ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರಿ ಪುತ್ರನ ನಾಪತ್ತೆ ಪ್ರಕರಣ; ಕೆಲಸಕ್ಕೆ ಇದ್ದ ಚಾಲಕನಿಂದಲೇ ಕೊಲೆ ಕೃತ್ಯ!

ಹಣ್ಣು ಸರಬರಾಜು ಮಾಡುವ ಟಾಟಾ ಏಸ್‌ ವಾಹನಕ್ಕೆ ತಜೀಮುಲ್ಲಾಪಾಷ ಚಾಲಕನಾಗಿದ್ದ. ವ್ಯಾಪಾರಿಯಾಗಿದ್ದರಿಂದ ಮಣಿ ಅವರ ಬಳಿ ಸದಾ ಹಣ ಇರುತ್ತಿತ್ತು. ಹೀಗಾಗಿ, ತಜೀಮುಲ್ಲಾ ಒಂದೂವರೆ ಲಕ್ಷ ರೂ. ಸಾಲ ಕೇಳಿದ್ದ. ಸಾಲ ಕೊಡಲು ಮಣಿ ನಿರಾಕರಿಸಿದ್ದರು. ತಾನು ಮಣಿಯಂತೆಯೇ ಶ್ರೀಮಂತನಾಗಬೇಕು, ಹಣ ಗಳಿಸಬೇಕು ಎಂಬ ಹುಚ್ಚು ಆಸೆಗೆ ಬಿದ್ದದ್ದ ತಜೀಮುಲ್ಲಾ, ಮಣಿ ಪುತ್ರ ತರುಣ್‌ (20)ನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡುವ ಸಂಚು ರೂಪಿಸಿದ್ದ.

ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರಿ ಪುತ್ರನ ನಾಪತ್ತೆ ಪ್ರಕರಣ; ಕೆಲಸಕ್ಕೆ ಇದ್ದ ಚಾಲಕನಿಂದಲೇ ಕೊಲೆ ಕೃತ್ಯ!
Linkup
: ದಿಢೀರ್‌ ಶ್ರೀಮಂತರಾಗುವ ಆಸೆಯಿಂದ ಮಾಲೀಕನ ಮಗನನ್ನೇ ಅಪಹರಿಸಿ ಮಾಡಿ ಚೀಲದಲ್ಲಿ ತುಂಬಿ ರಾಜಕಾಲುವೆಗೆ ಎಸೆದಿದ್ದ ಸಹೋದರರನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ಪ್ಲಂಬರ್‌ ಕೆಲಸ ಮಾಡುವ ವಾಲ್ಮೀಕಿ ನಗರದ ಸೈಯದ್‌ ನಾಸೀರ್‌ (26), ಜೆಜೆ ನಗರದ ತಜೀಮುಲ್ಲಾಪಾಷ ಸಹೋದರರು ಬಂಧಿತರು. ಆರೋಪಿಗಳು ಭಾರತಿನಗರದ ಹಣ್ಣಿನ ವ್ಯಾಪಾರಿ ಮಣಿ ಎಂಬುವರ ಪುತ್ರ ತರುಣ್‌ನನ್ನು ಅಪಹರಿಸಿ ಕೊಲೆ ಮಾಡಿದ್ದರು. ಮಣಿ ನಗರದ ನಾನಾ ಪ್ರದೇಶದ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಹಾಗೂ ಕಲ್ಯಾಣ ಮಂಟಪಗಳಿಗೆ ಹಣ್ಣು ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು. ಹಣ್ಣು ಸರಬರಾಜು ಮಾಡುವ ಟಾಟಾ ಏಸ್‌ ವಾಹನಕ್ಕೆ ತಜೀಮುಲ್ಲಾಪಾಷ ಚಾಲಕನಾಗಿದ್ದ. ವ್ಯಾಪಾರಿಯಾಗಿದ್ದರಿಂದ ಮಣಿ ಅವರ ಬಳಿ ಸದಾ ಹಣ ಇರುತ್ತಿತ್ತು. ಹೀಗಾಗಿ, ತಜೀಮುಲ್ಲಾ ಒಂದೂವರೆ ಲಕ್ಷ ರೂ. ಸಾಲ ಕೇಳಿದ್ದ. ಸಾಲ ಕೊಡಲು ಮಣಿ ನಿರಾಕರಿಸಿದ್ದರು. ಇದರಿಂದ ಬೇಸರ ಮಾಡಿಕೊಂಡು ಮೂರು ತಿಂಗಳ ಹಿಂದೆ ಕೆಲಸಬಿಟ್ಟು ಹೋಗಿದ್ದ. ತಾನು ಮಣಿಯಂತೆಯೇ ಶ್ರೀಮಂತನಾಗಬೇಕು, ಹಣ ಗಳಿಸಬೇಕು ಎಂಬ ಹುಚ್ಚು ಆಸೆಗೆ ಬಿದ್ದದ್ದ ತಜೀಮುಲ್ಲಾ, ಮಣಿ ಪುತ್ರ ತರುಣ್‌ (20)ನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡುವ ಸಂಚು ರೂಪಿಸಿದ್ದ. ಇದರ ಮಧ್ಯೆ ತರುಣ್‌ ತನ್ನ ತಂದೆಯ ಬಳಿ ಹಣ ಪಡೆದು ದೀಪಾವಳಿ ಹಬ್ಬಕ್ಕೆ ಪಟಾಕಿ ತರಲು ಹೊಸೂರಿಗೆ ಹೋಗುವುದಾಗಿ ನ.1ರಂದು ಮನೆಯಿಂದ ತೆರಳಿದ್ದ. ಈ ವೇಳೆ ಎದುರಿಗೆ ಸಿಕ್ಕಿದ್ದ ತಜೀಮುಲ್ಲಾಪುಟ್ಟೇನಹಳ್ಳಿಯ ಅರೆಕೆರೆಯಲ್ಲಿ ತನ್ನ ಅಕ್ಕನ ಮನೆ ಇದೆ. ಅಲ್ಲಿ ಪಟಾಕಿಯನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ತರುಣ್‌ಗೆ ಹೇಳಿದ್ದಾನೆ. ಇದಕ್ಕೆ ತರುಣ್‌ ಒಪ್ಪದಿದ್ದರೂ, ಮನವೊಲಿಸಿ ಅವರ ಅಕ್ಕನ ಮನೆಯ ತಾರಸಿ ಮೇಲೆ ಕರೆದೊಯ್ದು ತರುಣ್‌ ಬಾಯಿಗೆ ಟೇಪ್‌ ಸುತ್ತಿ, ಹಗ್ಗದಿಂದ ಕೈ-ಕಾಲು ಕಟ್ಟಿದ್ದರು. ಈ ವೇಳೆ ತರುಣ್‌ ಕಿರುಚಲು ಪ್ರಾರಂಭಿಸಿದಾಗ, ಕಿರುಚದಂತೆ ಕುತ್ತಿಗೆ ಹಿಸುಕಿದ್ದಾರೆ. ಇದರಿಂದ ಉಸಿರುಗಟ್ಟಿ ತರುಣ್‌ ಮೃತಪಟ್ಟಿದ್ದಾನೆ. ಇದಾದ ಬಳಿಕ ಮಣಿಗೆ ಕರೆ ಮಾಡಿದ ಕಿರಾತಕ ಸಹೋದರರು, ''ನಿನ್ನ ಪುತ್ರನನ್ನು ಅಪಹರಿಸಿದ್ದೇವೆ, 50 ಲಕ್ಷ ರೂ. ಕೊಟ್ಟರೆ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದಾರೆ. ತಕ್ಷಣವೇ ಮಣಿ ಪೊಲೀಸರನ್ನು ಸಂಪರ್ಕಿಸಿ ಪುತ್ರನ ಅಪಹರಣದ ಕುರಿತು ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಮಾಹಿತಿ ಆರೋಪಿಗಳಿಗೆ ತಿಳಿದುಬಂತು. ಇದರಿಂದ ಹೆದರಿದ ಆರೋಪಿಗಳು, ತರುಣ್‌ ಶವವನ್ನು ಚೀಲದಲ್ಲಿ ತುಂಬಿ ಆರ್‌.ಆರ್‌. ನಗರದ ಡಿಸೋಜ ನಗರದ ರಾಜಕಾಲುವೆಗೆ ಬಿಸಾಡಿ ಪರಾರಿಯಾಗಿದ್ದರು. ನ.2ರಂದು ರಾಜಕಾಲುವೆಯಲ್ಲಿ ಚೀಲ ತೇಲುತ್ತಿರುವುದನ್ನು ನೋಡಿದ ಚಿಂದಿ ಆಯುವವರು ಅದನ್ನು ಪರಿಶೀಲಿಸಿದಾಗ ಶವ ನೋಡಿ ಭಯಗೊಂಡು ಸ್ಥಳೀಯರಿಗೆ ತಿಳಿಸಿದ್ದರು. ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಯುವಕನ ಶವ ಎಂಬುದು ಗೊತ್ತಾಗಿತ್ತು. ಗುರುತು ಹಿಡಿಯಲು ನಾಪತ್ತೆ ದೂರು ನೀಡಿದ್ದ ಮಣಿ ಅವರನ್ನು ಕರೆಸಿದಾಗ, ಕೊಲೆಯಾಗಿರುವುದು ತಮ್ಮ ಪುತ್ರನೆಂದು ಖಚಿತವಾಗಿತ್ತು. ಬಳಿಕ ಅವರಿಗೆ ಕರೆ ಬಂದಿದ್ದ ಮೊಬೈಲ್‌ ನಂಬರ್‌ನ ಜಾಡು ಹಿಡಿದು ಹೋದಾಗ ಆರೋಪಿಗಳು ಸ್ಯಾಟ್‌ಲೈಟ್‌ ಬಸ್‌ನಿಲ್ದಾಣದ ಬಳಿ ಇರುವುದು ತಿಳಿದುಬಂತು. ಈ ವೇಳೆ ಆರ್‌.ಆರ್‌. ನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಶಿವಣ್ಣ ನೇತೃತ್ವದ ತಂಡ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿಇತರರು ಭಾಗಿಯಾಗಿರುವ ಶಂಕೆಯಿದ್ದು ಅವರ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.