ಭಾರತಕ್ಕೀಗ ಡೇಂಜರಸ್‌ ಲಾಂಬ್ಡಾ ಸೋಂಕಿನ ಭೀತಿ: 30 ರಾಷ್ಟ್ರಗಳಲ್ಲಿ ಹಬ್ಬಿರುವ ಲಾಂಬ್ಡಾ ಶೀಘ್ರದಲ್ಲೇ ದೇಶಕ್ಕೆ ಲಗ್ಗೆ?

ಬ್ರೆಜಿಲ್‌ನಲ್ಲಿಏಕಕಾಲಕ್ಕೆ ಕೊರೊನಾದ ರೂಪಾಂತರಿ ವೈರಾಣುಗಳಾದ ಅಲ್ಫಾ ಮತ್ತು ಬೀಟಾ ಎರಡೂ ವೈರಾಣು ಸೋಂಕಿಗೆ ತುತ್ತಾಗಿದ್ದ ಬೆಲ್ಜಿಯಂನ ವೃದ್ಧೆಯೊಬ್ಬರು ಅತ್ಯುತ್ತಮ ವೈದ್ಯಕೀಯ ಶುಶ್ರೂಷೆ ಹೊರತಾಗಿಯೂ ಮೃತಪಟ್ಟಿದ್ದಾರೆ. ಈ ಎರಡೂ ವೈರಾಣುಗಳು ಈಗ ಬೆಲ್ಜಿಯಂನಲ್ಲಿ ಹರಡಿವೆ. ವೃದ್ಧೆಗೆ ಇಬ್ಬರು ಪ್ರತ್ಯೇಕ ಸೋಂಕಿತರಿಂದ ಎರಡು ರೂಪಾಂತರಿಗಳು ತಗುಲಿವೆ.

ಭಾರತಕ್ಕೀಗ ಡೇಂಜರಸ್‌ ಲಾಂಬ್ಡಾ ಸೋಂಕಿನ ಭೀತಿ: 30 ರಾಷ್ಟ್ರಗಳಲ್ಲಿ ಹಬ್ಬಿರುವ ಲಾಂಬ್ಡಾ ಶೀಘ್ರದಲ್ಲೇ ದೇಶಕ್ಕೆ ಲಗ್ಗೆ?
Linkup
ಹೊಸದಿಲ್ಲಿ: ಕೊರೊನಾ ಎರಡನೇ ಅಲೆ ಮುಗಿದಿಲ್ಲ ಎಂದು ಕೇಂದ್ರ ಸರಕಾರ ಎಚ್ಚರಿಸುತ್ತಿದ್ದರೂ ಜನ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸುತ್ತಿರುವ ಪ್ರಕರಣಗಳು ವರಿದಯಾಗುತ್ತಿವೆ. ಇದರ ಬೆನ್ನಲ್ಲೇ, ಲಾಂಬ್ಡಾ ರೂಪಾಂತರಿಯೂ ಅಪ್ಪಳಿಸಲಿದೆ ಎಂದು ತಜ್ಞರು ಅಪಾಯದ ಮುನ್ಸೂಚನೆ ನೀಡಿದ್ದಾರೆ. ಮೊದಲು ಪೆರು ದೇಶದಲ್ಲಿ ಪತ್ತೆಯಾದ ಈಗ 30 ರಾಷ್ಟ್ರಗಳಿಗೆ ಪಸರಿಸಿದೆ. ಇದು 'ಡೆಲ್ಟಾಗಿಂತ ಮಾರಣಾಂತಿಕ' ಎಂದು ಮಲೇಷ್ಯಾ ಘೋಷಿಸಿದೆ. ಲಾಂಬ್ಡಾ ಕುರಿತು ಸಹ ನಿಗಾ ವಹಿಸಲಾಗುತ್ತಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಲಾಂಬ್ಡಾ ರೂಪಾಂತರಿ ಕುರಿತು ಅವರು ಎಚ್ಚರಿಸಿದ್ದಾರೆ. ''ದೇಶದಲ್ಲಿ ಸದ್ಯ ಲಾಂಬ್ಡಾ ರೂಪಾಂತರಿ ಇಲ್ಲ. ಆದರೆ, ಯಾವಾಗ ಬೇಕಾದರೂ ದೇಶದಲ್ಲಿ ಕಾಣಿಸಿಕೊಳ್ಳಬಹುದು. ಲಾಂಬ್ಡಾ ವೈರಾಣು ಅತ್ಯಂತ ಅಪಾಯಕಾರಿಯಾಗಿರುವುದರಿಂದ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ,'' ಎಂದು ಹೊಸದಿಲ್ಲಿಯ ಇನ್‌ಸ್ಟಿಟ್ಯೂಟ್‌ ಆಫ್‌ ಲಿವರ್‌ ಆ್ಯಂಡ್‌ ಬಿಲಿಯರಿ ಸೈನ್ಸಸ್‌ ನಿರ್ದೇಶಕ ಡಾ.