ಎಚ್ ಡಿ ಕುಮಾರಸ್ವಾಮಿ ಲಾಟರಿ ಸಿಎಂ; ಎಂಪಿ ರೇಣುಕಾಚಾರ್ಯ ವ್ಯಂಗ್ಯ!

ಎಚ್ ಡಿಕೆಗೆ ಸಂಘ ಹಾಗೂ ಬಿಜೆಪಿ ಬಗ್ಗೆ ಟೀಕೆ ಮಾಡದೇ ಇದ್ದರೆ ಊಟ ಸೇರಲ್ಲ. ಎಚ್ ಡಿ ಕುಮಾರಸ್ವಾಮಿ ಎರಡು ಬಾರಿ ಲಾಟರಿ ಸಿಎಂ ಆಗಿದ್ದರು ಎಂದು ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಲಾಟರಿ ಸಿಎಂ; ಎಂಪಿ ರೇಣುಕಾಚಾರ್ಯ ವ್ಯಂಗ್ಯ!
Linkup
ಬೆಂಗಳೂರು: ಎರಡು ಬಾರಿ ಲಾಟರಿ ಸಿಎಂ ಆಗಿದ್ದರು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವ್ಯಾಖ್ಯಾನಿಸಿದ್ದಾರೆ. ವಿಕಾಸಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ಎಚ್ ಡಿಕೆ ಸಂಘ ಹಾಗೂ ಬಿಜೆಪಿ ಬಗ್ಗೆ ಟೀಕೆ ಮಾಡದೇ ಇದ್ದರೆ ಊಟ ಸೇರಲ್ಲ. ಎಚ್ ಡಿಕೆ ಎರಡು ಬಾರಿ ಸಿಎಂ ಲಾಟರಿ ಸಿಎಂ ಆಗಿದ್ದರು ಎಂದರು. ಇದೇ ಸಂದರ್ಭದಲ್ಲಿ, ಯಡಿಯೂರಪ್ಪ ಆಪ್ತರ ಮೇಲಿನ ಐಟಿ ದಾಳಿ ಹಿಂದೆ ಸಿದ್ದರಾಮಯ್ಯ ಕೈವಾಡ ಇದೆ ಎಂಬ ಎಚ್ ಡಿ ಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಐಟಿ ಸ್ವತಂತ್ರ ಸಂಸ್ಥೆ. ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ.‌ ಸಿಎಂ ಅವಧಿ ಎರಡು ಬಾರಿಯೂ ಪೂರ್ಣಗೊಳಿಸಲು ಆಗಿಲ್ಲ. ಈ ಕಾರಣದಿಂದ ಹತಾಶ ಮನೋಭಾವದಿಂದ ಆರೋಪ ಮಾಡಿದ್ದಾರೆ. ಐಟಿ ದಾಳಿಗೂ ಯಡಿಯೂರಪ್ಪಗೂ ಸಂಬಂಧ ಇಲ್ಲ. ಆದರೆ ತಳುಕು ಹಾಕುವ ಕೆಲಸವನ್ನು ಎಚ್ ಡಿಕೆ ಮಾಡುತ್ತಿದ್ದಾರೆ. ಐಟಿ ಯಾರ ಮಾತನ್ನು ಕೇಳಲ್ಲ ಎಂದರು. ಯಡಿಯೂರಪ್ಪ ಅವರನ್ನು ಬಿಜೆಪಿ ಸೈಡ್ ಲೈನ್ ಮಾಡಿಲ್ಲ.‌ ಅವರ ಬಗ್ಗೆ ಎಲ್ಲರಿಗೂ ಗೌರವ ಇದೆ. ಐಟಿ ದಾಳಿ ಯಾಕೆ ಆಯ್ತು ಎಂದು ಚರ್ಚೆ ಮಾಡಲು ಇಷ್ಟ ಪಡಲ್ಲ ಎಂದರು. ಯಡಿಯೂರಪ್ಪ ಆಪ್ತರಾಗಿರುವ ನಿಮಗೆ ಐಟಿ ದಾಳಿ ಭಯ ಇದ್ಯಾ? ಎಂಬ ಪ್ರಶ್ನೆಗೆ ನನಗೆ ಯಾವುದೇ ಭಯ ಇಲ್ಲ. ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಕಡಿವಾಣ ಹಾಕಿಲ್ಲ. ಯಡಿಯೂರಪ್ಪ ಪಕ್ಷಕ್ಕೆ ಸಂಘಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ನಾನು ಒಂಟಿ ಸಲಗ ಎಂದು ಎಲ್ಲೂ ಹೇಳಿಲ್ಲ. ರಾಷ್ಟ್ರೀಯ ರಾಜ್ಯ ನಾಯಕರು ಚರ್ಚೆ ಮಾಡಿ ರಾಜ್ಯ ಪ್ರವಾಸ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು. ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಟ್ಟಿದ್ದು, ಯಡಿಯೂರಪ್ಪ ಅವರು ಅಸೆಂಬ್ಲಿಗೆ ಗೈರಾಗಲ್ಲ, ಅವಶ್ಯಕತೆ ಬಿದ್ದಾಗ ಸದನದಲ್ಲಿ ಉತ್ತಮ ಚರ್ಚೆ ಮಾಡ್ತಾರೆ, ಶಿಸ್ತಿನ ಸಿಪಾಯಿಯಾಗಿ ಇದ್ದಾರೆ. ಆ ಕಾರಣಕ್ಕಾಗಿ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿ ನೀಡಿದ್ದು ಬಿಜೆಪಿ ಅಲ್ಲ, ಬದಲಾಗಿ ಸದನ ಸಮಿತಿ ನೀಡಿದೆ ಎಂದರು‌.