ನರೇಂದ್ರ ಮೋದಿ ನೀಡಿದ್ದ ಆಫರ್‌ನ್ನು ನಯವಾಗಿ ತಿರಸ್ಕರಿಸಿದ್ದ ಪುನೀತ್ ರಾಜ್‌ಕುಮಾರ್‌!

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರಿಗೆ ರಾಜಕೀಯಕ್ಕೆ ಬರಲು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಆಹ್ವಾನ ನೀಡಿದ್ದರಂತೆ. ಆದರೆ ಅದನ್ನು ಪುನೀತ್ ನಯವಾಗಿ ತಿರಸ್ಕಾರ ಮಾಡಿದ್ದರು.

ನರೇಂದ್ರ ಮೋದಿ ನೀಡಿದ್ದ ಆಫರ್‌ನ್ನು ನಯವಾಗಿ ತಿರಸ್ಕರಿಸಿದ್ದ ಪುನೀತ್ ರಾಜ್‌ಕುಮಾರ್‌!
Linkup
'ಮೆಗಾಸ್ಟಾರ್' ಚಿರಂಜೀವಿ, ಪವನ್ ಕಲ್ಯಾಣ್‌, ರಜನಿಕಾಂತ್ ಮುಂತಾದ ಸ್ಟಾರ್ ನಟರು ಕೂಡ ರಾಜಕೀಯ ಕ್ಷೇತ್ರಕ್ಕೆ ಈಗಾಗಲೇ ಕಾಲಿಟ್ಟಿದ್ದಾರೆ. ಕನ್ನಡದಲ್ಲಿಯೂ ನಟ ಜಗ್ಗೇಶ್, ಸುಮಲತಾ ಅಂಬರೀಷ್, ಶಶಿ ಕುಮಾರ್, ಶ್ರುತಿ, ತಾರಾ ಮುಂತಾದವರು ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ. ಇನ್ನೂ ಕೆಲ ಕಲಾವಿದರು ಚುನಾವಣೆ ಸಂದರ್ಭದಲ್ಲಿ ತಮಗೆ ಇಷ್ಟವಾದ ವ್ಯಕ್ತಿ ಪರವಾಗಿ ಮತಯಾಚನೆ ಮಾಡುತ್ತಾರೆ. ಅಂತೆಯೇ 'ಪವರ್ ಸ್ಟಾರ್' ಅವರಿಗೂ ಕೂಡ ರಾಜಕೀಯಕ್ಕೆ ಬರಲು ಸಾಕಷ್ಟು ಅವಕಾಶಗಳಿತ್ತು. ಸ್ವತಃ ಅವರೇ ಪುನೀತ್‌ಗೆ ರಾಜಕೀಯಕ್ಕೆ ಬರಲು ಆಫರ್ ನೀಡಿದ್ದರು. ಸ್ವತಃ ಡಿಕೆ ಶಿವಕುಮಾರ್ ಕೂಡ ಪುನೀತ್‌ರನ್ನು ರಾಜಕೀಯಕ್ಕೆ ತರಲು ಎಷ್ಟೇ ಪ್ರಯತ್ನಪಟ್ಟರೂ ಆಗಲಿಲ್ಲ ಎಂದು ಪುನೀತ್ ನಿಧನದ ನಂತರ ಹೇಳಿದ್ದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ , ಜಗ್ಗೇಶ್, ನಿರ್ಮಾಪಕ ಎಸ್ ವಿ ಬಾಬು ಅವರು ಪುನೀತ್‌ರನ್ನು ಭೇಟಿ ಮಾಡಿ ರಾಜಕೀಯಕ್ಕೆ ಬರಲು ಆಹ್ವಾನ ನೀಡಿದ್ದರು. "ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ತಂದೆ ಡಾ ರಾಜ್‌ಕುಮಾರ್ ನಡೆದ ಹಾದಿಯಲ್ಲಿ ನಾನು ನಡೆಯುವೆ" ಎಂದು ಪುನೀತ್ ಅಂದು ಹೇಳಿದ್ದರಂತೆ. ಇನ್ನೂ ಸಾಕಷ್ಟು ಸಂದರ್ಶನಗಳಲ್ಲಿಯೂ ಕೂಡ ಪುನೀತ್ ಅದೇ ಮಾತು