರುವಾಗಿದೆ. ಸಾರ್ವಜನಿಕರು ದಯವಿಟ್ಟು ಹುಷಾರಾಗಿರಿ. ಒಬ್ಬರು ಹುಷಾರಾಗಿದ್ರೆ 10 ಜನರು ಆರೋಗ್ಯವಾಗಿರುತ್ತಾರೆ. ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಿ" ಎಂದು ರಮೇಶ್ ಪಂಡಿತ್ ಹೇಳಿದ್ದಾರೆ. ಕೊರೊನಾ ಇಲ್ಲ ಅಂದವರಿಗೆ ಕಪಾಳಕ್ಕೆ ಹೊಡೆಯಿರಿ. ಕೊರೊನಾ ವೈರಸ್ ಇಲ್ಲ ಅಂದರೆ ಯಾಕೆ ಲಾಕ್‌ಡೌನ್ ಮಾಡಬೇಕಿತ್ತು? ಕೊರೊನಾ ಇದೆ ಅಂತ ಸುದ್ದಿ ಮಾಧ್ಯಮದಲ್ಲಿ ತೋರಿಸಿದ್ರೆ ಕೊಂಬು ಬರತ್ತಾ? ಕೊರೊನಾ ವೈರಸ್ ಆದ ಮನೆಯವರಿಗೆ ಮಾತ್ರ ಅದರ ಕಷ್ಟ ಗೊತ್ತಿರತ್ತೆ. ಇಷ್ಟು ಜನರು ಸಾಯುತ್ತಿಲ್ಲವಾ? ಈ ರೀತಿ ನಿರ್ಲಕ್ಷ್ಯ ಮಾಡುವವರಿಂದ ಕೊರೊನಾ ಹೆಚ್ಚುತ್ತಿದೆ. ಮಾಧ್ಯಮವನ್ನು ಯಾಕೆ ದೂ‍ಷಿಸ್ತಿದ್ದೀರಾ? ಕೊರೊನಾ ವೈರಸ್ ಎರಡನೇ ಅಲೆ ತುಂಬ ಡೇಂಜರಸ್ ಆಗಿದೆ. ಕೊರೊನಾ ವೈರಸ್ ಇಲ್ಲ ಎನ್ನುವವರಿಗೆ ಬದುಕುವ ಹಕ್ಕೇ ಇಲ್ಲ" ಅಂತ ಸುನೇತ್ರಾ ಪಂಡಿತ್ ಹೇಳಿದ್ದಾರೆ.