ಎಸ್‌.ಕೆ.ಸಾರಿನ್‌ ಎಚ್ಚರಿಸಿದ್ದಾರೆ. ಕೇರಳ, ಈಶಾನ್ಯದಲ್ಲಿ ಹೆಚ್ಚು! ಕೇರಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಚೇತರಿಕೆ ಪ್ರಮಾಣ ಮಂದಗತಿಯಲ್ಲಿದೆ ಎಂದು ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆ ತಿಳಿಸಿದೆ. ಸಂಸ್ಥೆಯ ಲೆಕ್ಕಾಚಾರದ ಪ್ರಕಾರ, ಈ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ನಿಧಾನವಾಗಿ ಏರುತ್ತಲೇ ಇದೆ. ಇನ್ನು ಜೈಕಾ ವೈರಾಣು ಕಾಣಿಸಿಕೊಂಡಿರುವ ಕೇರಳದಲ್ಲಿ ಭಾನುವಾರವೂ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದ, ಝೈಕಾ ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಶಾಲೆ-ಕಾಲೇಜು ಆರಂಭ!ಕೊರೊನಾ ಎರಡನೇ ಅಲೆ ತಗ್ಗಿದ ಕಾರಣ ಶಾಲೆ-ಕಾಲೇಜು ಆರಂಭಿಸಲು ಹಲವು ರಾಜ್ಯಗಳು ತೀರ್ಮಾನಿಸಿವೆ. ಹರಿಯಾಣದಲ್ಲಿ ಜುಲೈ 16ರಿಂದ 9-12ನೇ ತರಗತಿ ಶಾಲೆ ಆರಂಭಕ್ಕೆ ಸಿದ್ಧತೆ ನಡೆದಿದೆ. ಗುಜರಾತ್‌ನಲ್ಲಿ ಜುಲೈ 15ರಿಂದ, ಆಂಧ್ರಪ್ರದೇಶದಲ್ಲಿ ಆಗಸ್ಟ್‌ನಲ್ಲಿ, ದಿಲ್ಲಿಯಲ್ಲಿ ಆಗಸ್ಟ್‌ 2ರಿಂದ ಶಾಲೆ ಆರಂಭಿಸಲಾಗುತ್ತದೆ. ಈಗಾಗಲೇ ತೆಲಂಗಾಣ, ಉತ್ತರ ಪ್ರದೇಶದಲ್ಲಿಜುಲೈ 1ರಿಂದ ತರಗತಿ ಆರಂಭವಾಗಿವೆ. ಬಿಹಾರವೂ ಹಂತಹಂತವಾಗಿ ಶಾಲೆ ಆರಂಭಿಸಲು ಅನುಮತಿ ನೀಡಲಾಗಿದೆ. ಆರ್‌ಎಸ್‌ಎಸ್‌ ತರಬೇತಿಕೊರೊನಾ ಸೋಂಕಿನ ಮೂರನೇ ಅಲೆ ಬಂದರೆ ಜನರು ಮತ್ತು ಸ್ಥಳೀಯ ಆಡಳಿತಗಳಿಗೆ ನೆರವಾಗುವ ನಿಟ್ಟಿನಲ್ಲಿತನ್ನ ಕಾರ್ಯಕರ್ತರಿಗೆ ವಿಶೇಷ ತರಬೇತಿ ನೀಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ತೀರ್ಮಾನಿಸಿದೆ. ಭಾನುವಾರ ಈ ಕುರಿತು ಮಾಹಿತಿ ನೀಡಿರುವ ಆರ್‌ಎಸ್‌ಎಸ್‌ನ ಅಖಿಲ ಪ್ರಚಾರ ಪ್ರಮುಖ ಸುನೀಲ್‌ ಅಂಬೇಕರ್‌ ಅವರು, ''ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಬಗ್ಗೆ ವಿಶೇಷ ಗಮನ ನೀಡಲಾಗುವುದು. ಮೂರನೇ ಅಲೆಯು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿಮಕ್ಕಳು, ಮಾತೆಯರ ಆರೋಗ್ಯ ತಪಾಸಣೆಗೂ ಒತ್ತು ನೀಡಲಾಗುವುದು,'' ಎಂದು ತಿಳಿಸಿದ್ದಾರೆ. ಬೆಲ್ಜಿಯಂನಲ್ಲಿ ದ್ವಿವೈರಾಣು ದಾಳಿಬ್ರುಸೆಲ್ಸ್‌: ಬ್ರೆಜಿಲ್‌ನಲ್ಲಿಏಕಕಾಲಕ್ಕೆ ಕೊರೊನಾದ ರೂಪಾಂತರಿ ವೈರಾಣುಗಳಾದ ಅಲ್ಫಾ ಮತ್ತು ಬೀಟಾ ಎರಡೂ ವೈರಾಣು ಸೋಂಕಿಗೆ ತುತ್ತಾಗಿದ್ದ ಬೆಲ್ಜಿಯಂನ ವೃದ್ಧೆಯೊಬ್ಬರು ಅತ್ಯುತ್ತಮ ವೈದ್ಯಕೀಯ ಶುಶ್ರೂಷೆ ಹೊರತಾಗಿಯೂ ಮೃತಪಟ್ಟಿದ್ದಾರೆ.''ಈ ಎರಡೂ ವೈರಾಣುಗಳು ಈಗ ಬೆಲ್ಜಿಯಂನಲ್ಲಿ ಹರಡಿವೆ. ವೃದ್ಧೆಗೆ ಇಬ್ಬರು ಪ್ರತ್ಯೇಕ ಸೋಂಕಿತರಿಂದ ಎರಡು ರೂಪಾಂತರಿಗಳು ತಗುಲಿವೆ. ಇದು ಮುಂದಿನ ದಿನಗಳಲ್ಲಿ ಹೊಸ ತಲೆನೋವು ಉಂಟು ಮಾಡುವ ಸಾಧ್ಯತೆ ಇದೆ. ಇನ್ನು ಮುಂದೆ ಬರೀ ಸೋಂಕು ಪತ್ತೆ ಪರೀಕ್ಷೆ ಮಾಡುವುದರಿಂದ ಹೆಚ್ಚು ಪ್ರಯೋಜನವಾಗದು. ಬಹು ರೂಪಾಂತರಿ ತಗುಲಿರುವ ಬಗ್ಗೆಯೂ ಪರೀಕ್ಷೆಗಳು ನಡೆಯಬೇಕು,'' ಎಂದು ಬೆಲ್ಜಿಯಂನ ವೈರಾಣು ತಜ್ಞೆ ಆನ್‌ ವಂಕೀರ್‌ಬರ್ಗ್‌ ಎಚ್ಚರಿಸಿದ್ದಾರೆ. ಅಲ್ಫಾ ವೈರಾಣು ಮೊದಲು ಇಂಗ್ಲೆಂಡಿನಲ್ಲಿಪತ್ತೆಯಾಗಿದ್ದರೆ, ಬೀಟಾ ವೈರಾಣು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಬಂದಿದೆ.