Ashika: ಕಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಟಿ ಆಶಿಕಾ ರಂಗನಾಥ್‌! ಹೀರೋ ಯಾರು?

ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್​ ಅವರ ಕೈಯಲ್ಲಿ ಸದ್ಯ ಅನೇಕ ಸಿನಿಮಾಗಳಿವೆ. ಚಂದನವನದ ಸ್ಟಾರ್​ ಹೀರೋಗಳಿಗೆ ನಾಯಕಿಯಾಗಿ ಅವರು ಗಮನಸೆಳೆಯುತ್ತಿದ್ದಾರೆ. ಇದೀಗ ಅವರು ಕಾಲಿವುಡ್‌ಗೂ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

Ashika: ಕಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಟಿ ಆಶಿಕಾ ರಂಗನಾಥ್‌! ಹೀರೋ ಯಾರು?
Linkup
ಹರೀಶ್‌ ಬಸವರಾಜ್‌ ಸ್ಯಾಂಡಲ್‌ವುಡ್‌ನ ಮುದ್ದು ಮುಖದ ನಟಿ ಆಶಿಕಾ ರಂಗನಾಥ್‌ ಈಗ ಕಾಲಿವುಡ್‌ಗೆ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ಕನ್ನಡದ ಹಲವು ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಅವರ ಕೈಯಲ್ಲಿ ಅನೇಕ ಒಳ್ಳೊಳ್ಳೆಯ ಸಿನಿಮಾಗಳಿವೆ. ಸ್ಯಾಂಡಲ್‌ವುಡ್‌ನ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಅವರು ಗಮನಸೆಳೆದಿದ್ದಾರೆ. ಇದೀಗ ತಮಿಳು ಚಿತ್ರರಂಗದಲ್ಲಿಯೂ ತಮ್ಮ ಪ್ರತಿಭೆ ತೋರಿಸಲು ಹೊರಟಿರುವ ಅವರು ಅಲ್ಲಿನ ಖ್ಯಾತ ನಟ ನಾಯಕರಾಗಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗಣೇಶ್, ಶ್ರೀಮುರಳಿ, ಶರಣ್‌ ಮುಂತಾದ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಿರುವ ಆಶಿಕಾ, ಇದೇ ಮೊದಲ ಬಾರಿಗೆ ಪರಭಾಷೆಯ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಅದನ್ನು ಎ. ಸರ್ಕುಣಂ ಸಿನಿರ್ದೇಶನ ಮಾಡಿದ್ದಾರೆ. ಇನ್ನು, ನಟ ಅಥರ್ವ ಕನ್ನಡದ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮೊಮ್ಮಗ ಅನ್ನೋದು ಮತ್ತೊಂದು ವಿಶೇಷ. ಅಥರ್ವ ಜೊತೆಗಿನ ಸಿನಿಮಾದ ಬಗ್ಗೆ ಮಾತನಾಡಿರುವ ಆಶಿಕಾ, 'ಕೆಲವು ದಿನಗಳ ಹಿಂದೆ ಈ ಸಿನಿಮಾದ ವಿಚಾರವಾಗಿ ಕರೆ ಬಂತು. ಅದರ ಕಥೆ ಇಷ್ಟವಾದ ಕಾರಣ ಒಪ್ಪಿಕೊಂಡಿದ್ದೇನೆ. ಅದರ ನಿರ್ದೇಶಕರು 'ಕಲವಾಣಿ' ಸೇರಿದಂತೆ ನಾಲ್ಕೈದು ಹಿಟ್‌ ಸಿನಿಮಾಗಳನ್ನು ಮಾಡಿದ್ದಾರೆ. ನನ್ನ ಪಾತ್ರವೂ ಚೆನ್ನಾಗಿದೆ. ಕಬಡ್ಡಿ ಬ್ಯಾಕ್‌ಗ್ರೌಂಡ್‌ನಲ್ಲಿನಡೆಯುವ ಈ ಸಿನಿಮಾದಲ್ಲಿನನ್ನ ಪಾತ್ರದ ಬಗ್ಗೆ ಹೆಚ್ಚಿಗೆ ಹೇಳುವಂತಿಲ್ಲ' ಎಂದಿದ್ದಾರೆ. ಈಗಾಗಲೇ ಈ ಸಿನಿಮಾಗೆ ಮುಹೂರ್ತ ಕೂಡ ನೆರವೇರಿದೆ. '2.0', 'ಐ'ನಂತಹ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ನಿರ್ಮಾಪಕರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಮುಹೂರ್ತ ನಡೆದಿದ್ದು, ನಾನು 'ಮದಗಜ' ಸಿನಿಮಾ ಮುಗಿಸಿ ನಂತರ ಆ ಸಿನಿಮಾ ಸೆಟ್‌ ಸೇರಿಕೊಳ್ಳಲಿದ್ದೇನೆ. ಉತ್ತಮ ಕಥೆ ಮತ್ತು ಪಾತ್ರವರ್ಗದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಖುಷಿಯ ವಿಚಾರ' ಎಂದು ಆಶಿಕಾ ರಂಗನಾಥ್‌ ಹೇಳಿದ್ದಾರೆ. ಇಂದು ಆಶಿಕಾಗೆ ಬರ್ತ್‌ಡೇಅಂದಹಾಗೆ, ಇಂದು (ಆ.5) ಆಶಿಕಾ ರಂಗನಾಥ್‌ಗೆ ಹುಟ್ಟುಹಬ್ಬದ ಸಂಭ್ರಮ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಗ್ರ್ಯಾಂಡ್ ಆಗಿ ಆಚರಿಸಿಕೊಳ್ಳುತ್ತಿಲ್ಲ. 'ಪ್ರಸ್ತುತ ಪರಿಸ್ಥಿತಿ ಮತ್ತು ನನ್ನ ಚಿತ್ರೀಕರಣ ವೇಳಾಪಟ್ಟಿಯಿಂದಾಗಿ ನಿಮ್ಮನ್ನು ಭೇಟಿಯಾಗಲು ಸಾಧ್ಯವಿಲ್ಲ. ನಿಮ್ಮ ಭೇಟಿಯಾಗದೇ ಇರುವುದು ಮತ್ತು ಈ ವಿಶೇಷ ದಿನವನ್ನು ನಿಮ್ಮೆಲ್ಲರೊಂದಿಗೆ ಆಚರಿಸದೇ ಇರುವುದು ನನಗೆ ತುಂಬಾ ದುಃಖ ತಂದಿದೆ. ಆದರೆ ಅದು ಎಲ್ಲರ ಆರೋಗ್ಯ ಮತ್ತು ಸುರಕ್ಷತೆಗಾಗಿ..' ಎಂದು ತಿಳಿಸಿದ್ದಾರೆ.