ಬೆಂಗಳೂರು: ಹಾಸಿಗೆ ನೀಡಲು ಬೇಡಿಕೊಂಡರೂ ನೀಡಿಲ್ಲ, ಈಗ ಶವ ಬೇಕಾ? ಪತ್ನಿ ಮೃತದೇಹ ನೀಡದೆ ಸತಾಯಿಸಿದ ಪತಿ

ಕೊರೊನಾದಿಂದ ಮೃತಪಟ್ಟ ಮಹಿಳೆಯ ಮೃತದೇಹವನ್ನು ವಿದ್ಯುತ್‌ ಚಿತಾಗಾರಕ್ಕೆ ಕೊಂಡೊಯ್ಯಲು ಪಾಲಿಕೆ ಸಿಬ್ಬಂದಿ, ಪೊಲೀಸರು ಆಂಬ್ಯುಲೆನ್ಸ್‌ನೊಂದಿಗೆ ಹೋಗಿದ್ದರು. ಆದರೆ, ಮಹಿಳೆಯ ಪತಿ ಶವ ನೀಡದೆ, 'ಆಸ್ಪತ್ರೆಗಳಲ್ಲಿ ಹಾಸಿಗೆ ಕೊಡಿಸಲು ಬೇಡಿಕೊಂಡರೂ ನೀಡಲಿಲ್ಲ. ಈಗ ಶವ ತೆಗೆದುಕೊಂಡಲು ಹೋಗಲು ಬಂದಿದ್ದೀರಾ,'' ಎಂದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ನೊಂದ ವ್ಯಕ್ತಿ ತೀವ್ರ ನೋವು ತೋಡಿಕೊಂಡಿದ್ದಾರೆ.

ಬೆಂಗಳೂರು: ಹಾಸಿಗೆ ನೀಡಲು ಬೇಡಿಕೊಂಡರೂ ನೀಡಿಲ್ಲ, ಈಗ ಶವ ಬೇಕಾ? ಪತ್ನಿ ಮೃತದೇಹ ನೀಡದೆ ಸತಾಯಿಸಿದ ಪತಿ
Linkup
ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ಪತ್ನಿಯ ಶವವನ್ನು ಅಂತ್ಯಕ್ರಿಯೆಗೆ ಮತ್ತು ಪೊಲೀಸರಿಗೆ ಒಪ್ಪಿಸದೇ ವ್ಯಕ್ತಿಯೊಬ್ಬರು ಸತಾಯಿಸಿರುವ ಘಟನೆ ನಗರದಲ್ಲಿ ನಡೆದಿದೆ. ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಂದು ವ್ಯಕ್ತಿಯ ಮನವೊಲಿಸಿ ಅಂತ್ಯಕ್ರಿಯೆ ನಡೆಸಿದರು. ಮಹಿಳೆ ಮೃತದೇಹವನ್ನು ವಿದ್ಯುತ್‌ ಚಿತಾಗಾರಕ್ಕೆ ಕೊಂಡೊಯ್ಯಲು ಪಾಲಿಕೆ ಸಿಬ್ಬಂದಿ, ಪೊಲೀಸರು ಆಂಬ್ಯುಲೆನ್ಸ್‌ನೊಂದಿಗೆ ಹೋಗಿದ್ದರು. ಆದರೆ, ಮಹಿಳೆಯ ಪತಿ ಶವ ನೀಡದೆ, 'ಆಸ್ಪತ್ರೆಗಳಲ್ಲಿ ಹಾಸಿಗೆ ಕೊಡಿಸಲು ಬೇಡಿಕೊಂಡರೂ ನೀಡಲಿಲ್ಲ. ಈಗ ಶವ ತೆಗೆದುಕೊಂಡಲು ಹೋಗಲು ಬಂದಿದ್ದೀರಾ,'' ಎಂದು ಆಕ್ರೋಶ ವ್ಯಕ್ತಪಡಿಸಿದರು. ಏನಿದು ಘಟನೆ! ''ಕೋವಿಡ್‌ನಿಂದ ನನ್ನ ಅತ್ತೆ ಹಾಗೂ ಅವರ ತಾಯಿ ಮೃತಪಟ್ಟರು. ನನ್ನ ಪತ್ನಿಗೂ ಸೋಂಕು ತಗುಲಿದಾಗ ಐಸಿಯು ಬೆಡ್‌ ಒದಗಿಸುವಂತೆ ಬೇಡಿಕೊಂಡರೂ ಸಿಗಲಿಲ್ಲ. ಕೌನ್ಸಿಲರ್‌ ಮನೆ ಬಳಿ ಹೋಗಿ ಸಹಾಯ ಕೋರಿದರೂ ಸ್ಪಂದಿಸಲಿಲ್ಲ. ಖಾಸಗಿ ಆಸ್ಪತ್ರೆಗೆ ಸೇರಿಸಲು ಹೋದಾಗ 5 ಲಕ್ಷ ರೂ. ಕೇಳಿದರು. ಪತ್ನಿಯನ್ನು ಯಾರೂ ಬದುಕಿಸಿಕೊಡಲಿಲ್ಲ. ಪತ್ನಿ ಸತ್ತ ನಂತರ ಸಹಾಯವಾಣಿ ಸಿಬ್ಬಂದಿ ಹಾಸಿಗೆ ಕಾಯ್ದಿರಿಸಿರುವುದಾಗಿ ಹೇಳಿದರು. ನನಗೂ ಕೊರೊನಾ ಸೋಂಕು ಇದ್ದು, ಆಸ್ಪತ್ರೆಗೆ ಸೇರಿಸಿ ಬದುಕಿಸಿ ಆಚೆ ಕಳುಹಿಸುವ ಬಗ್ಗೆ ಗ್ಯಾರಂಟಿ ನೀಡಿದರೆ, ಪತ್ನಿಯ ಶವ ತೆಗೆದುಕೊಂಡು ಹೋಗಲು ಬಿಡುತ್ತೇನೆ,'' ಎಂದು ಪಟ್ಟು ಹಿಡಿದರು.