ಐಐಎಸ್‌ಸಿ ತುಂಬಾ ದುಬಾರಿ, ಅದರ ಬಗ್ಗೆ ವಿಶ್ವಾಸಾರ್ಹತೆ ಇಲ್ಲ: ಹೈಕೋರ್ಟ್‌ ಸಿಜೆ

ಪ್ರತಿಷ್ಠಿತ ಐಐಎಸ್‌ಸಿ ತುಂಬಾ ದುಬಾರಿ ಸಂಸ್ಥೆ. ಕೇವಲ ನೀರಿನ ಗುಣಮಟ್ಟದ ಪರಿಶೀಲನೆಗಾಗಿಯೇ 20 ಲಕ್ಷ ರೂಪಾಯಿ ಕೇಳುತ್ತಿದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಬೇಸರ ವ್ಯಕ್ತಪಡಿಸಿದ್ದಾರೆ.

ಐಐಎಸ್‌ಸಿ ತುಂಬಾ ದುಬಾರಿ, ಅದರ ಬಗ್ಗೆ ವಿಶ್ವಾಸಾರ್ಹತೆ ಇಲ್ಲ: ಹೈಕೋರ್ಟ್‌ ಸಿಜೆ
Linkup
ಬೆಂಗಳೂರು: ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ () ತುಂಬಾ ದುಬಾರಿ ಸಂಸ್ಥೆ. ಕೇವಲ ನೀರಿನ ಗುಣಮಟ್ಟದ ಪರಿಶೀಲನೆಗಾಗಿಯೇ 20 ಲಕ್ಷ ರೂ. ಕೇಳುತ್ತಿದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಕಾಮಾಕ್ಷಿಪಾಳ್ಯದ ಕೈಗಾರಿಕಾ ಪ್ರದೇಶದಲ್ಲಿನ ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ಸಿಜೆ ನೇತೃತ್ವದ ನ್ಯಾಯಪೀಠದ ಮುಂದೆ ನಡೆಯುತ್ತಿತ್ತು. ಆಗ ನಿವಾಸಿಗಳ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್‌, "ಮಾಲಿನ್ಯದ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಗಳಲ್ಲಿ ಸಾಕಷ್ಟು ವ್ಯತ್ಯಯಗಳಿವೆ. ಹಾಗಾಗಿ, ಯಾವುದಾದರೂ ಮೂರನೇ ಏಜೆನ್ಸಿಗೆ ನೀಡುವುದು ಒಳ್ಳೆಯದು. ಐಐಎಸ್ಸಿಗೆ ಬೇಕಿದ್ದರೆ ವಹಿಸಬಹುದು," ಎಂದು ಸಲಹೆ ನೀಡಿದರು. ಆಗ ಮುಖ್ಯ ನ್ಯಾಯಮೂರ್ತಿಗಳು, "ಐಐಎಸ್ಸಿ ತುಂಬಾ ದುಬಾರಿ. ಇತ್ತೀಚೆಗೆ ಕೇವಲ ನೀರಿನ ಗುಣಮಟ್ಟದ ಪರಿಶೀಲನೆಗೆ 20 ಲಕ್ಷ ರೂ. ಪ್ರಸ್ತಾವನೆ ಕಳುಹಿಸಿದೆ. ಅದೂ ಮುಂಗಡವಾಗಿ ಹಣ ನೀಡಬೇಕಂತೆ. ಹಾಗಾಗಿ ಆ ಸಂಸ್ಥೆಯನ್ನು ಬಿಟ್ಟುಬಿಡಿ," ಎಂದು ಮೌಖಿಕವಾಗಿ ಹೇಳಿದರು. ಅಲ್ಲದೆ, ಕಳೆದ ವಾರ ಮತ್ತೊಂದು ಪ್ರಕರಣದ ವಿಚಾರಣೆ ವೇಳೆಯೂ ಸಿಜೆ "ಐಐಎಸ್‌ಸಿ ಬಗ್ಗೆ ನಮಗೆ ಯಾವುದೇ ಒಲವು ಉಳಿದಿಲ್ಲ. ಮಂಗಳೂರಿನ ಪಚ್ಚನಾಡಿ ಘನತ್ಯಾಜ್ಯ ಘಟಕದಿಂದ ಕುಡಿಯುವ ನೀರು ಕಲುಷಿತಗೊಂಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅದನ್ನು ನೋಡಿದ್ದೇವೆ. ನಮ್ಮ ದೃಷ್ಟಿಯಲ್ಲಿ ಐಐಎಸ್‌ಸಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ," ಎಂದು ಬೇಸರ ವ್ಯಕ್ತಪಡಿಸಿದ್ದರು. ಕುಡಿಯುವ ನೀರಿನ ಗುಣಮಟ್ಟ ಪರಿಶೀಲಿಸಿ, ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಕಳೆದ ಅ. 29ರಂದು ಐಐಎಸ್‌ಸಿಗೆ ನಿರ್ದೇಶಿಸಿತ್ತು. ಪ್ರಕರಣ ನ.30ರಂದು ವಿಚಾರಣೆಗೆ ಬಂದಾಗ ಮಂಗಳೂರು ಮಹಾನಗರ ಪಾಲಿಕೆ ಪರ ವಕೀಲರು, "ನೀರಿನ ಗುಣಮಟ್ಟ ಪರಿಶೀಲಿಸಿ, ವರದಿ ನೀಡುವಂತೆ ಐಐಎಸ್‌ಸಿ ನಿರ್ದೇಶಕರಿಗೆ ಪತ್ರ ಬರೆಯಲಾಗಿತ್ತು. ಇದಕ್ಕೆ ಐಐಎಸ್‌ಸಿ ನ. 29ರಂದು ಇ-ಮೇಲ್‌ ಮೂಲಕ ಪ್ರತಿಕ್ರಿಯಿಸಿದ್ದು, ಮೂರು ಕಡೆ ನೀರಿನ ಮಾದರಿ ಸಂಗ್ರಹಿಸಲು 10 ಲಕ್ಷ ರೂ. ಸೇರಿ ನೀರಿನ ಗುಣಮಟ್ಟ ಪರಿಶೀಲಿಸಿ ವರದಿ ನೀಡಲು ಅಂದಾಜು 20 ಲಕ್ಷ ರೂ. ವೆಚ್ಚವಾಗುತ್ತದೆಂದು ಪ್ರಸ್ತಾವನೆ ಸಲ್ಲಿಸಿದೆ," ಎಂದು ತಿಳಿಸಿದ್ದರು. ವಕೀಲರ ಹೇಳಿಕೆಯ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸಿ.ಜೆ. ಅವಸ್ಥಿ ಭಾರತೀಯ ವಿಜ್ಞಾನ ಸಂಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಅದೀಗ ಈ ವಾರವೂ ಪುನರಾವರ್ತನೆಯಾಗಿದೆ.