ಎರಡು ತಿಂಗಳಲ್ಲಿ ವರ್ಗಾವಣೆಯಡಿ 500 ಕೋಟಿ ರೂ. ಲಂಚ; ಕೃಷಿ ಇಲಾಖೆಯಲ್ಲೇ 130 ಕೋಟಿ: ಎಚ್ಡಿಕೆ ಬಾಂಬ್
ಎರಡು ತಿಂಗಳಲ್ಲಿ ವರ್ಗಾವಣೆಯಡಿ 500 ಕೋಟಿ ರೂ. ಲಂಚ; ಕೃಷಿ ಇಲಾಖೆಯಲ್ಲೇ 130 ಕೋಟಿ: ಎಚ್ಡಿಕೆ ಬಾಂಬ್
ಕಳೆದೆರಡು ತಿಂಗಳಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅಂದಾಜು 500 ಕೋಟಿ ರೂ.ಗಳಷ್ಟು ವರ್ಗಾವಣೆ ಭ್ರಷ್ಟಾಚಾರ ನಡೆದಿದ್ದು, ಕೃಷಿ ಇಲಾಖೆಯಲ್ಲೇ 130 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಸೋಮವಾರದಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಯೊಬ್ಬರು ವರ್ಗಾವಣೆ ದಂಧೆಯಲ್ಲಿ ಆಗಿರುವ ವ್ಯವಹಾರದ ಮೊತ್ತದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು. ಅಲ್ಲದೆ, ಮಹಾಘಟಬಂಧನದ ಬಗ್ಗೆಯೂ ಕಿಡಿಕಾರಿದ ಅವರು ಈ ಹಿಂದಿನ ಘಟಬಂಧನಗಳಲ್ಲಿ ಏನನ್ನೂ ಸಾಧಿಸಿಲ್ಲ ಎಂದು ಲೇವಡಿ ಮಾಡಿದರು.
ಕಳೆದೆರಡು ತಿಂಗಳಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅಂದಾಜು 500 ಕೋಟಿ ರೂ.ಗಳಷ್ಟು ವರ್ಗಾವಣೆ ಭ್ರಷ್ಟಾಚಾರ ನಡೆದಿದ್ದು, ಕೃಷಿ ಇಲಾಖೆಯಲ್ಲೇ 130 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಸೋಮವಾರದಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಯೊಬ್ಬರು ವರ್ಗಾವಣೆ ದಂಧೆಯಲ್ಲಿ ಆಗಿರುವ ವ್ಯವಹಾರದ ಮೊತ್ತದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು. ಅಲ್ಲದೆ, ಮಹಾಘಟಬಂಧನದ ಬಗ್ಗೆಯೂ ಕಿಡಿಕಾರಿದ ಅವರು ಈ ಹಿಂದಿನ ಘಟಬಂಧನಗಳಲ್ಲಿ ಏನನ್ನೂ ಸಾಧಿಸಿಲ್ಲ ಎಂದು ಲೇವಡಿ ಮಾಡಿದರು.