'ಉಸಿರು' ತಂಡದಿಂದ ಪೂರ್ಣಗೊಂಡ ನಟ ಸಂಚಾರಿ ವಿಜಯ್ ಅವರ ಕೊನೆಯ ಆಸೆ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಅವರ ಆಸೆಯೊಂದನ್ನು 'ಉಸಿರು' ತಂಡ ಪೂರ್ಣಗೊಳಿಸಿದೆ.

'ಉಸಿರು' ತಂಡದಿಂದ ಪೂರ್ಣಗೊಂಡ ನಟ ಸಂಚಾರಿ ವಿಜಯ್ ಅವರ ಕೊನೆಯ ಆಸೆ
Linkup
'ನಾನು ಅವನಲ್ಲ, ಅವಳು' ಚಿತ್ರದಲ್ಲಿನ ಅಮೋಘ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟ ಅವರ ಆಸೆಯೊಂದನ್ನು '' ತಂಡ ಪೂರ್ಣಗೊಳಿಸಿದೆ. ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಮೇಲ್ಚಾವಣಿಗಳಿಗೆ 'ಉಸಿರು' ತಂಡ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆ ಹೊದಿಸಿದೆ. ಕೋವಿಡ್ ಎರಡನೇ ಅಲೆ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಜನರಿಗೆ ಆಕ್ಸಿಜನ್ ನೀಡುವ ಸಲುವಾಗಿ ರೂಪುಗೊಂಡ 'ಉಸಿರು' ತಂಡದಲ್ಲಿ ಸಂಚಾರಿ ವಿಜಯ್ ಕೂಡ ಇದ್ದರು. 'ಉಸಿರು' ತಂಡದ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಂಚಾರಿ ವಿಜಯ್ ಮುಂದಾಗಿದ್ದರು. ಆದರೆ, ಅದೆಲ್ಲ ಕಾರ್ಯರೂಪಕ್ಕೆ ಬರುವ ಮುನ್ನವೇ ಅಪಘಾತದಿಂದಾಗಿ ಸಂಚಾರಿ ವಿಜಯ್ ಇಹಲೋಕ ತ್ಯಜಿಸಿಬಿಟ್ಟರು. 'ಉಸಿರು' ತಂಡದಲ್ಲಿದ್ದಾಗ, ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಮೇಲ್ಚಾವಣಿಗಳಿಗೆ ಟಾರ್ಪಲ್ ಹೊದಿಕೆ ಹೊದಿಸುವ ಬಗ್ಗೆ ಹಾಗೂ ಗುಲ್ಬರ್ಗ ಜಿಲ್ಲೆಯ ಬಡ ಹೆಣ್ಣು ಮಗುವೊಂದಕ್ಕೆ ಹೃದಯ ಚಿಕಿತ್ಸೆಗೆ ನೆರವಾಗುವ ಬಗ್ಗೆ 'ಉಸಿರು' ತಂಡದ ಸದಸ್ಯರ ಜೊತೆ ಸಂಚಾರಿ ವಿಜಯ್ ಚರ್ಚೆ ಮಾಡಿದ್ದರು. ಸಂಚಾರಿ ವಿಜಯ್ ನಿಧನದ ಬಳಿಕ, ಅವರ ಗೌರವಾರ್ಥವಾಗಿ, ಸಂಚಾರಿ ವಿಜಯ್‌ ಅವರ ಆಸೆಯನ್ನು ನೆರವೇರಿಸಲು 'ಉಸಿರು' ತಂಡ ಮುಂದಾಯಿತು. ಇತ್ತೀಚೆಗಷ್ಟೇ ಟಾರ್ಪಲ್ ಹೊದಿಕೆ ಹೊದಿಸಲು ಅಳತೆ ತೆಗೆದುಕೊಂಡಿದ್ದ 'ಉಸಿರು' ತಂಡ ಇದೀಗ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಶಿಥಿಲಗೊಂಡ ಮೇಲ್ಚಾವಣಿಗಳಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆಯನ್ನು ಹೊದಿಸಿದೆ. ಆ ಮೂಲಕ ಸಂಚಾರಿ ವಿಜಯ್ ಅವರ ಆಸೆ ನೆರವೇರಿಸಿ, 'ಉಸಿರು' ತಂಡ ಗೌರವ ನಮನ ಸಲ್ಲಿಸಿದೆ. 'ಉಸಿರು' ತಂಡದಲ್ಲಿ ಯಾರ್ಯಾರಿದ್ದಾರೆ? 'ಉಸಿರು' ತಂಡದಲ್ಲಿ ನಿರ್ದೇಶಕ ಕವಿರಾಜ್, ನಿರ್ದೇಶಕಿ ಕವಿತಾ ಲಂಕೇಶ್, ನಿರ್ದೇಶಕ ದಿನಕರ್ ತೂಗುದೀಪ, ಸಾಧು ಕೋಕಿಲ, ಚೈತನ್ಯ, ನೀತು ಶೆಟ್ಟಿ, ಸಂಚಾರಿ ವಿಜಯ್, ಅಕ್ಷತಾ ಪಾಂಡವಪುರ, ಸುಂದರ್ ಮುಂತಾದವರಿದ್ದಾರೆ. ಬೈಕ್ ಅಪಘಾತದಿಂದಾಗಿ ಕೊನೆಯುಸಿರೆಳೆದ ಸಂಚಾರಿ ವಿಜಯ್ ಜೆಪಿ ನಗರದ ಏಳನೇ ಹಂತದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಂಚಾರಿ ವಿಜಯ್ ತೀವ್ರವಾಗಿ ಗಾಯಗೊಂಡಿದ್ದರು. ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಸಂಚಾರಿ ವಿಜಯ್ ತಲೆ ಮತ್ತು ತೊಡೆ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಬ್ರೇನ್ ಫೇಲ್ಯೂರ್ ಮತ್ತು ಬ್ರೇನ್ ಡೆಡ್ ಆದ ಪರಿಣಾಮ ಸಂಚಾರಿ ವಿಜಯ್ ಕೊನೆಯುಸಿರೆಳೆದರು.