ಬೆಂಗಳೂರು: ಬೇರೆಯವರ ಶವ ಕೊಟ್ಟ ಖಾಸಗಿ ಆಸ್ಪತ್ರೆ; ಮುಖದ ಮೇಲಿನ ಬಟ್ಟೆ ಸರಿಸಿದಾಗ ಸತ್ಯ ಬಯಲು!
ಬೆಂಗಳೂರು: ಬೇರೆಯವರ ಶವ ಕೊಟ್ಟ ಖಾಸಗಿ ಆಸ್ಪತ್ರೆ; ಮುಖದ ಮೇಲಿನ ಬಟ್ಟೆ ಸರಿಸಿದಾಗ ಸತ್ಯ ಬಯಲು!
ಸಾಮಾನ್ಯವಾಗಿ ಕೋವಿಡ್ನಿಂದ ಮೃತಪಟ್ಟವರ ಮೃತದೇಹವನ್ನು ಪ್ಲಾಸ್ಟಿಕ್ನಿಂದ ಸುತ್ತಲಾಗುತ್ತದೆ. ಕೆಲವರು ಮುಖವನ್ನೇ ನೋಡದೆ ತೆಗೆದುಕೊಂಡು ಹೋದರೆ, ಕೆಲವರು ಮಾತ್ರ ನೋಡುತ್ತಾರೆ. ಆದರೆ, ಮೃತರ ಪುತ್ರ ಮುಖದ ಮೇಲಿನ ಬಟ್ಟೆ ಸರಿಸಿ ನೋಡಿದ ಕಾರಣ ಸತ್ಯ ಗೊತ್ತಾಗಿದ್ದು, ಸಂಬಂಧಿಕರು ಧೈರ್ಯ ಮಾಡಿದ ಕಾರಣ ಶವ ಬದಲಾಗುವ ಪ್ರಮೇಯ ತಪ್ಪಿದೆ.
ಬೆಂಗಳೂರು: ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ ಯಾರದ್ದೋ ಶವವನ್ನು ಇನ್ಯಾರಿಗೋ ನೀಡಿದ ಘಟನೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ನಡೆದಿದೆ.
ಮೃತರ ಪುತ್ರ ಮುಖದ ಮೇಲಿನ ಬಟ್ಟೆ ಸರಿಸಿ ನೋಡಿದ ಕಾರಣ ಸತ್ಯ ಗೊತ್ತಾಗಿದ್ದು, ಬಳಿಕ ಆಸ್ಪತ್ರೆ ಸಿಬ್ಬಂದಿ ತಪ್ಪು ಸರಿಪಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಕೋವಿಡ್ನಿಂದ ಮೃತಪಟ್ಟವರ ಮೃತದೇಹವನ್ನು ಪ್ಲಾಸ್ಟಿಕ್ನಿಂದ ಸುತ್ತಲಾಗುತ್ತದೆ. ಕೆಲವರು ಮುಖವನ್ನೇ ನೋಡದೆ ತೆಗೆದುಕೊಂಡು ಹೋದರೆ, ಕೆಲವರು ಮಾತ್ರ ನೋಡುತ್ತಾರೆ. ಆದರೆ, ಸಂಬಂಧಿಕರು ಧೈರ್ಯ ಮಾಡಿದ ಕಾರಣ ಶವ ಬದಲಾಗುವ ಪ್ರಮೇಯ ತಪ್ಪಿದೆ.
ಕಡಬಗೆರೆ ನಿವಾಸಿ ಕೃಷ್ಣಮೂರ್ತಿ (55) ಎಂಬುವರು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಏ. 27ರಂದು ಮೃತಪಟ್ಟಿದ್ದರು. ಹೀಗಾಗಿ ಅವರ ಮೃತದೇಹವನ್ನು ಕುಟುಂಬದವರಿಗೆ ಒಪ್ಪಿಸಿದ್ದರು. ಮೃತದೇಹಕ್ಕೆ ಹಾಕಿದ ಟ್ಯಾಗ್ನಲ್ಲಿ ಕೃಷ್ಣಮೂರ್ತಿ ಅವರ ಹೆಸರು ಹಾಗೂ ವಯಸ್ಸು ಹಾಕಲಾಗಿತ್ತು. ಆದರೆ, ಪುತ್ರ ಮುಖ ನೋಡಿದಾಗ ಅದು ಬೇರೆಯವರ ಶವವಾಗಿತ್ತು.