ಆಫ್ಘನ್ ಬಿಕ್ಕಟ್ಟಿನಿಂದ ಡ್ರೈಫ್ರುಟ್ ದರ ದುಪ್ಪಟ್ಟು, ಆಂತರಿಕ ದ್ರಾಕ್ಷಿ ದರವೂ ತುಟ್ಟಿ

​ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದ ಬಳಿಕ ಆಮದು ಮತ್ತು ರಫ್ತು ವ್ಯವಹಾರವೇ ನಿಂತು ಹೋಗಿದ್ದು, ಭಾರತದ ಒಣಹಣ್ಣು ಉದ್ಯಮದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಬಹುತೇಕ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ.

ಆಫ್ಘನ್ ಬಿಕ್ಕಟ್ಟಿನಿಂದ ಡ್ರೈಫ್ರುಟ್ ದರ ದುಪ್ಪಟ್ಟು, ಆಂತರಿಕ ದ್ರಾಕ್ಷಿ ದರವೂ ತುಟ್ಟಿ
Linkup
  • ಮುಹಮ್ಮದ್ ಆರಿಫ್ ಮಂಗಳೂರು
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದ ಬಳಿಕ ಆಮದು- ರಫ್ತು ವ್ಯವಹಾರವೇ ನಿಂತು ಹೋದ ಹಿನ್ನೆಲೆಯಲ್ಲಿ ಭಾರತದ ಒಣಹಣ್ಣು ಉದ್ಯಮದ ಮೇಲೆ ದೊಡ್ಡ ಪರಿಣಾಮ ಬೀರಿದ್ದು, ಬಹುತೇಕ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ಭಾರತಕ್ಕೆ ಮುಖ್ಯವಾಗಿ ಅಫ್ಘಾನಿಸ್ತಾನದಿಂದ ಅತ್ಯುತ್ತಮ ಗುಣಮಟ್ಟದ ಅಂಜೀರ್(ಫಿಗ್), ಆಪ್ರಿಕೋಟ್, ಹಲವು ಬಗೆಯ ದಾಕ್ಷಿಗಳು, ಪೈನ್ ನಟ್ಸ್ ಮತ್ತು ಸಣ್ಣ ಗಾತ್ರದ ಬಾದಾಮಿ ಆಮದು ಆಗುತ್ತಿದೆ. ಇಂತಹ ಉತ್ಪನ್ನಗಳು ಜಗತ್ತಿನ ಬೇರೆಲ್ಲೂ ಸಿಗುವುದಿಲ್ಲ. ದ್ರಾಕ್ಷಿಯಲ್ಲಂತೂ ಸಣ್ಣ- ದೊಡ್ಡ ಗಾತ್ರ, ಕಪ್ಪು, ಕಂದು ಹೀಗೆ ಹಲವು ಬಗೆ ಇವೆ. 'ನಾವು ಒಂದು ತಿಂಗಳ ಹಿಂದೆ ಅಫಘಾನಿಸ್ತಾಕ್ಕೆ ಡ್ರೈಫ್ರುಟ್ಸ್‌ಗೆ ಕೊಟ್ಟಿದ್ದ ಬೇಡಿಕೆ ಇನ್ನೂ ಪೂರೈಕೆಯಾಗಿಲ್ಲ. ಈಗ ಒಂದು ವಾರದ ಹಿಂದೆ ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಲ್ಲಿಯ ರಫ್ತು ಮಾರುಕಟ್ಟೆ, ಕಂಪ್ಯೂಟರ್ ಸಿಸ್ಟಮ್, ದಾಖಲೆ ಪತ್ರ, ಸಿಬ್ಬಂದಿ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈ ಅನಿಶ್ಚಿತತೆ ಎಷ್ಟು ದಿನ ಇರುತ್ತದೆ ಎಂದು ಗೊತ್ತಿಲ್ಲ' ಎನ್ನುತ್ತಾರೆ ಮಂಗಳೂರಿನ ರೀಮ್ ಟ್ರೇಡರ್ಸ್‍ನ ಮೊಹಮ್ಮದ್ ಮುಖ್ತಾರ್. ಜತೆಗಿನ ಮುಂದಿನ ವ್ಯವಹಾರವು ನಮ್ಮ ದೇಶದ ವಿದೇಶಿ ನೀತಿಯ ಮೇಲೆ ನಿಂತಿದೆ. ಭಾರತವು ಗುಣಮುಟ್ಟದ ನಾಲ್ಕು ಪ್ರಮುಖ ಒಣ ಹಣ್ಣುಗಳಿಗಾಗಿ ಅಫ್ಘಾನಿಸ್ತಾನವನ್ನೇ ಅವಲಂಬಿಸಿರುವುದರಿಂದ ಶೀಘ್ರ ಮತ್ತೆ ವ್ಯವಹಾರ ಆರಂಭಿಸಬಹುದು. ಇಲ್ಲವೇ ದುಬೈ ಮೂಲಕ ಆಮದು ಮಾಡಿಕೊಳ್ಳಲು ಅವಕಾಶವಿದೆ. ಆಗ ದರ ಇನ್ನಷ್ಟು ಹೆಚ್ಚಳವಾಗುತ್ತದೆ. ಪಾಕಿಸ್ತಾನದ ರೂಹ್ ಅಫ್ಝಾ ಶರಬತ್ತು ಭಾರತಕ್ಕೆ ಹಿಂದೆ 100 ರೂ.ಗೆ ಮಾರಾಟವಾಗುತ್ತಿತ್ತು. ಪುಲ್ವಾಮ ದಾಳಿ ಬಳಿಕ ಆಮದು ನಿಂತಿತ್ತು. ಈಗ ದುಬೈ ಮೂಲಕ ಬರುತ್ತಿದ್ದು, ಮಂಗಳೂರು ಮಾರುಕಟ್ಟೆಯಲ್ಲಿ ಈಗ ಒಂದು ಬಾಟಲು ದರ 350 ರೂ. ಆಗಿದೆ. ಬಾದಾಮಿ ದರ ದುಪ್ಪಟ್ಟುಭಾರತಕ್ಕೆ ಶೇ.90ರಷ್ಟು ಬಾದಾಮಿ ಕ್ಯಾಲಿಫೋರ್ನಿಯಾ ಮತ್ತು ಶೇ.10ರಷ್ಟು ಮಾತ್ರ ಇರಾನ್‍ನಿಂದ ಬರುತ್ತದೆ. ಬಾದಾಮಿ ರಖಂ ದರ 550 ರೂ.ನಿಂದ ಏಕಾಏಕಿ ಒಂದು ಸಾವಿರ ರೂ.ಗೆ ಹೆಚ್ಚಳವಾಗಿದೆ. ಈಗ ನಾಲ್ಕು ದಿನಗಳಲ್ಲಿ 100 ರೂ. ಕಡಿಮೆಯಾಗಿ 900 ರೂ.ಗೆ ಬಂದು ನಿಂತಿದೆ. ಚಿಲ್ಲರೆ ಪ್ರತಿ ಕೆ.ಜಿ. ದರ 800 ರೂ.ನಿಂದ 1500 ರೂ. ತನಕ ಹೋಗಿದೆ. ಇದಕ್ಕೂ ಅಫ್ಘನ್ ಸಮಸ್ಯೆಗೂ ಸಂಬಂಧವಿಲ್ಲ. ಕ್ಯಾಲುಫೋರ್ನಿಯಾದಿಂದ ಬಾದಾಮಿ ಸಹಿತ ಸರಕು ಹಡಗು ಭಾರತಕ್ಕೆ ಬರಲು ಎರಡು ತಿಂಗಳು ಬೇಕು. ಕೋವಿಡ್‍ನಿಂದ ಎರಡು ತಿಂಗಳು ಹಡಗು ಸಂಚಾರ ಸ್ಥಗಿಗೊಂಡು ಒಟ್ಟು ನಾಲ್ಕು ತಿಂಗಳು ವಿಳಂಬವಾಗಿ ಬಾದಾಮಿ ಕೊರತೆ ಎದುರಾಗಿದೆ. ಈಗ ಶಿಪ್ಪಿಂಗ್ ಉದ್ಯಮ ಪುನಾರಂಭಗೊಂಡಿದ್ದು, 25 ದಿನಗಳಲ್ಲಿ ಬರಲಿದ್ದು, ಆಗ ಮತ್ತೆ 100 ರೂ. ಕಡಿಮೆಯಾಗಲಿದೆ ಎನ್ನುತ್ತಾರೆ ಮುಖ್ತಾರ್.

