ಬೆಂಗಳೂರಿನ ಬಸ್‌ನಲ್ಲಿ ನಿದ್ದೆಗೆ ಜಾರಿದ್ದ ಯುವತಿಗೆ ಕಿಸ್‌ ಕೊಟ್ಟಿದ್ದ ಯುವಕ ಬಂಧನ!

ಬಸ್‌ ಬೆಂಗಳೂರಿನತ್ತ ಚಲಿಸುತ್ತಿತ್ತು. ಈ ಯುವತಿ ನಿದ್ದೆಗೆ ಜಾರಿದ್ದಳಿ. ಇದೇ ಸಮಯವನ್ನೇ ದುರಪಯೋಗಪಡಿಸಿಕೊಂಡ ಯುವಕ ಆಕೆಗೆ ಕಿಸ್‌ ಮಾಡಿ ಎಸ್ಕೇಪ್‌ ಆಗಿದ್ದಾನೆ. ಇದರಿಂದ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಏನಿದು ಪ್ರಕರಣ, ಈ ಬಸ್‌ ಎಲ್ಲಿಂದ ಬರುತ್ತಿತ್ತು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಬೆಂಗಳೂರಿನ ಬಸ್‌ನಲ್ಲಿ ನಿದ್ದೆಗೆ ಜಾರಿದ್ದ ಯುವತಿಗೆ ಕಿಸ್‌ ಕೊಟ್ಟಿದ್ದ ಯುವಕ ಬಂಧನ!
Linkup
ಬೆಂಗಳೂರು: ತೆಲಗು ನಟ ವಿಜಯ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಗೀತಾ-ಗೋವಿಂದಂ' ಸಿನಿಮಾ ಮಾದರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಮುತ್ತು ಕೊಟ್ಟು ಪರಾರಿಯಾಗಿದ್ದವನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಮಧುಸೂದನ್‌ ರೆಡ್ಡಿ(25) ಬಂಧಿತ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೆಡ್ಡಿ, ವಿಜಯನಗರದಲ್ಲಿ ನೆಲೆಸಿದ್ದ. ಪ್ರತಿಷ್ಠಿತ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿಗೆ ಹೋಗಿದ್ದರು. ಸೆ.12ರ ರಾತ್ರಿ ಬಳ್ಳಾರಿಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಅಪರಿಚಿತ ಪಕ್ಕದಲ್ಲೇ ಕುಳಿತು ಪ್ರಯಾಣ ಬೆಳೆಸಿದ್ದ. ತಲೆಕೆಡಿಸಿಕೊಳ್ಳದ ಯುವತಿ ನಿದ್ದೆಗೆ ಜಾರಿದ್ದಳು. ಸೆ.13ರ ಬೆಳಗಿನ ಜಾವ ಟಿ.ದಾಸರಹಳ್ಳಿ ಬಳಿ ಬಂದಾಗ ಮಲಗಿದ್ದ ಯುವತಿ ಕೆನ್ನೆಗೆ ಚುಂಬಿಸಿದ್ದ. ಇದರಿಂದ ಎಚ್ಚರಗೊಂಡ ಯುವತಿ ಮುತ್ತು ಕೊಟ್ಟವರು ಯಾರು ಎಂದು ನೋಡವಷ್ಟರಲ್ಲೇ ಯುವಕ ಬಸ್‌ನಿಂದ ಇಳಿದು ಪರಾರಿಯಾಗಿದ್ದ. ನೊಂದ ಯುವತಿ, ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.. ಪೀಣ್ಯ ಠಾಣೆ ಪೊಲೀಸರು ಬಾಗಲಗುಂಟೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ಪ್ರಕರಣವನ್ನು ಬಾಗಲಗುಂಟೆ ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದರು. ಇನ್ನು ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು, ತನಿಖೆ ಕೈಗೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಬಸ್‌ಗೆ ಯಾರೆಲ್ಲ ಹತ್ತಿದ್ದರು ಎಂಬುದರ ಬಗ್ಗೆ ಸಿಸಿ ಕ್ಯಾಮೆರಾ ಮತ್ತು ಬಸ್‌ ಟಿಕೆಟ್‌ ಪರಿಶೀಲನೆ ನಡೆಸಿದಾಗ ಆರೋಪಿಯ ಮುಖಚಹರೆ ಪತ್ತೆಯಾಗಿತ್ತು. ಅದನ್ನು ಯುವತಿ ಸಹ ಗುರುತು ಹಿಡಿದಿದ್ದರು. ಈ ಆಧಾರದ ಮೇಲೆ ಬೆನ್ನತ್ತಿದ್ದಾಗ ವಿಜಯನಗರದಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಯುವತಿಯನ್ನು ದುರುಗುಟ್ಟಿ ನೋಡುತ್ತಿದ್ದ! ಇನ್ನೊಂದು ಮಾಹಿತಿಯ ಪ್ರಕಾರ ಯುವತಿಯ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದ ಯುವಕ, ಆಕೆ ಬಸ್‌ಗೆ ಹತ್ತಿದಾಗಿನಿಂದ ಆಕೆಯನ್ನೇ ದುರುಗುಟ್ಟಿ ನೋಡುತ್ತಿದ್ದ ಎನ್ನಲಾಗಿದೆ. ಆ ಕಾಮುಕ ಯುವಕನ ನೋಟಕ್ಕೆ ಕ್ಯಾರೇ ಅನ್ನದ ಯುವತಿ ತನ್ನ ಪಾಡಿಗೆ ತಾನು ಬಸ್‌ನಲ್ಲಿ ಕುಳಿತಿದ್ದರು. ಬಸ್‌ನಲ್ಲಿ ಜನರೂ ಇದ್ದಿದ್ದರಿಂದ ಧೈರ್ಯವಾಗಿ ಪ್ರಯಾಣ ಮುಂದುವರಿಸಿದ್ದರು. ಆದರೆ ಬಳ್ಳಾರಿಯಿಂದ ಹೊರಟ ಬಸ್ ಬೆಳಗಿನ ಜಾವ ಐದು ಗಂಟೆ ಸಮಯದಲ್ಲಿ ಬಸ್‌ ಟಿ. ದಾಸರಹಳ್ಳಿ- ಜಾಲಹಳ್ಳಿ ಕ್ರಾಸ್‌ ಮಧ್ಯೆ ಸಂಚರಿಸುವಾಗ ಕಾಮುಕ ಆಕೆಯ ಸೀಟಿನ ಬಳಿ ಹೋಗಿ ಯುವಕ ಆಕೆಗೆ ಕಿಸ್ ಕೊಟ್ಟು ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.