9 ರಾತ್ರಿ ನಡೆಯುವ ಕಥೆಯೇ 'ದಸರಾ'; ಸತೀಶ್ ನೀನಾಸಂ, ಶರ್ಮಿಳಾ ಮಾಂಡ್ರೆ ನಟನೆ

ನಟ ಸತೀಶ್‌ ನೀನಾಸಂ ನಟನೆಯ 'ದಸರಾ' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಸಿನಿಮಾದಲ್ಲಿ ಸತೀಶ್‌ ಮತ್ತು ಶರ್ಮಿಳಾ ಅವರ ಪಾತ್ರಗಳು ಭಿನ್ನವಾಗಿದ್ದು, ಆ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.

9 ರಾತ್ರಿ ನಡೆಯುವ ಕಥೆಯೇ 'ದಸರಾ'; ಸತೀಶ್ ನೀನಾಸಂ, ಶರ್ಮಿಳಾ ಮಾಂಡ್ರೆ ನಟನೆ
Linkup
(ಹರೀಶ್‌ ಬಸವರಾಜ್‌) ಕೆಲ ದಿನಗಳ ಹಿಂದೆಯಷ್ಟೆ ವಿಭಿನ್ನ ಕಥೆ ಇರುವ ತಮಿಳು ಸಿನಿಮಾದಲ್ಲಿ ನಟಿಸಿದ್ದ ನೀನಾಸಂ ಸತೀಶ್‌, 'ದಸರಾ' ಸಿನಿಮಾದಲ್ಲಿ ಡಿಟೆಕ್ಟಿವ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಸಿನಿಮಾದಲ್ಲಿ ನಾಯಕಿಯಾಗಿರುವ ಲಂಡನ್‌ ಮೂಲದ ಪತ್ರಕರ್ತೆಯಾಗಿ ನಟಿಸುತ್ತಿದ್ದಾರೆ. 'ಕಹಿ', 'ಅಳಿದು ಉಳಿದವರು' ಸಿನಿಮಾ ಮೂಲಕ ಗಮನ ಸೆಳೆದಿದ್ದ ಅರವಿಂದ ಶಾಸ್ತ್ರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದೆ. 'ದಸರಾ ಥ್ರಿಲ್ಲರ್‌ ಮಾದರಿಯ ಸಿನಿಮಾ. ಬೆಂಗಳೂರಿನಲ್ಲಿ ಮತ್ತು ಲಂಡನ್‌ನಲ್ಲಿ 20 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ನಿರ್ದೇಶಕರು ಕಥೆ ಹೇಳಿದಾಗ 'ಲೂಸಿಯಾ' ಸಿನಿಮಾದ ನಂತರ ವಿಭಿನ್ನ ಸ್ಕ್ರೀನ್‌ಪ್ಲೇ ಹೊಂದಿರುವ ಕಥೆ ಎಂಬ ಭಾವನೆ ಮೂಡಿತು. ನಾನು ಖಾಸಗಿ ಡಿಟೆಕ್ಟಿವ್‌ ಆಗಿ ಕಾಣಿಸಿಕೊಂಡಿದ್ದೇನೆ. ಸಾಮಾನ್ಯವಾಗಿ ಕಮರ್ಷಿಯಲ್‌ ಸಿನಿಮಾಗಳು, ಹಾಸ್ಯ ಪ್ರಧಾನ ಸಿನಿಮಾಗಳನ್ನು ಮಾಡುತ್ತಿರುತ್ತೇನೆ. ಆದರೆ ಈ ರೀತಿಯ ಕಥೆಗಳು ಸಿಗುವುದು ಅಪರೂಪ' ಎಂದು ಹೇಳುತ್ತಾರೆ ನೀನಾಸಂ ಸತೀಶ್‌. 