ಬೆಂಗಳೂರು: ಗಣೇಶೋತ್ಸವ ಆಚರಣೆ ಮೇಲೆ ತೂಗುಗತ್ತಿ, ಸಂಕಷ್ಟದಲ್ಲಿ ಗಣಪತಿ ಮೂರ್ತಿ ತಯಾರಕರು

ಪ್ರತಿ ವರ್ಷ ಪರಿಸರ ಸ್ನೇಹಿ ಗೌರಿ ಮತ್ತು ಗಣೇಶನ ಸಾವಿರಾರು ಮೂರ್ತಿಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದೆವು. ಸಂಭ್ರಮ -ಸಡಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದರು. ಇಂತಹ ಹಬ್ಬದ ಉತ್ಸಾಹ ಮತ್ತು ಧಾವಂತ ಈಗ ಎಲ್ಲೂ ಕಾಣುತ್ತಿಲ್ಲ. ಈ ಬಾರಿ ಮಾರಾಟಗಾರರು ಗಣೇಶನನ್ನು ಅಂಗಡಿಯ ಮುಂದೆ ಇಡಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಮೂರ್ತಿ ತಯಾರಕರೊಬ್ಬರು ತಿಳಿಸಿದ್ದಾರೆ.

ಬೆಂಗಳೂರು: ಗಣೇಶೋತ್ಸವ ಆಚರಣೆ ಮೇಲೆ ತೂಗುಗತ್ತಿ, ಸಂಕಷ್ಟದಲ್ಲಿ ಗಣಪತಿ ಮೂರ್ತಿ ತಯಾರಕರು
Linkup
ವಿ.ಕೃಷ್ಣಮೂರ್ತಿ ವಿಜಯಪುರ ಈ ಬಾರಿ ಗೌರಿ-ಗಣೇಶ ಹಬ್ಬ ಹತ್ತಿರದಲ್ಲೇ ಇದ್ದರೂ ಈ ವರ್ಷವೂ ಹಬ್ಬದ ಸಿದ್ಧತೆಗಳು ನಡೆಯುತ್ತಿಲ್ಲ. ಸಾವಿರಾರು ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದ ಕಲಾವಿದರಿಗೆ ಮತ್ತು ಗಣಪನ ಪ್ರತಿಮೆಯ ಮಾರಾಟ ಮಾಡಿ ಕೊಳ್ಳುವ ವ್ಯಾಪಾರಿಗಳಿಗೂ ಈ ಬಾರಿಯೂ ನಿರಾಸೆಯಾಗಿದೆ. ಆಗಸ್ಟ್‌ ತಿಂಗಳು ಮುಗಿಯುತ್ತಾ ಬಂದರೂ ಗಣೇಶ ಮೂರ್ತಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕಳೆದ ಬಾರಿ ಹೋಲಿಸಿದರೆ ಶೇ.10ರಷ್ಟು ಬುಕ್ಕಿಂಗ್‌ ನಡೆದಿಲ್ಲ ಎಂದು ಕಲಾವಿದೆ ಗೀತಾ ರಾಜಗೋಪಾಲ್‌ ಬೇಸರ ವ್ಯಕ್ತಪಡಿಸಿದ್ದಾರೆ. ಯುವಕರಲ್ಲಿಉತ್ಸಾಹವೇ ಇಲ್ಲ: ಪ್ರತಿ ವರ್ಷ ಪರಿಸರ ಸ್ನೇಹಿ ಗೌರಿ ಮತ್ತು ಗಣೇಶನ ಸಾವಿರಾರು ಮೂರ್ತಿಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದೆವು. ಸಂಭ್ರಮ -ಸಡಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದರು. ಇಂತಹ ಹಬ್ಬದ ಉತ್ಸಾಹ ಮತ್ತು ಧಾವಂತ ಈಗ ಎಲ್ಲೂ ಕಾಣುತ್ತಿಲ್ಲ. ಈ ಬಾರಿ ಮಾರಾಟಗಾರರು ಗಣೇಶನನ್ನು ಅಂಗಡಿಯ ಮುಂದೆ ಇಡಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಳುವವರೇ ಇಲ್ಲ! ನಮ್ಮ ತಾತನ ಕಾಲದಿಂದ ಗಜಾನನ ಮೂರ್ತಿಯನ್ನು ತಯಾರಿಸುತ್ತಿದ್ದೇವೆ. ಈ ಮೂರ್ತಿಗಳಿಗೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ಮತ್ತು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿಯೇ ಬೇಡಿಕೆ ಇತ್ತು. ಆದರೆ ಈ ಬಾರಿ ಬೇಡಿಕೆ ಇಲ್ಲದ ಕಾರಣ ಮೂರ್ತಿಗಳನ್ನು ಹೆಚ್ಚಾಗಿ ತಯಾರಿ ಮಾಡಿಲ್ಲ, ಪ್ರತಿ ವರ್ಷ ಹಬ್ಬಕ್ಕೆ ಸುಮಾರು ಮೂರು ತಿಂಗಳು ಇರುವಾಗಲೇ ಗಣೇಶನ ತಯಾರಿ ನಡೆಯುತ್ತದೆ. ಪ್ರತಿ ವರ್ಷ ಲಕ್ಷಾಂತರ ರೂ ವಹಿವಾಟು ಇರುತ್ತಿತ್ತು. ಮುಂಗಡ ಬುಕಿಂಗ್‌ ಮಾಡಿಕೊಂಡು ಬೇಡಿಕೆ- ನೀಡಿಕೆಗೆ ತಕ್ಕಂತೆ ವ್ಯವಹಾರ ಕುದುರುತ್ತಿತ್ತು. ಆದರೆ ಈ ಬಾರಿ ಕೇಳುವವರೇ ಇಲ್ಲಎನ್ನುತ್ತಾರೆ ಕಲಾವಿದ ಗಗನ್‌. ಗೋದಮಿನಲ್ಲೇ ಉಳಿದಿವೆ! 4 ರಿಂದ 10 ಅಡಿ ವಿನಾಯಕನಿಗೆ ಆಯಾ ವರ್ಷದ ಜನಪ್ರಿಯ ಹೆಸರುಗಳನ್ನು ಇಟ್ಟು ಪ್ರತಿ ವರ್ಷ ಮಾರಾಟ ಮಾಡಲಾಗುತ್ತಿತ್ತು. ಈ ಬಾರಿಯೂ ಕೂಡ ಕೊರೊನಾ ವೈರಸ್‌ನಿಂದ ಎರಡು ವರ್ಷದಿಂದ 4 ಆಡಿ ಮೇಲ್ಪಟ್ಟ ಮೂರ್ತಿಗಳು ಮಾರಾಟವಾಗದೆ ಗೋದಾಮಿನಲ್ಲಿ ನಿಂತ ನೆಲೆಯಾಗಿದೆ. ವಕ್ರತುಂಡನ ಆಕಾರಕ್ಕೆ ಮೆರಗು ನೀಡುತ್ತಿದ್ದ ಕಲಾವಿದರಿಗೂ ಕೂಡ ಬೇಡಿಕೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಕೊರೊನಾ ನಿಯಮಗಳ ಪಾಲನೆ ಜೊತೆ ಸರಳವಾಗಿ ಗಣಪತಿ ಆಚರಣೆಗೆ ಸರಕಾರ ಅನುಮತಿ ನೀಡಿದೆ. ಅದರೆ ಇದನ್ನೇ ನಂಬಿಕೊಂಡು ಬದುಕು ರೂಪಿಸಿ ಕೊಳ್ಳುತ್ತಿದ್ದ ನೂರಾರು ಕುಟುಂಬಗಳಿಗೆ ಸರಕಾರ ಯಾವುದೇ ವಿಶೇಷ ಸವಲತ್ತು ನೀಡಿಲ್ಲ ಎಂದು ಕಲಾವಿದ ಜಿ.ರಾಜಗೋಪಾಲ್‌ ತಿಳಿಸಿದ್ದಾರೆ.