ಬೆಂಗಳೂರು: ಭಾನುವಾರದಿಂದ ಕಲಾಸಿ ಪಾಳ್ಯ, ಕೆ.ಆರ್‌. ಮಾರುಕಟ್ಟೆ ಪುನಾರಂಭ..!

​​ಕೋವಿಡ್‌ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಹೂವಿನ ಮಾರುಕಟ್ಟೆಗೆ ನಿಗದಿತ ಜಾಗ ಇರಲಿಲ್ಲ. ಹೀಗಾಗಿ, ಅವರು ಜಾಗ ಸಿಕ್ಕ ಕಡೆ ವ್ಯಾಪಾರ ನಡೆಸುತ್ತಿದ್ದರು.

ಬೆಂಗಳೂರು: ಭಾನುವಾರದಿಂದ ಕಲಾಸಿ ಪಾಳ್ಯ, ಕೆ.ಆರ್‌. ಮಾರುಕಟ್ಟೆ ಪುನಾರಂಭ..!
Linkup
: ಮೂರು ತಿಂಗಳ ಬಳಿಕ ನಗರದ ಕೃಷ್ಣರಾಜೇಂದ್ರ (ಹೂವು ಮತ್ತಿತರ ಮಾರಾಟ) ಹಾಗೂ ಕಲಾಸಿಪಾಳ್ಯ ತರಕಾರಿ ಸಗಟು ಮಾರುಕಟ್ಟೆಗಳನ್ನು ಪುನಾರಂಭಿಸಲು ಬಿಬಿಎಂಪಿ ಅನುಮತಿ ನೀಡಿದೆ. ಭಾನುವಾರದಿಂದಲೇ ಮಾರುಕಟ್ಟೆ ತೆರೆಯಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ. ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ವಹಿವಾಟು ಪುನಾರಂಭಿಸುವುದಕ್ಕೆ ಬಿಬಿಎಂಪಿ ಅನುಮತಿ ನೀಡಿದೆ. ಅದರಂತೆ ಹೂವಿನ ಮಾರುಕಟ್ಟೆ ಮತ್ತು ತರಕಾರಿ ಮಾರುಕಟ್ಟೆಗಳು ಆರಂಭವಾಗಲಿವೆ. ಕೋವಿಡ್‌ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಹೂವಿನ ಮಾರುಕಟ್ಟೆಗೆ ನಿಗದಿತ ಜಾಗ ಇರಲಿಲ್ಲ. ಹೀಗಾಗಿ, ಅವರು ಜಾಗ ಸಿಕ್ಕ ಕಡೆ ವ್ಯಾಪಾರ ನಡೆಸುತ್ತಿದ್ದರು. ವ್ಯಾಪಾರ ನಿರ್ಬಂಧ ತೆರವಿನ ಆದೇಶ ಕೈ ಸೇರುತ್ತಿದ್ದಂತೆಯೇ ಕೆ. ಆರ್‌. ಮಾರುಕಟ್ಟೆಯ ಕೆಲ ಹೂವಿನ ಮಾರಾಟಗಾರರು ಗುರುವಾರವೇ ಮಳಿಗೆಗಳನ್ನು ತೆರೆದು, ವ್ಯಾಪಾರ ಆರಂಭಿಸಿದರು. ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಪೂಜೆ ಸಲ್ಲಿಸಿ, ವ್ಯಾಪಾರ ವಹಿವಾಟನ್ನು ಆರಂಭಿಸಲಿದ್ದೇವೆ. ನಮಗೆ ಮಾರುಕಟ್ಟೆ ಪುನಾರಂಭಿಸಲು ಅನುಮತಿ ನೀಡಿದ್ದಕ್ಕಾಗಿ ಸಿಎಂ ಮತ್ತು ಬಿಬಿಎಂಪಿ ಆಯುಕ್ತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಕಲಾಸಿಪಾಳ್ಯ ತರಕಾರಿ ಸಗಟು ಮಾರಾಟಗಾರರ ಸಂಘದ ಅಧ್ಯಕ್ಷ ಆರ್‌. ವಿ. ಗೋಪಿ ಹೇಳಿದರು.