ಹೇಳಿದ್ದರು. ಸುಮಲತಾ ಅಂಬರೀಷ್ ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ನಿಂತಾಗಲೂ ಕೂಡ ಕೆಲ ನಟರು ಅವರ ಪರ ಮತಯಾಚನೆ ಮಾಡಿದ್ದುಂಟು. ಆದರೆ ಪುನೀತ್ ಮಾತ್ರ ನಾನು ರಾಜಕೀಯದಿಂದ ದೂರ, ಅಂಬರೀಷ್, ಎಚ್‌ ಡಿ ಕುಮಾರಸ್ವಾಮಿ ಕುಟುಂಬದ ಜೊತೆ ಆತ್ಮೀಯ ಸಂಬಂಧವಿದೆ. ಆದರೆ ರಾಜಕೀಯ ವಿಷಯದಿಂದ ದೂರ ಇರುವೆ ಎಂದು ಹೇಳಿದ್ದರು. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅಂದಾಗಲೂ ಕೂಡ ಪುನೀತ್, "ನಾನು ಮೋದಿ ಅವರನ್ನು ಭೇಟಿ ಮಾಡಿದರೆ ರಾಜಕೀಯ ಆಗುತ್ತದೆ, ನನಗೆ ಎಲ್ಲ ಪಕ್ಷಗಳಲ್ಲಿಯೂ ಅಭಿಮಾನಿಗಳು ಇದ್ದಾರೆ. ನಮಗೆ ಎಲ್ಲರೂ ಬೇಕು. ನನಗೆ ರಾಜಕೀಯ ಆಸಕ್ತಿ ಇಲ್ಲ" ಎಂದು ಹೇಳಿದ್ದರು. ಇನ್ನು ನರೇಂದ್ರ ಮೋದಿ ಅವರನ್ನು ಪುನೀತ್ ಒಮ್ಮೆ ಭೇಟಿಯಾದಾಗಲೂ ಕೂಡ ಮೋದಿ ಅವರು ನೀಡಿದ್ದ ಆಫರ್‌ನ್ನು ಪುನೀತ್ ನಯವಾಗಿ ತಿರಸ್ಕಾರ ಮಾಡಿದ್ದರು. ಒಟ್ಟು ಏಳು ನಿಮಿಷಗಳ ಕಾಲ ಪುನೀತ್, ಮೋದಿ ಮಾತುಕತೆ ಮಾಡಿದ್ದರು. ನರೇಂದ್ರ ಮೋದಿ ಅವರಿಗೆ ಡಾ ರಾಜ್‌ಕುಮಾರ್ ಕುರಿತಾದ ಪುಸ್ತಕ ನೀಡಿದ್ದರು. ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ, ಎಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್ ಕುಟುಂಬದ ಜೊತೆ ದೊಡ್ಮನೆಗೆ ಒಳ್ಳೆಯ ಸಂಬಂಧವಿದೆ. ದೊಡ್ಮನೆ ಸಮಾರಂಭವಿರಲೀ ಅಥವಾ ಈ ರಾಜಕೀಯ ಗಣ್ಯರ ಸಮಾರಂಭವಿರಲೀ ಪರಸ್ಪರ ಎಲ್ಲರೂ ಹಾಜರಿ ಹಾಕುತ್ತಾರೆ. ಅಕ್ಟೋಬರ್ 29ರಂದು ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ನಿಧನರಾಗಿರೋದು ಇಡೀ ದೇಶಕ್ಕೆ ಶಾಕಿಂಗ್ ವಿಷಯ ಆಗಿದೆ. ಇನ್ನೂ ಕೂಡ ಅವರು ಇಲ್ಲ ಅನ್ನೋದನ್ನು ಯಾರೂ ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕರು ವಿಧ ವಿಧವಾಗಿ ನಮನ ಸಲ್ಲಿಸುತ್ತಿದ್ದಾರೆ, ಸಾಮಾಜಿಕ ಕಾರ್ಯ ಹಮ್ಮಿಕೊಳ್ಳುತ್ತಿದ್ದಾರೆ.