ಮೈಸೂರು ಗ್ಯಾಂಗ್ ರೇಪ್: ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು ಎಂದ 'ನವರಸ ನಾಯಕ' ಜಗ್ಗೇಶ್

'ನವರಸನಾಯಕ' ಜಗ್ಗೇಶ್ ಅವರು ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ರೇಪ್ ಬಗ್ಗೆ ಮೌನ ಮುರಿದು, ಆಕ್ರೋಶ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮೈಸೂರು ಗ್ಯಾಂಗ್ ರೇಪ್: ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು ಎಂದ 'ನವರಸ ನಾಯಕ' ಜಗ್ಗೇಶ್
Linkup
ಮೈಸೂರಿನ ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯರೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಲಲಿತಾದ್ರಿ ಪುರ ಬಡಾವಣೆಗೆ ತೆರಳಿದ್ದ ವೇಳೆ ಆಕೆಯ ಮೇಲೆ ಐದಾರು ಮಂದಿ ಯುವಕರಿದ್ದ ತಂಡ ಗ್ಯಾಂಗ್ ರೇಪ್ ನಡೆಸಿದೆ ಎಂದು ಪ್ರಕರಣ ದಾಖಲಾಗಿದೆ. ಈ ಕುರಿತು ನಟ ಟ್ವೀಟ್ ಮಾಡಿದ್ದಾರೆ. "ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಎಲ್ಲ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದರು. ಆ ಟ್ವೀಟ್‌ಗೆ ನವರಸನಾಯಕ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಜಗ್ಗೇಶ್ ಹೇಳಿದ್ದೇನು? "ಎಂಥ ಕ್ರೂರಿಗಳು...ತಾಯಿ ಹೆಣ್ಣಲ್ಲವೆ? ಅಕ್ಕ-ತಂಗಿ ಹೆಣ್ಣಲ್ಲವೆ? ಮಡದಿ ಹೆಣ್ಣಲ್ಲವೆ? ಹೆಣ್ಣು ಗೌರವಿಸದವರು ರಕ್ಕಸರು. ಈ ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು, ಈ ಕ್ರೂರ ಕೃತ್ಯಕ್ಕೆ ಖಂಡನೆ..." ಎಂದು ಜಗ್ಗೇಶ್ ಆಕ್ರೋಶ ಹೊರಹಾಕಿದ್ದಾರೆ. ಸತ್ಯ ಮಾರ್ಗದವರಿಗೆ ರಾಯರು ಇದ್ದಾರೆ ಎಂದ ಅಭಿಮಾನಿ "ಪ್ರತಿ ವರ್ಷ ನಿಮ್ಮ ವ್ಯಕ್ತಿತ್ವದ ಪ್ರಾಮಾಣಿಕತೆಯನ್ನು ನಾಡಿನ ಮುಂದೆ ಸಾಬೀತು ಮಾಡುತ್ತಾ ಬಂದಿದ್ದೀರಿ. ಈ ಪರೀಕ್ಷೆ ಯಾವ ಪಕ್ವಕೆ? ಇನ್ನೂ ಎಷ್ಟು ವರ್ಷಗಳ ನಿಮ್ಮ ಮೇಲೆ ಈ ತರಹದ ಯುದ್ಧ? ಯಾರೇ ಆಗಿರಲಿ ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ, ಸತ್ಯ ಮಾರ್ಗದವರಿಗೆ ರಾಯರು ಇದ್ದಾರೆ" ಎಂದು ಒಬ್ಬರು ಜಗ್ಗೇಶ್‌ಗೆ ಪ್ರಶ್ನೆ ಕೇಳಿದ್ದಾರೆ. ರಾಯರಿದ್ದಾರೆ ಭಯವೇಕೆ ಎಂದ ಜಗ್ಗೇಶ್ ಜಗ್ಗೇಶ್ ಉತ್ತರ ನೀಡಿದ್ದು, "ವಿವೇಕಾನಂದರ ವಾಣಿ, ಪ್ರತಿ ನಿಮಿಷ ಘಂಟೆ ದಿನವಿಡಿ ಶತ್ರು ಬರುತ್ತಾನೆ, ಅವನ ಜೊತೆ ಹೋರಾಡಿ ಗೆಲ್ಲಬೇಕು. ನೆನಪಿಡಿ, ಈ ಹೋರಾಟ ನಿರಂತರ! ಯಾವಾಗ ಈ ಹೋರಾಟ ಸಾಕು ಎನ್ನಿಸುತ್ತದೆ ಅಂದು ಹೊಸ ಅಧ್ಯಾಯ ಪ್ರಾರಂಭ, ಅದುವೆ ಆಧ್ಯಾತ್ಮಿಕ ಜೀವನಕ್ಕೆ ನಾಂದಿ, ಇದೆ ಬದುಕು! ಹೃದಯ ಸ್ವಚ್ಛವಿದ್ದರೆ ದೇವರೆ ನಮ್ಮ ಜೊತೆ ನಿಲ್ಲುತ್ತಾರೆ. ರಾಯರಿದ್ದಾರೆ ಭಯವೇಕೆ?" ಎಂದು ಹೇಳಿದ್ದಾರೆ. ಸ್ವೆಟರ್ ಹಗರಣ ಬಿಬಿಎಂಪಿ 2020-21ನೇ ಸಾಲಿನಲ್ಲಿ ಮಕ್ಕಳಿಗೆ ಸ್ವೆಟರ್‌ಗಳನ್ನು ನೀಡಲು ಅನುದಾನ ಮೀಸಲಿಟ್ಟಿತ್ತು. ಸ್ವೆಟರ್ ಹಂಚುವ ಟೆಂಡರ್‌ನ್ನು ಕೋಮಲ್ ಗಿಟ್ಟಿಸಿಕೊಂಡಿದ್ದರು. ಆರ್ ಅಶೋಕ್ ಹಾಗೂ ಜಗ್ಗೇಶ್ ಒತ್ತಡ ಹಾಕಿಸಿ ಹಣ ಬಿಡುಗಡೆ ಮಾಡಿಸಿದ್ದರು. ಸ್ವೆಟರ್‌ಗಳನ್ನು ವಿದ್ಯಾರ್ಥಿಗಳಿಗೆ ಕೊಡಲಾಗಿದೆ ಎಂದು ಹೇಳಿಕೊಂಡು 1.76 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡಲಾಗಿದೆ'' ಎಂದು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸಿ.ಎಸ್.ರಘು ಆರೋಪ ಮಾಡಿದ್ದಾರೆ. ರಘು ವಿರುದ್ಧ ಜಗ್ಗೇಶ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.