Coronavirus Third Wave: ಗಮನಿಸಿ - ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನ ನಿರ್ಬಂಧ ಸೆ.30ರವರೆಗೆ ಮುಂದುವರಿಕೆ!

ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನದ ಮೇಲಿನ ನಿರ್ಬಂಧವನ್ನು ಸೆ.30ರವರೆಗೆ ವಿಸ್ತರಿಸಿ ನಾಗರಿಕ ವಿಮಾನಯಾನ ಸಚಿವಾಲಯವು ಆದೇಶ ಹೊರಡಿಸಿದೆ. ಈ ಹಿಂದೆ ಆಗಸ್ಟ್‌ 31ರವರೆಗೆ ನಿರ್ಬಂಧ ವಿಧಿಸಲಾಗಿತ್ತು. ಕೊರೊನಾ ಸೋಂಕಿನ ಮೂರನೇ ಅಲೆಯ ಭೀತಿ ಹಿನ್ನೆಲೆ ಇನ್ನೂ ಒಂದು ತಿಂಗಳು ನಿರ್ಬಂಧ ವಿಸ್ತರಿಸಲಾಗಿದೆ.

Coronavirus Third Wave: ಗಮನಿಸಿ - ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನ ನಿರ್ಬಂಧ ಸೆ.30ರವರೆಗೆ ಮುಂದುವರಿಕೆ!
Linkup
ಹೊಸದಿಲ್ಲಿ: ನಾಗರಿಕ ವಿಮಾನಯಾನ ಸಚಿವಾಲಯವು ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನದ ಮೇಲಿನ ನಿರ್ಬಂಧವನ್ನು ಸೆ.30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಆಗಸ್ಟ್‌ 31ರವರೆಗೆ ನಿರ್ಬಂಧ ವಿಧಿಸಲಾಗಿತ್ತು. ಕೊರೊನಾ ಸೋಂಕಿನ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಇನ್ನೂ ಒಂದು ತಿಂಗಳು ವಿಸ್ತರಿಸಲಾಗಿದೆ. ಅಂತಾರಾಷ್ಟ್ರೀಯ ಸರಕು ಸಾಗಣೆ ವಿಮಾನಯಾನಗಳು, ನಾಗರಿಕ ವಿಮಾನಯಾನ ಸಚಿವಾಲಯ (ಡಿಜಿಸಿಎ)ದಿಂದ ಅನುಮತಿ ಪಡೆದ ಮಾರ್ಗಗಳಲ್ಲಿ ಈಗಾಗಲೇ ಸಂಚರಿಸುತ್ತಿರುವ ವಿಮಾನಗಳಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ. ವಿಶೇಷ ಪ್ರಕರಣಗಳಲ್ಲಿಯೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗುವುದು ಎಂದು ಡಿಜಿಸಿಎ ತಿಳಿಸಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ 2020ರ ಮಾರ್ಚ್ 23ರಿಂದ ದೇಶದಲ್ಲಿ ಎಲ್ಲ ಬಗೆಯ ವಿಮಾನಯಾನವನ್ನು ನಿಷೇಧಿಸಲಾಗಿತ್ತು. ನಂತರ, ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ 'ವಂದೇ ಭಾರತ್‌ ಮಿಷನ್‌' ಅಡಿಯಲ್ಲಿ ಮೇ ತಿಂಗಳಿನಲ್ಲಿ ಏರ್‌ ಇಂಡಿಯಾದ ವಿಶೇಷ ವಿಮಾನಗಳ ಹಾರಾಟ ಆರಂಭಿಸಲಾಗಿತ್ತು. ಎರಡು ತಿಂಗಳ ಸ್ಥಗಿತದ ಬಳಿಕ ಕಳೆದ ವರ್ಷದ ಮೇ 25ರಂದು ದೇಶಿ ವಿಮಾನಯಾನ ಆರಂಭಕ್ಕೆ ಅನುಮತಿ ನೀಡಲಾಯಿತಾದರೂ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧ ಮುಂದುವರಿದಿದೆ. ಸೋಂಕು ಇಳಿಮುಖವಾದ ಬಳಿಕ ಕೆಲವು ದೇಶಗಳ ಜತೆ 'ಏರ್‌ ಬಬಲ್‌ ಒಪ್ಪಂದ' ಮಾಡಿಕೊಂಡು ನಿರ್ದಿಷ್ಟ ಮಾರ್ಗಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭಿಸಲಾಗಿತ್ತು. ಏರ್‌ ಬಬಲ್‌ ಒಪ್ಪಂದ ಎಂದರೆ ನಿರ್ದಿಷ್ಟ ಮಾರ್ಗಸೂಚಿ ಮತ್ತು ನಿಬಂಧನೆಗಳೊಂದಿಗೆ ಎರಡು ದೇಶಗಳ ನಡುವಿನ ನಿಗದಿತ ಮಾರ್ಗಗಳಲ್ಲಿ ಮಾತ್ರ ಉಭಯ ದೇಶಗಳ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಮಾಡಿಕೊಳ್ಳಲಾದ ಒಪ್ಪಂದವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಭೌತಿಕ ವಿಚಾರಣೆಅಂತಿಮ ಹಂತದಲ್ಲಿರುವ ಪ್ರಕರಣಗಳ ವಿಚಾರಣೆಯನ್ನು ಸೆ.1ರಿಂದ ಭೌತಿಕವಾಗಿ ಕೈಗೊಳ್ಳಲು ಸುಪ್ರೀಂ ಕೋರ್ಟ್‌ ತೀರ್ಮಾನಿಸಿದ್ದು, ಈ ಸಂಬಂಧ ನಿರ್ದಿಷ್ಟ ಕಾರ್ಯಾಚರಣೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಂಗಳವಾರದಿಂದ ಗುರುವಾರದವರೆಗೆ ಭೌತಿಕ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್‌ ಆವರಣ ಮತ್ತು ಕೋರ್ಟ್‌ ಹಾಲ್‌ ಪ್ರವೇಶಿಸುವಾಗ ಮಾಸ್ಕ್‌ ಧಾರಣೆ, ಕೈಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿಕೊಳ್ಳುವುದು, ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ. ಕಕ್ಷಿದಾರರು ಮತ್ತು ವಕೀಲರು ಭೌತಿಕ ವಿಚಾರಣೆಯನ್ನು ಆಯ್ಕೆ ಮಾಡಿಕೊಂಡರೆ, ಅವರು ಪುನಃ ವಿಡಿಯೊ ಕಾನ್ಫರೆನ್ಸ್‌ ವಿಚಾರಣೆಗೆ ಮರಳು ಅವಕಾಶ ಇರುವುದಿಲ್ಲ. ಅಂತಿಮ ವಿಚಾರಣೆ ಹಂತಕ್ಕೆ ಬಂದಿರುವ ಪ್ರಕರಣಗಳನ್ನು ಹೊರತುಪಡಿಸಿ ಇತರ ಪ್ರಕರಣಗಳ ವಿಚಾರಣೆ ವಿಡಿಯೊ ಕಾನ್ಫರೆನ್ಸ್‌ ಮೂಲಕವೇ ನಡೆಯಲಿದೆ. ಕೊವ್ಯಾಕ್ಸಿನ್‌ ಉತ್ಪಾದನೆ ಹೆಚ್ಚಳಅಹಮದಾಬಾದ್‌: ಭಾರತ್‌ ಬಯೋಟೆಕ್‌ ಗುಜರಾತ್‌ನ ಭರೂಚ್‌ ಜಿಲ್ಲೆಯ ಅಂಕಲೇಶ್ವರದ ಹೊಸ ಘಟಕದಲ್ಲಿ ಉತ್ಪಾದಿಸುತ್ತಿರುವ ಕೊರೊನಾ ನಿರೋಧಕ ಲಸಿಕೆ 'ಕೊವ್ಯಾಕ್ಸಿನ್‌' ಅನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಈ ಘಟಕದ ಮೊದಲ ಬ್ಯಾಚ್‌ನ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ಅವರು, ''ಕೊವ್ಯಾಕ್ಸಿನ್‌ ಉತ್ಪಾದನೆ ಹೆಚ್ಚಳದೊಂದಿಗೆ ದೇಶದಲ್ಲಿ ಲಸಿಕೆ ಲಭ್ಯತೆ ಹೆಚ್ಚಲಿದೆ. ಪ್ರತಿ ಭಾರತೀಯನಿಗೂ ಲಸಿಕೆ ನೀಡುವ ಕೇಂದ್ರ ಸರಕಾರದ ಆಶಯಕ್ಕೆ ಇದು ಪೂರಕವಾಗಿದೆ,'' ಎಂದು ಹೇಳಿದರು. ಅಂಕಲೇಶ್ವರ ಘಟಕದಲ್ಲಿ ಕೊವ್ಯಾಕ್ಸಿನ್‌ ಉತ್ಪಾದಿಸಲು ಆಗಸ್ಟ್‌ ಆರಂಭದಲ್ಲಿಅನುಮತಿ ನೀಡಲಾಗಿತ್ತು. ದೇಶದಲ್ಲಿ ಈವರೆಗೆ 63.09 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.