ಸಮಾಜವಾದಿ ಪಕ್ಷದ ಕಾರ್ಯಕರ್ತೆಯ ಸೀರೆ ಎಳೆದ ವಿರೋಧಿಗಳು: ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಘಟನೆ

ಉತ್ತರ ಪ್ರದೇಶದಲ್ಲಿ ಬ್ಲಾಕ್ ಪಂಚಾಯತ್ ಚುನಾವಣೆಯ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತೆಯೊಬ್ಬರ ಸೀರೆಯನ್ನು ಎಳೆದು ದಾಂದಲೆ ನಡೆಸಿದ ಘಟನೆಯ ವಿಡಿಯೋ ವೈರಲ್ ಆಗಿದೆ.

ಸಮಾಜವಾದಿ ಪಕ್ಷದ ಕಾರ್ಯಕರ್ತೆಯ ಸೀರೆ ಎಳೆದ ವಿರೋಧಿಗಳು: ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಘಟನೆ
Linkup
ಲಕ್ನೋ: ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಸಮಾಜವಾದಿ ಪಕ್ಷದ ಕಾರ್ಯಕರ್ತೆಯೊಬ್ಬರ ಸೀರೆ ಎಳೆದು, ಆಕೆಯ ಮೇಲೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಆರು ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಕಳೆದ ಶನಿವಾರ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗುರುವಾರದಿಂದ ಹರಿದಾಡತೊಡಗಿತ್ತು. ಬ್ಲಾಕ್ ಅಭ್ಯರ್ಥಿಯ ಬೆಂಬಲಿಗರಾಗಿ ಬಂದಿದ್ದ ಮಹಿಳೆ, ನಾಮಪತ್ರ ಕೇಂದ್ರಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಎದುರಾಳಿ ಪಕ್ಷದ ಬೆಂಬಲಿಗರು ದಾಳಿ ಮಾಡಿದ್ದಾರೆ. ಅಭ್ಯರ್ಥಿಯ ನಾಮಪತ್ರ ಕಾಗದಗಳನ್ನು ಕಸಿದುಕೊಂಡ ದುಷ್ಕರ್ಮಿಗಳು, ಆಕೆ ಸರಿಯಾದ ಸಮಯದಲ್ಲಿ ನಾಮಪತ್ರ ಸಲ್ಲಿಸುವುದನ್ನು ತಡೆದಿದ್ದಾರೆ. ತಮ್ಮ ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾಗಬೇಕು ಎಂದು ನೋಡಿಕೊಳ್ಳಲು ಅವರು ಬಯಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೋ ಸರಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿಗೆ ಅಸ್ತ್ರವಾಗಿ ದೊರಕಿದೆ. 'ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಇಬ್ಬರು ವ್ಯಕ್ತಿಗಳು ಕಾರ್ಯಕರ್ತರು. ಇವರು ಅವರ ಅಧಿಕಾರ ಹಸಿವಿನ ಗೂಂಡಾಗಳು' ಎಂದು ಯೋಗಿ ಆದಿತ್ಯನಾಥ್ ಅವರು ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಘಟನೆ ನಡೆದರೂ ಕ್ರಮ ಕೈಗೊಳ್ಳದ ಕಾರಣಕ್ಕೆ ಉತ್ತರ ಪ್ರದೇಶ ಸರಕಾರ ಆರು ಮಂದಿ ಪೊಲೀಸರನ್ನು ಅಮಾನತುಗೊಳಿಸಿದೆ. ಪ್ರಿಯಾಂಕಾ ಗಾಂಧಿ ಟೀಕೆ825 ಬ್ಲಾಕ್ ಪ್ರಮುಖರು ಅಥವಾ ಸ್ಥಳೀಯ ಪಂಚಾಯತ್ ಮುಖ್ಯಸ್ಥರ ಆಯ್ಕೆಗೆ ನಾಮಪತ್ರಗಳನ್ನು ಸಲ್ಲಿಸುವಾಗ ಶನಿವಾರ ಹತ್ತಾರು ಕಡೆ ಘರ್ಷಣೆಗಳು ನಡೆದಿವೆ. ಇದು ವಿರುದ್ಧ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಪ್ರಧಾನಿ ಮತ್ತು ಮುಖ್ಯಮಂತ್ರಿಯವರೇ, ಉತ್ತರ ಪ್ರದೇಶದಲ್ಲಿ ಬಾಂಬ್‌ಗಳು, ಕಲ್ಲುಗಳು ಮತ್ತು ಗುಂಡುಗಳನ್ನು ಹಾರಿಸಿರುವ, ನಾಮಪತ್ರ ಕಾಗದಗಳನ್ನು ಕಸಿದಿರುವ, ಪತ್ರಕರ್ತರನ್ನು ಥಳಿಸಿದ ಮತ್ತು ಮಹಿಳೆಯರ ಜತೆ ಕೆಟ್ಟದಾಗಿ ವರ್ತಿಸಿರುವ ನಿಮ್ಮ ಕಾರ್ಯಕರ್ತರನ್ನು ಅಭಿನಂದಿಸಿ. ಕಾನೂನು ಮತ್ತು ಸುವ್ಯವಸ್ಥೆ ಕಣ್ಣುಮುಚ್ಚಿದೆ ಹಾಗೂ ಪ್ರಜಾಪ್ರಭುತ್ವವು ಬೆತ್ತಲಾಗಿದೆ' ಎಂದು ಪ್ರಿಯಾಂಕಾ ಗಾಂಧಿ ವ್ಯಂಗ್ಯವಾಡಿದ್ದಾರೆ.