'ನವರಾತ್ರಿಯ ಸಮಯದಲ್ಲಿಕೊಲೆಗಳಾಗುತ್ತವೆ. ಆ ಕೊಲೆಗಳನ್ನು ಬೆನ್ಹತ್ತುವ ಕಥಾನಾಯಕ ಮತ್ತು ನಾಯಕಿಯ ಸುತ್ತ ಸಿನಿಮಾದ ಕಥೆ ಓಡುತ್ತದೆ. ಆ ಕೊಲೆಗಳಿಗೂ ಹಬ್ಬಕ್ಕೂ ಏನಾದರೂ ಸಂಬಂಧ ಇದೆಯಾ ಎಂಬುದು ಸಹ ಸಿನಿಮಾದಲ್ಲಿ ತಿಳಿಯುತ್ತದೆ. ಸತೀಶ್‌ ಮೊದಲ ಬಾರಿಗೆ ಪತ್ತೆದಾರನಾಗಿ ಕಾಣಿಸಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಲಂಡನ್‌ ಮೂಲದ ಪತ್ರಕರ್ತೆಯಾಗಿದ್ದಾರೆ. ಇಬ್ಬರ ಪಾತ್ರಗಳೂ ವಿಭಿನ್ನವಾಗಿವೆ. ಇದುವರೆಗೂ ಇಬ್ಬರೂ ಈ ರೀತಿಯ ಪಾತ್ರಗಳನ್ನು ನಿರ್ವಹಿಸಿಲ್ಲ' ಎಂದು ಮಾಹಿತಿ ನೀಡಿದರು ನಿರ್ದೇಶಕ ಅರವಿಂದ ಶಾಸ್ತ್ರಿ. ರುಕ್ಮಿಣಿ ವಿಜಯ್‌ ಕುಮಾರ್‌ ಖ್ಯಾತ ಭರತನಾಟ್ಯ ಕಲಾವಿದೆ ಮತ್ತು 'ಭಜರಂಗಿ' ಸಿನಿಮಾದ ಮೂಲಕ ಗಮನ ಸೆಳೆದಿದ್ದ ನಟಿ ರುಕ್ಮಿಣಿ ವಿಜಯ್‌ ಕುಮಾರ್‌ 'ದಸರಾ' ಸಿನಿಮಾದಲ್ಲಿ ನಟಿಸಿದ್ದಾರೆ. 'ರುಕ್ಮಿಣಿ ವಿಜಯ್‌ಕುಮಾರ್‌ ಅವರು ಇಲ್ಲಿ ಡಿಟೆಕ್ಟಿವ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'ಭಜರಂಗಿ' ಸಿನಿಮಾದ ನಂತರ ಅವರು ನಟಿಸುತ್ತಿರುವ ಕನ್ನಡ ಸಿನಿಮಾ ಇದಾಗಿದೆ' ಎಂದರು ನಿರ್ದೇಶಕ ಅರವಿಂದ್‌. 'ದಸರಾ' ಸಿನಿಮಾದ ಶೇ. 90ರಷ್ಟು ಚಿತ್ರೀಕರಣ ರಾತ್ರಿಯ ಹೊತ್ತಿನಲ್ಲಿಯೇ ನಡೆದಿದೆ. ಸಿನಿಮಾದ ಕಥೆ ಕೂಡ ರಾತ್ರಿ ಹೊತ್ತಲ್ಲೇ ನಡೆಯುತ್ತದೆ. ಕೀರ್ತಿರಾಜ್‌, ಅಶ್ವಿನ್‌ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ನಾನು ಮೊದಲ ಬಾರಿಗೆ ಡಿಟೆಕ್ಟಿವ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪಾತ್ರ ಬಹಳ ಸ್ಟೈಲಿಷ್‌ ಆಗಿದ್ದು, ಮೇಕಿಂಗ್‌ ವಿಚಾರದಲ್ಲಿಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಟಿ ಶರ್ಮಿಳಾ ಮಾಂಡ್ರೆಯವರು ಕಲಾವಿದರಾದರೂ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದ್ದಾರೆ ಒಂಬತ್ತು ರಾತ್ರಿಗಳಲ್ಲಿ ನಡೆಯುಂತಹ ಕಥೆ ಇದು. ಆ ಒಂಬತ್ತು ದಿನಗಳಲ್ಲಿ ಕೊಲೆಗಳಾಗುತ್ತವೆ. ಅದು ಯಾಕಾಗುತ್ತದೆ ಎಂದು ಕಂಡುಹಿಡಿಯುವುದೇ ಸಿನಿಮಾದ ಒಟ್ಟು ಕಥೆ. ಸತೀಶ್‌, ಶರ್ಮಿಳಾ, ರುಕ್ಮಿಣಿ ಮೂವರ ಪಾತ್ರಗಳೂ ಕೊಂಚ ವಿಭಿನ್ನವಾಗಿವೆ ಎಂದು ಹೇಳಿದ್ದಾರೆ ನಿರ್ದೇಶಕ ಅರವಿಂದ ಶಾಸ್ತ್ರಿ