ಪ್ರಮುಖ ಒಣ ಹಣ್ಣು ಪಿಸ್ತಾವನ್ನು ಇರಾನ್‍ನಿಂದ ಆಮದು ಮಾಡಿಕೊಳ್ಳುತ್ತಿದ್ದು, ಹಡಗು ಸಂಚಾರದ ಸಮಸ್ಯೆಯಿಂದ ಅದರ ಬೆಲೆಯೂ ಕೆ.ಜಿ. ಮೇಲೆ ಸುಮಾರು 100 ರೂ. ಹೆಚ್ಚಳವಾಗಿದೆ. ಸುಯೇಜ್ ಕಾಲುವೆಗಳಲ್ಲಿ ಹಡಗುಗಳಿಗೆ ತಡೆಯಾದ ಕಾರಣ ಕಳೆದ ತಿಂಗಳು ಫಿಸ್ತಾ ಬರಲು ವಿಳಂಬವಾಗಿ, ಇಡೀ ವ್ಯವಹಾರದ ಮೇಲೆ ಹೊಡೆತ ಬಿದ್ದಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಖರ್ಜೂರ ಋತು ಮುಕ್ತಾಯಗೊಂಡು, ಹೊಸ ಬೆಳೆ ನವೆಂಬರ್ ವೇಳೆಗೆ ಬರಲಿದೆ. ಈಗ ಮಾರುಕಟ್ಟೆಯಲ್ಲಿ ಕೊರತೆ ಇದೆ. ಅದರ ದರವೂ ಪ್ರತಿ ಕೆಜಿ ಮೇಲೆ ಶೇ.10ರಷ್ಟು ಹೆಚ್ಚಳವಾಗಿದೆ. ದಿಲ್ಲಿ ಮಾರುಕಟ್ಟೆಯಲ್ಲೇ ಎಲ್ಲ ಒಣ ಹಣ್ಣುಗಳ ದರದಲ್ಲಿ ಶೇ.15ರಷ್ಟು ಹೆಚ್ಚಳವಾಗಿದೆ. ಇಲ್ಲೂ ದರ ಹೆಚ್ಚಳಅಫ್ಘಾನಿಸ್ತಾನದಿಂದ ಸದ್ಯ ದ್ರಾಕ್ಷಿ ಆಮದು ನಡೆಯದು ಎಂದು ತಿಳಿದ ತಕ್ಷಣ, ಕರ್ನಾಟಕ- ಮಹಾರಾಷ್ಟ್ರ ಗಡಿ ಪ್ರದೇಶ, ಬಿಜಾಪುರ, ಸಾಂಗ್ಲಿ, ನಾಸಿಕ್, ಪಂಡರಪುರದಲ್ಲಿ ಬೆಳೆಯುವ ದ್ರಾಕ್ಷಿಯ ದರವನ್ನೂ ಏಕಾಏಕಿ ಹೆಚ್ಚಿಸಲಾಗಿದೆ. ದೇಶೀಯ ಉತ್ಪನ್ನಗಳಾದ ಗರಮ್ ಮಸಾಲೆ ದರವೂ ಹೆಚ್ಚಳವಾಗಿದೆ ಎನ್ನುತ್ತಾರೆ ಇಂಡಿಯನ್ ಫುಡ್ ಉದ್ಯಮಿ ತುಫೈಲ್ ಅಹ್ಮದ್.