ಅಧಿವೇಶನ ಅಂತ್ಯಗೊಳಿಸಲು ವಿಪಕ್ಷಗಳ ಬೆದರಿಕೆಯೇ ಕಾರಣ: ಸಚಿವ ಪ್ರಲ್ಹಾದ್ ಜೋಶಿ

ಸಂಸತ್ ಅಧಿವೇಶನವನ್ನು ಹಠಾತ್ತಾಗಿ ಮೊಟಕುಗೊಳಿಸಲು ವಿರೋಧಪಕ್ಷಗಳ ವರ್ತನೆಯೇ ಕಾರಣ. ಯಾವುದೇ ಮಸೂದೆ ಅಂಗೀಕರಿಸಿದರೂ ಮತ್ತಷ್ಟು ಹಾನಿ ಮಾಡುವುದಾಗಿ ವಿಪಕ್ಷಗಳು ಬೆದರಿಕೆ ಹಾಕಿದ್ದವು ಎಂದು ಕೇಂದ್ರ ಸರಕಾರ ಪ್ರತ್ಯಾರೋಪ ಮಾಡಿದೆ.

ಅಧಿವೇಶನ ಅಂತ್ಯಗೊಳಿಸಲು ವಿಪಕ್ಷಗಳ ಬೆದರಿಕೆಯೇ ಕಾರಣ: ಸಚಿವ ಪ್ರಲ್ಹಾದ್ ಜೋಶಿ
Linkup
ಹೊಸದಿಲ್ಲಿ: ಅಧಿವೇಶನ ನಿಗದಿಗಿಂತ ಎರಡು ದಿನಗಳ ಮುನ್ನವೇ ಮೊಟಕುಗೊಳ್ಳುವಂತೆ ಮಾಡಿದ್ದು ವಿರೋಧಪಕ್ಷಗಳ ಅಡ್ಡಿಪಡಿಸುವ ಹಾಗೂ ಬೆದರಿಕೆಯ ವರ್ತನೆ ಎಂದು ಆರೋಪಿಸಿರುವ , ಅದಕ್ಕಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ. ಸಂಸತ್ ಭದ್ರತೆಯ ಭಾಗವಾಗಿಲ್ಲದ ಹೊರಗಿನವರನ್ನು ಕರೆತಂದು, ಮಹಿಳಾ ಸಂಸದರು ಸೇರಿದಂತೆ ವಿಪಕ್ಷಗಳ ನಾಯಕರು ಹಾಗೂ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು 12 ವಿರೋಧಪಕ್ಷಗಳ ಜಂಟಿ ತಂಡ ಆರೋಪಿಸಿದೆ. ಸಂಸತ್ ಭವನದ ಮುಂದೆ ಪ್ರತಿಭಟನಾ ಮೆರವಣಿಗೆಯನ್ನೂ ನಡೆಸಿವೆ. 'ಈ ದೇಶದ ಜನರು ಸರಕಾರಕ್ಕೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕರ್ತವ್ಯವೊಂದನ್ನು ನೀಡಿದ್ದಾರೆ. ಆದರೆ ಸಂಸತ್ತು ಕಾರ್ಯನಿರ್ವಹಿಸದಂತೆ ವಿಪಕ್ಷಗಳು ಸಂಪೂರ್ಣ ಅಡ್ಡಿಪಡಿಸುವುದನ್ನು ನಾವೆಲ್ಲರೂ ಕಂಡಿದ್ದೇವೆ. ಮೊಸಳೆ ಕಣ್ಣೀರು ಸುರಿಸುವ ಬದಲು ವಿರೋಧಪಕ್ಷವು ನಾಚಿಗೆಪಡಬೇಕು ಮತ್ತು ಈ ದೇಶದ ಜನತೆಯ ಕ್ಷಮೆ ಯಾಚಿಸಬೇಕು' ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಆಗ್ರಹಿಸಿದರು. 'ವಿರೋಧಪಕ್ಷಗಳ ಸದಸ್ಯರು ಮಂಗಳವಾರ ರಾಜ್ಯಸಭೆಯ ಮೇಜುಗಳ ಮೇಲೆ ಹತ್ತಿ ನಿಂತಿದ್ದರು. ಅದಕ್ಕೆ ಅವರು ತಮ್ಮ ಬಗ್ಗೆ ತಾವು ಹೆಮ್ಮೆ ಪಡುತ್ತಿದ್ದರು. ತಾವೇನನ್ನೋ ಮಹತ್ವದ್ದನ್ನು ಸಾಧಿಸಿದ್ದೇವೆ ಎಂದು ಭಾವಿಸಿದ್ದರು. ಆ ಘಟನೆಯ ವಿಡಿಯೋಗಳನ್ನೂ ಹಂಚಿಕೊಂಡಿದ್ದರು' ಎಂದು ಸಂಸದೀಯ ವ್ಯವಹಾರಗಳ ಸಚಿವ ಆರೋಪಿಸಿದರು. 'ಸರಕಾರ ಯಾವುದೇ ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಿಸಿದರೆ ಮತ್ತಷ್ಟು ಹಾನಿ ಮಾಡುವುದಾಗಿ ಅಕ್ಷರಶಃ ಬೆದರಿಕೆ ಹಾಕಿದ್ದರು. ಸಂಸತ್‌ಗೆ ಇನ್ನಷ್ಟು ಗಂಭೀರ ಹಾನಿ ಮಾಡುವ ಬೆದರಿಗೆ ಕಾರಣದಿಂದಲೇ ನಾವು ಮುಂಗಾರು ಅಧಿವೇಶನವನ್ನು ಎರಡು ದಿನ ಮುನ್ನವೇ ಮುಗಿಸುವ ತೀರ್ಮಾನ ತೆಗೆದುಕೊಳ್ಳಬೇಕಾಯಿತು' ಎಂದು ಅವರು ಹೇಳಿದರು. 'ವಿರೋಧಪಕ್ಷಗಳ ವರ್ತನೆ ಸಂಸದೀಯ ಪಟುಗಳ ಘನತೆಗೆ ತಕ್ಕುದ್ದಲ್ಲ. ಅವರು ಪೀಠೋಪಕರಣಗಳನ್ನು ಒಡೆದರು, ಬಾಗಿಲುಗಳನ್ನು ಒಡೆದರು, ಹೇಳಿಕೆಗಳನ್ನು ನೀಡುವಾಗ ಸಚಿವರಿಂದ ಕಾಗದಗಳನ್ನು ಕಸಿದುಕೊಂಡರು, ಮಾರ್ಷಲ್‌ಗಳ ಮೇಲೆ ಹಲ್ಲೆ ನಡೆಸಿದರು, ಮಹಿಳಾ ಮಾರ್ಷಲ್‌ಗೆ ಗಾಯ ಮಾಡಿದರು, ಪೀಠೋಪಕರಣಗಳ ಮೇಲೆ ಹತ್ತಿ ನಿಂತರು, ಮೇಜು ಹಾಗೂ ಕುರ್ಚಿಗಳನ್ನು ಒದ್ದರು... ಇದೆಲ್ಲವೂ ಒಪ್ಪುವಂತಹ ವರ್ತನತೆಯಲ್ಲ. ಅವರು ಇಡೀ ದೇಶಕ್ಕೆ ಅವಮಾನ ಮಾಡಿದ್ದಾರೆ' ಎಂದು ಸಚಿವ ಪಿಯೂಶ್ ಗೋಯಲ್ ಟೀಕಿಸಿದರು.