ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು. ಮತ್ತೆ ಬರೋದಿಲ್ಲವೇ ಎಂಬ ಕೊರಗು ಕಾಡುತ್ತಿತ್ತು: ಜಗ್ಗೇಶ್

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ನಿಧನದ ನಂತರದಲ್ಲಿ ಫ್ಯಾನ್ಸ್ ವಾರ್ ನಿಂತಿದೆ. ಈ ಕುರಿತು 'ನವರಸನಾಯಕ' ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು. ಮತ್ತೆ ಬರೋದಿಲ್ಲವೇ ಎಂಬ ಕೊರಗು ಕಾಡುತ್ತಿತ್ತು: ಜಗ್ಗೇಶ್
Linkup
ಅಭಿಮಾನ ಇರಬೇಕು, ಅದು ಮಿತಿ ಮೀರಬಾರದು ಎಂದು ಸಾಕಷ್ಟು ಬಾರಿ ಈ ಮಾತು ಕೇಳಿರಬಹುದು. ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಬಾರಿ ಫ್ಯಾನ್ಸ್ ವಾರ್ ಆಗಿತ್ತು. ಒಂದು ನಟನ ಅಭಿಮಾನಿಗಳು ಇನ್ನೊಬ್ಬ ನಟನನ್ನು ನಿಂದಿಸೋದು, ಮನಬಂದಂತೆ ಮಾತನಾಡೋದು, ಸಿನಿಮಾಗಳನ್ನು ತೆಗಳೋದು ಹೀಗೆ ಸಾಕಷ್ಟು ರೀತಿಯ ಕೆಲಸ ಮಾಡಿದ ಉದಾಹರಣೆಗಳಿವೆ. ಇದರಿಂದ ಆದ ಅನಾಹುತಗಳು ಒಂದೇ ಎರಡೇ. ಸಿನಿಮಾವನ್ನು ಸಿನಿಮಾವಾಗಿ ನೋಡಿದರೆ ಎಷ್ಟು ಚೆನ್ನ, ಯಾಕೆ ಈ ರೀತಿಯ ಮಾತುಗಳು? ಎಂದು ಸಾಕಷ್ಟು ಬಾರಿ ಹಲವರು ಹೇಳಿದ್ದುಂಟು. ಆದರೆ ಈಗ ಎಲ್ಲ ಸರಿ ಹೋಗುವ ರೀತಿಯಲ್ಲಿ ಕಾಣುತ್ತಿದೆ. ಪುನೀತ್ ಸಾವು ಎಲ್ಲರಿಗೂ ಶಾಕ್ ಉಂಟು ಮಾಡಿದೆ ಕನ್ನಡ ಒಂದೇ ಅಲ್ಲದೆ ಬೇರೆ ಭಾಷೆಯ ಚಿತ್ರರಂಗಗಳಲ್ಲಿಯೂ ಕೂಡ ಈ ಫ್ಯಾನ್ಸ್ ವಾರ್ ನಡೆದಿದೆ. ಆದರೆ ಇದರಿಂದ ಆದ ನೋವು-ಆಸ್ತಿ ಹಾನಿ ಒಂದೇ ಎರಡೇ. ನಿಧನ ಇಡೀ ಭಾರತ ಚಿತ್ರರಂಗಕ್ಕೆ ಶಾಕ್ ನೀಡಿದೆ. ಫಿಟ್‌ನೆಸ್, ಆರೋಗ್ಯದ ಕಡೆಗೆ ಸಿಕ್ಕಾಪಟ್ಟೆ ಗಮನಕೊಡುತ್ತಿದ್ದ ಪುನೀತ್‌ಗೆ ಹೃದಯಾಘಾತ ಆಯ್ತು ಎಂದರೆ ಯಾರೂ ಇನ್ನೂ ನಂಬುತ್ತಿಲ್ಲ. ಈ ಸಾವು ನೋಡಿದ ನಂತರದಲ್ಲಿ ಸಾಕಷ್ಟು ಜನರು ಜೀವನ ಶಾಶ್ವತ ಅಲ್ಲ ಅಂತ ಅರಿತುಕೊಂಡಿದ್ದಾರೆ, ಜೀವನ ನಶ್ವರ, ಈ ಕ್ಷಣ ಅಷ್ಟೇ ನಮ್ಮದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಈ ಜಗಳ-ದ್ವೇಷ ಎಲ್ಲ ಬಿಟ್ಟು ಮುಂದೆ ಸಾಗೋಣ ಎಂಬ ನಿರ್ಧಾರ ಮಾಡಿಕೊಂಡಿದ್ದಾರೆ. ಜಗ್ಗೇಶ್‌ಗೆ ಕೊರಗು ಕಾಡುತ್ತಿತ್ತು, ಏನದು? ನಟ ಕೂಡ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಈ ಭಾವ ನನ್ನಕಣ್ಣಲ್ಲಿ ಆನಂದಭಾಷ್ಪ ತರಿಸಿತು, ಮಾನ್ಯರೇ ನಾವೆಲ್ಲ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ. ಕನ್ನಡಿಗರು ನಮ್ಮ ಬಂಧುಗಳು! ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು. ಮತ್ತೆ ಬರೋದಿಲ್ಲವೇ ಎಂಬ ಕೊರಗು ಕಾಡುತ್ತಿತ್ತು. ಈಗ ಇದನ್ನು ನೋಡಿ ಹಾಲುಜೇನು ಸವಿದಂತೆ ಆಯಿತು. ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿ" ಎಂದು ಜಗ್ಗೇಶ್ ಹೇಳಿದ್ದಾರೆ. "ಕೂಡಿ ಬಾಳಿದರೆ ಸ್ವರ್ಗ...ನಗುತ್ತ ಕೂಡಿದರೆ ನಂದನವನ. ದ್ವೇಷ ಮರೆತು ಹೆಜ್ಜೆಹಾಕಿದರೆ ಮನಸ್ಸು ಮಾನಸಸರೋವರ... ಒಬ್ಬರಿಗೊಬ್ಬರು ಕೈ ಹಿಡಿದು ನಡೆದರೆ ಕೈಲಾಸ ಪ್ರಾಪ್ತಿ..ನಾಲ್ಕು ದಿನದ ಬಾಳಿಗೆ ನಗು ಆಯ್ಕೆಮಾಡಿ..ದ್ವೇಷ ಅಸೂಹೆ ದೂರತಳ್ಳಿ" ಎಂದು ಜಗ್ಗೇಶ್ ಹೇಳಿದ್ದಾರೆ ಅಂದು ಮಾತನ್ನು ಯಾರೂ ತಳ್ಳಿ ಹಾಕುತ್ತಿರಲಿಲ್ಲ. ಅಣ್ಣಾವ್ರ ಸಿನಿಮಾಗಳು ಜೀವನ ಪಾಠ ಹೇಳುತ್ತಿದ್ದವು, ಚಿತ್ರರಂಗ ಒಂದಾಗಿ ಬಾಳುತ್ತಿತ್ತು. ಆ ನಂತರದಲ್ಲಿ ಸಾಕಷ್ಟು ಗೊಂದಲಗಳು, ಸಮಸ್ಯೆಗಳು ಬಂದಿದ್ದವು. ಅದನ್ನು ನೋಡಿದ ನಂತರದಲ್ಲಿ ಜಗ್ಗೇಶ್ ಅವರು "ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು. ಮತ್ತೆ ಬರೋದಿಲ್ಲವೇ ಎಂಬ ಕೊರಗು ಕಾಡುತ್ತಿತ್ತು" ಎಂದು ಹೇಳಿದ್ದಾರೆ.