ಬ್ಯಾಟರಾಯನಪುರ ಪೇದೆಯನ್ನು ಮದ್ಯವ್ಯಸನಿಯಾಗಿ ಬಿಂಬಿಸಿ ಕಾರ್ಯಾಚರಣೆ; ಆರೋಪಿ ಬಂಧನ!

ಅಘಾತ ಪ್ರಕರಣದಲ್ಲಿ ಅಂಥೋನಿಗೆ 2012ರಲ್ಲಿ 10 ತಿಂಗಳು 15 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶವಾಗಿತ್ತು. ಆದರೆ, ಆತ ತಲೆಮರೆಸಿಕೊಂಡಿದ್ದ. ಮದ್ಯವ್ಯಸನಿಯಾಗಿದ್ದ ಅಂಥೋನಿ ತನ್ನ ವಿಳಾಸ ಬದಲಿಸಿಕೊಂಡು ರಿಹ್ಯಾಬಿಲಿಟೇಷನ್‌​ ಸೆಂಟರ್‌ವೊಂದಕ್ಕೆ ಸೇರಿಕೊಂಡಿದ್ದ. ಮತ್ತೊಂದೆಡೆ ಆರೋಪಿಗಾಗಿ ವರ್ಷಗಟ್ಟಲೆ ಹುಡುಕಾಡಿದರೂ ಆತ ಪತ್ತೆಯಾಗಿರಲಿಲ್ಲ.

ಬ್ಯಾಟರಾಯನಪುರ ಪೇದೆಯನ್ನು ಮದ್ಯವ್ಯಸನಿಯಾಗಿ ಬಿಂಬಿಸಿ ಕಾರ್ಯಾಚರಣೆ; ಆರೋಪಿ ಬಂಧನ!
Linkup
: ಅಪಘಾತ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಒಂಬತ್ತು ವರ್ಷಗಳ ಬಳಿಕ ಪತ್ತೆ ಹಚ್ಚಿ ಬ್ಯಾಟರಾಯನಪುರ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಅಂಥೋನಿ ರಾಜ್‌(44) ಬಂಧಿತ . ಹತ್ತು ವರ್ಷಗಳ ಹಿಂದೆ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯ ಬಾಪೂಜಿ ನಗರ ಐದನೇ ಮುಖ್ಯರಸ್ತೆಯಲ್ಲಿ ಟ್ರ್ಯಾಕ್ಟರ್‌ ಚಾಲಕನಾಗಿದ್ದ ಈತ ಆಟೋವೊಂದಕ್ಕೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಆಟೋ ಚಾಲಕ ಕೌಸಲ್‌ ಕುಮಾರ್‌ ಟ್ರ್ಯಾಕ್ಟರ್‌ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದ. ಈ ಅಪಘಾತ ಪ್ರಕರಣದಲ್ಲಿ ಅಂಥೋನಿಗೆ 2012ರಲ್ಲಿ 10 ತಿಂಗಳು 15 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶವಾಗಿತ್ತು. ಆದರೆ, ಆತ ತಲೆಮರೆಸಿಕೊಂಡಿದ್ದ. ಮದ್ಯವ್ಯಸನಿಯಾಗಿದ್ದ ಅಂಥೋನಿ ತನ್ನ ವಿಳಾಸ ಬದಲಿಸಿಕೊಂಡು ರಿಹ್ಯಾಬಿಲಿಟೇಷನ್‌ ಸೆಂಟರ್‌ವೊಂದಕ್ಕೆ ಸೇರಿಕೊಂಡಿದ್ದ. ಮತ್ತೊಂದೆಡೆ ಆರೋಪಿಗಾಗಿ ವರ್ಷಗಟ್ಟಲೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಪತ್ತೆಕಾರ್ಯ ಕೈಬಿಡದ ಪೊಲೀಸರು, ಅಂಥೋನಿ ಸಹೋದರರ ಬಳಿ ಮಾಹಿತಿ ಕಲೆ ಹಾಕಿ, ಸೋಮನಹಳ್ಳಿಯ ಸೇಂಟ್‌ ಮದರ್‌ ತೆರೆಸಾ ರಿಹ್ಯಾಬಿಲಿಟೇಷನ್‌ ಸೆಂಟರ್‌ನಲ್ಲಿ ಆಂಥೋನಿ ಇರುವ ಕುರಿತು ವಿವರ ಪಡೆದಿದ್ದರು. ಪುಟ್ಟಮಲ್ಲಯ್ಯ ಎಂಬ ಪೇದೆಯನ್ನು ಮದ್ಯವ್ಯಸನಿ ಎಂದು ಬಿಂಬಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅವರನ್ನು ಸೆಂಟರ್‌ಗೆ ಸೇರಿಸುವ ನೆಪದಲ್ಲಿ ಅಲ್ಲಿಗೆ ತೆರಳಿ ಅಂಥೋನಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.