ರೇಷ್ಮೆ ಇಂದಿಗೂ ಲಾಭದಾಯಕ ಬೆಳೆ; ಸ್ವ ಉದ್ಯೋಗಿಗಳಾಗಲು ವಿಪುಲ ಅವಕಾಶ!

ಹಿಂದಿನ ರೇಷ್ಮೆ ಬೆಳೆ ರೈತರ ಪಾಲಿಗೆ ಸುವರ್ಣಯುಗವಾಗಿತ್ತು. ಈಗಲೂ ರೇಷ್ಮೆ ಬೆಳೆ ಚಿನ್ನದ ಬೆಳೆಯಾಗಿದ್ದು, ರೈತರ ಮಕ್ಕಳು ಇದನ್ನು ಅವಲಂಬಿಸುವುದರಿಂದ ಸ್ವ ಉದ್ಯೋಗಿಗಳಾಗಲು ವಿಪುಲ ಅವಕಾಶಗಳಿವೆ. ​​ವರ್ಷದಲ್ಲಿ 6ರಿಂದ 8 ಬೆಳೆ ಬೆಳೆಯುತ್ತಿದ್ದ ರೈತರು ಕೈತುಂಬ ಹಣ ಗಳಿಸಿ ಖುಷಿಯಾಗಿರುತ್ತಿದ್ದರು. ಈ ಹಣದಿಂದಲೇ ಮದುವೆ, ಮನೆ ನಿರ್ಮಾಣ, ಜಮೀನು ಖರೀದಿಯಂಥ ವ್ಯವಹಾರ ನಡೆಯುತ್ತಿತ್ತು ಎಂಬುದು ಗಮನಾರ್ಹ ಸಂಗತಿ.

ರೇಷ್ಮೆ ಇಂದಿಗೂ ಲಾಭದಾಯಕ ಬೆಳೆ; ಸ್ವ ಉದ್ಯೋಗಿಗಳಾಗಲು ವಿಪುಲ ಅವಕಾಶ!
Linkup
ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲ ಬೆಂಗಳೂರು: ದಶಕಗಳ ಹಿಂದೆ ಬಂಗಾರದ ಬೆಳೆ ಎಂದೇ ಪ್ರಸಿದ್ಧಿ ಪಡೆದಿದ್ದ ಬೆಳೆ ಇಂದಿಗೂ ಲಾಭದಾಯಕ ಬೆಳೆಯೇ ಆಗಿದ್ದು, ಕೆಲವು ಸುಧಾರಿತ ಕ್ರಮಗಳನ್ನು ಸರಕಾರ ಕೈಗೊಂಡರೆ ಖಂಡಿತ ರೇಷ್ಮೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿದೆ ಎಂಬುದು ರೇಷ್ಮೆ ಕೃಷಿಕರ ಅಭಿಪ್ರಾಯ. ರೇಷ್ಮೆ ಬೆಳೆ ಒಂದು ಕಾಲದಲ್ಲಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯಲ್ಲಿ ಉತ್ತುಂಗ ಸ್ಥಿತಿಯಲ್ಲಿತ್ತು. ರೇಷ್ಮೆ ಹುಳುಗಳನ್ನು ರೈತರು ಸಾಕಣೆ ಮಾಡಿದರೆ, ಆ ಹುಳುಗಳೇ ರೈತರನ್ನು ಸಲಹುತ್ತಿದ್ದವು. ಅಷ್ಟರ ಮಟ್ಟಿಗೆ ರೇಷ್ಮೆ ಕೃಷಿ ಕುಟುಂಬಗಳ ಕೈ ಹಿಡಿದಿತ್ತು. ರೈತರ ಉಪ ಕಸುಬಾಗಿದ್ದ ರೇಷ್ಮೆ ಹುಳು ಸಾಕಣೆ ನಿರುದ್ಯೋಗ ಸಮಸ್ಯೆಯನ್ನು ದೂರ ಮಾಡಿ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿತ್ತು. ವರ್ಷದಲ್ಲಿ 6ರಿಂದ 8 ಬೆಳೆ ಬೆಳೆಯುತ್ತಿದ್ದ ರೈತರು ಕೈತುಂಬ ಹಣ ಗಳಿಸಿ ಖುಷಿಯಾಗಿರುತ್ತಿದ್ದರು. ಈ ಹಣದಿಂದಲೇ ಮದುವೆ, ಮನೆ ನಿರ್ಮಾಣ, ಜಮೀನು ಖರೀದಿಯಂಥ ವ್ಯವಹಾರ ನಡೆಯುತ್ತಿತ್ತು ಎಂಬುದು ಗಮನಾರ್ಹ ಸಂಗತಿ. ನಂತರ ಏಕೆ ರೇಷ್ಮೆಯಿಂದ ರೈತರು ವಿಮುಖರಾದರು ಎಂಬುದರ ಬಗ್ಗೆ ತಿಳಿದೇ ಇದೆ. ಹೀಗಾಗಿ ಸದ್ಯ ಹಿಂದೆ ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎನ್ನುತ್ತಾರೆ ಬಹುಕಾಲದಿಂದಲೂ ರೇಷ್ಮೆ ಕೃಷಿಯಲ್ಲೇ ತೊಡಗಿಸಿಕೊಂಡಿರುವ ರೈತರು. ಅವಕಾಶ ಇನ್ನೂ ಇದೆ ಹಿಂದೆ ರೇಷ್ಮೆ ಹುಳು ಸಾಕಣೆ ಮಾಡಲು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಿರಬೇಕಿತ್ತು. ಜಮೀನಿನಿಂದ ಸೊಪ್ಪು ತಂದು ದಿನಕ್ಕೆ ಆರರಿಂದ ಎಂಟು ಬಾರಿ ಸೊಪ್ಪು ಹಾಕಬೇಕಿತ್ತು. ಆದರೀಗ ಸುಧಾರಿತ ತಳಿ, ಪದ್ಧತಿಯಿಂದ ದಿನಕ್ಕೆ ಎರಡು ಬಾರಿ ರೆಂಬೆಗಳನ್ನೆ ಕತ್ತರಿಸಿ ತಂದು ನೇರವಾಗಿ ಹಾಕಿ ಹುಳು ಸಾಕಣೆ ಮಾಡಬಹುದು. ಒಂದು ಬೆಳೆ ಬರಲು ಹಿಂದೆ ಒಂದರಿಂದ ಒಂದೂವರೆ ತಿಂಗಳು ಬೇಕಿತ್ತು. ಈಗ 10 ದಿನ ಅಂದರೆ ಎರಡನೇ ಜ್ವರದವರೆಗೆ ಚಾಕಿ ಸಾಕಣೆ ಕೇಂದ್ರದಲ್ಲಿ ಸಾಕಿದ ಮರಿಯನ್ನು ತಂದು ಸಾಕುವುದರಿಂದ 15 ದಿನದಲ್ಲಿ ರೇಷ್ಮೆ ಗೂಡು ಉತ್ಪಾದನೆಯಾಗುತ್ತದೆ. ಸುಲಭವಾಗಿ ಸಾಕಣೆ ಮಾಡುವ ಅವಕಾಶ ಇದ್ದು ಇದನ್ನು ರೈತರು ಅವಲಂಬಿಸಿದರೆ ಇಂದಿಗೂ ರೇಷ್ಮೆ ಬೆಳೆಯಲ್ಲಿ ಲಾಭ ವಿದೆ ಎನ್ನುತ್ತಾರೆ ರಾಜ್ಯ ರೇಷ್ಮೆ ನೂಲು ಬಿಚ್ಚುವವರ ಸಂಘದ ಗೌರವ ಅಧ್ಯಕ್ಷರಾದ ತಾಲೂಕಿನ ಕಾಮಗೆರೆ ಗ್ರಾಮದ ಸಿ.ಗುರುಸ್ವಾಮಿ. ರೇಷ್ಮೆ ಬೆಳೆ ಅಂದು ಇಂದು ಎಂದೆಂದಿಗೂ ಲಾಭದಾಯಕ ಬೆಳೆ. ಅಂದಿಗಿಂತ ಇಂದು ರೇಷ್ಮೆ ಹುಳು ಸಾಕಣೆ ಸುಲಭವಾಗಿದೆ. ಹಿಂದೆ ಪ್ರತಿ ನೂರು ಮೊಟ್ಟೆಗೆ 10ರಿಂದ 15ಕೆಜಿ ಗೂಡು ಬೆಳೆಯುತ್ತಿದ್ದರು. ಇಂದು 100 ಮೊಟ್ಟೆಗೆ 60ರಿಂದ 70ಕೆಜಿಯಷ್ಟು ಗೂಡು ಬೆಳೆಯುತ್ತಿದ್ದೇವೆ ಎನ್ನುತ್ತಾರೆ ಕಾಮಗೆರೆಯ ಸಿ. ಗುರುಸ್ವಾಮಿ ಅವರು. ಮನೆಯವರೆಲ್ಲರೂ ಹಿಂದೆ ರೇಷ್ಮೆ ಸಾಕಣೆಗೆ ಕೆಲಸಗೆಡುತ್ತಿದ್ದರು. ಕಾರ್ಮಿಕರ ಅಗತ್ಯವೂ ಇತ್ತು. ಪ್ರಸ್ತುತ ಒಂದಿಬ್ಬರು ಸೇರಿ ಹುಳು ಸಾಕಣೆ ಮಾಡಬಹುದು. ಪ್ರತಿ ಕೆಜಿ ಗೂಡಿಗೆ 280ರಿಂದ 300ರೂ.ವರೆಗೆ ಬೆಲೆ ಸಿಕ್ಕರೆ ಲಾಭವಾಗುತ್ತದೆ. ಸದ್ಯ ಅದಕ್ಕಿಂತ ಹೆಚ್ಚಿನ ಬೆಲೆ ಇದೆ. ಹಿಂದಿನ ರೇಷ್ಮೆ ಬೆಳೆ ರೈತರ ಪಾಲಿಗೆ ಸುವರ್ಣಯುಗವಾಗಿತ್ತು. ಈಗಲೂ ರೇಷ್ಮೆ ಬೆಳೆ ಚಿನ್ನದ ಬೆಳೆಯಾಗಿದ್ದು, ರೈತರ ಮಕ್ಕಳು ಇದನ್ನು ಅವಲಂಬಿಸುವುದರಿಂದ ಸ್ವ ಉದ್ಯೋಗಿಗಳಾಗಲು ವಿಪುಲ ಅವಕಾಶಗಳಿವೆ ಎನ್ನುತ್ತಾರೆ ಅವರು.