ಇಳಿಕೆಯಾಗದ ಕೋವಿಡ್ ಪ್ರಕರಣ: ಆರು ರಾಜ್ಯಗಳಿಗೆ ದೌಡಾಯಿಸಿದ ಕೇಂದ್ರ ತಂಡಗಳು

ಅತ್ಯಧಿಕ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಆರು ರಾಜ್ಯಗಳಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳು ಮತ್ತು ಅವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಉನ್ನತ ಮಟ್ಟದ ತಂಡಗಳನ್ನು ಕೇಂದ್ರ ಸರಕಾರ ರವಾನಿಸಿದೆ.

ಇಳಿಕೆಯಾಗದ ಕೋವಿಡ್ ಪ್ರಕರಣ: ಆರು ರಾಜ್ಯಗಳಿಗೆ ದೌಡಾಯಿಸಿದ ಕೇಂದ್ರ ತಂಡಗಳು
Linkup
ಹೊಸದಿಲ್ಲಿ: ದೇಶದಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಆದರೆ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬರಲು ಸಾಧ್ಯವಾಗಿಲ್ಲ. ಅದರಲ್ಲಿಯೂ ಆರು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಅಧಿಕ ಪ್ರಮಾಣದಲ್ಲಿಯೇ ಇದೆ. ಹೀಗಾಗಿ ಕೇಂದ್ರ ಸರಕಾರ ತನ್ನ ಉನ್ನತ ಮಟ್ಟದ ಬಹು-ವಿಭಾಗೀಯ ಸಾರ್ವಜನಿಕ ಆರೋಗ್ಯ ತಂಡಗಳನ್ನು ಆರು ರಾಜ್ಯಗಳಿಗೆ ರವಾನಿಸಿದೆ. ಕೇರಳ, ಅರುಣಾಚಲ ಪ್ರದೇಶ, ತ್ರಿಪುರಾ, ಒಡಿಶಾ, ಛತ್ತೀಸಗಡ ಮತ್ತು ಮಣಿಪುರಗಳಿಗೆ ಈ ತಂಡಗಳು ತೆರಳಿದ್ದು, ಕೋವಿಡ್ 19 ನಿಯಂತ್ರಣ ಮತ್ತು ಕಂಟೇನ್ಮೆಂಟ್ ಕ್ರಮಗಳ ವಿಚಾರವಾಗಿ ರಾಜ್ಯಗಳಿಗೆ ನೆರವು ನೀಡಲಿವೆ ಎಂದು ಶುಕ್ರವಾರ ತಿಳಿಸಿದೆ. ಈ ತಂಡಗಳು ಆಯಾ ರಾಜ್ಯಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಸಮಸ್ಯೆಗಳನ್ನು ಮೊದಲ ಅರ್ಥಮಾಡಿಕೊಳ್ಳಲಿವೆ. ಬಳಿಕ ಪ್ರತಿಬಂಧಕಗಳನ್ನು ನಿವಾರಿಸುವ ಮೂಲಕ ಅವರ ಚಟುವಟಿಕೆಗಳನ್ನು ಬಲಪಡಿಸಲಿವೆ ಎಂದು ಸಚಿವಾಲಯ ಹೇಳಿದೆ. ಈ ರಾಜ್ಯಗಳಿಗೆ ತೆರಳುವ ಇಬ್ಬರು ಸದಸ್ಯರ ಕ್ಲಿನಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಪರಿಣತರನ್ನು ಒಳಗೊಂಡಿದೆ. ಈ ಆರೂ ರಾಜ್ಯಗಳಲ್ಲಿನ ಕೋವಿಡ್ ಪ್ರತಿಕ್ರಿಯೆ ಮತ್ತು ನಿರ್ವಹಣೆ ಗುರಿಯ ಪ್ರಯತ್ನಗಳಿಗೆ ನೆರವು ನೀಡಲಿದ್ದು, ಸಾಂಕ್ರಾಮಿಕವನ್ನು ಎದುರಿಸುವಲ್ಲಿ ಸಹಾಯ ಮಾಡಲಿವೆ. ಈ ತಂಡಗಳು ಆಯಾ ರಾಜ್ಯಗಳಿಗೆ ಕೂಡಲೇ ತೆರಳಲಿವೆ. ಪರೀಕ್ಷೆ, ಪರಿವೀಕ್ಷಣೆ, ಕೋವಿಡ್ ನಿಯಮಾವಳಿಗಳ ಪಾಲನೆ ಹಾಗೂ ಅವುಗಳ ಜಾರಿ, ಆಸ್ಪತ್ರೆ ಹಾಸಿಗೆಗಳ ಲಭ್ಯತೆ, ಆಂಬುಲೆನ್ಸ್, ವೆಂಟಿಲೇರ್, ವೈದ್ಯಕೀಯ ಆಕ್ಸಿಜನ್ ಮುಂತಾದವುಗಳು ಸಾಕಷ್ಟು ಪ್ರಮಾಣದಲ್ಲಿ ಇವೆಯೇ ಹಾಗೂ ಕೋವಿಡ್ ಲಸಿಕೆ ಪ್ರಗತಿ ಸೇರಿದಂತೆ ಒಟ್ಟಾರೆ ಅನುಷ್ಠಾನವನ್ನು ಪರಿಶೀಲಿಸಲಿವೆ. ಪರಿಸ್ಥಿತಿಯನ್ನು ಅವಲೋಕಿಸುವ ತಂಡಗಳು, ಪರಿಹಾರೋಪಾಯಗಳನ್ನು ಒದಗಿಸಲಿದೆ ಎಂದು ಹೇಳಿದೆ. ಶುಕ್ರವಾರದ ಕೋವಿಡ್ ವರದಿಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 46,617 ಕೋವಿಡ್ ಪ್ರಕರಣಗಳು ವರದಿಯಾಗಿವೆ. 853 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟಾರೆ ಕೋವಿಡ್ ಸಾವಿನ ಸಂಖ್ಯೆ ನಾಲ್ಕು ಲಕ್ಷದ ಗಡಿ ದಾಟಿದೆ. ಸಕ್ರಿಯ ಪ್ರಕರಣಗಳು 5,09,637ಕ್ಕೆ ಇಳಿಕೆಯಾಗಿದೆ. ದೇಶದ ಚೇತರಿಕೆ ಪ್ರಮಾಣ ಶೇ 97ಕ್ಕೆ ತಲುಪಿದೆ.