ವಾಮಾಚಾರ ಹೆಸರಿನಲ್ಲಿ ಬರೋಬ್ಬರಿ 4 ಕೋಟಿ ರೂ. ವಂಚನೆ: ಬೆಂಗಳೂರಿನಲ್ಲಿ ಇಬ್ಬರ ಬಂಧನ!

4.41 ಕೋಟಿ ರೂಪಾಯಿ ನೀಡಿದರೂ ಸಮಸ್ಯೆ ಪರಿಹಾರ ಕಾಣದಿದ್ದಾಗ ದಂಪತಿಗೆ ಅನುಮಾನ ಪ್ರಾರಂಭವಾಗಿದೆ. ತಮ್ಮ ಪತಿಯೊಂದಿಗೆ ಆರೋಪಿಯ ಮನೆಗೆ ತೆರಳಿ ಹಣ ಆಭರಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಆರೋಪಿ ಜಯಶ್ರೀ ಹಾಗೂ ಆಕೆಯ ಸಹಚರರು ದಂಪತಿ ಮೇಲೆ ದೌರ್ಜನ್ಯವೆಸಗಿ ಜೀವ ಬೆದರಿಕೆ ಹಾಕಿದ್ದಾರೆ.

ವಾಮಾಚಾರ ಹೆಸರಿನಲ್ಲಿ ಬರೋಬ್ಬರಿ 4 ಕೋಟಿ ರೂ. ವಂಚನೆ: ಬೆಂಗಳೂರಿನಲ್ಲಿ ಇಬ್ಬರ ಬಂಧನ!
Linkup
ಬೆಂಗಳೂರು: ನಡೆಸಿ ಕೋಟ್ಯಂತರ ರೂ. ವಂಚಿಸಿದ್ದ ಇಬ್ಬರನ್ನು ಬಂಧಿಸಿರುವ ಬಸವನಗುಡಿ ಮಹಿಳಾ ಠಾಣೆ ಪೊಲೀಸರು, ಅವರಿಂದ ಒಂದು ಕೆ.ಜಿ. ಚಿನ್ನಾಭರಣ, 10 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ತ್ಯಾಗರಾಜನಗರದ ನಿವಾಸಿ ಗೀತಾ ಗುರುದೇವ್‌ ನೀಡಿದ ದೂರಿನ ಮೇರೆಗೆ ತ್ಯಾಗರಾಜನಗರದ ಜಯಶ್ರೀ, ರಾಕೇಶ್‌ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಏನಿದು ಘಟನೆ? ಗೀತಾ ಗುರುದೇವ್‌ ಅವರ ಮನೆಗೆ ಆರೋಪಿ ಜಯಶ್ರೀ ಮನೆಗೆಲಸಕ್ಕೆಂದು ಬರುತ್ತಿದ್ದರು. ಇಬ್ಬರ ನಡುವೆ ಒಡನಾಟವಿದ್ದು ಜಯಶ್ರೀ, ಗೀತಾ ಅವರ ವಿಶ್ವಾಸವನ್ನು ಗಳಿಸಿದ್ದಳು. ಇದೇ ಕಾರಣದಿಂದ ಗೀತಾ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಜಯಶ್ರೀ ಜತೆ ಹಂಚಿಕೊಂಡಿದ್ದರು. ಅವರ ಭಾವನಾತ್ಮಕ ಮನಸ್ಥಿತಿ ಅರಿತಿದ್ದ ಜಯಶ್ರೀ ಮಾಟ-ಮಂತ್ರ ಮಾಡಿಸಿ ಪೂಜೆ ಮಾಡಿಸಿದರೆ ಕಷ್ಟ ದೂರವಾಗಲಿದೆ ಎಂದು ಮಹಿಳೆಯನ್ನು ನಂಬಿಸಿದ್ದಳು. ಬಳಿಕ ತಾನು ವಾಮಾಚಾರ ಪೂಜೆಯಲ್ಲಿ ಪರಿಣತಿ ಹೊಂದಿರುವುದಾಗಿಯೂ ಹೇಳಿಕೊಂಡಿದ್ದಳು. ''ನಿಮ್ಮ ಸಂಬಂಧಿಕರ ಪೈಕಿ ಕೆಲವರು ನಿಮಗೆ ಮಾಟ ಮಾಡಿಸಿದ್ದಾರೆ. ಇದರಿಂದ ಹೊರಬರಲು ಮಾಟ ಮಂತ್ರದ ಪೂಜೆ ಮಾಡಿಸಬೇಕಿದೆ'' ಎಂದು ಸಲಹೆ ನೀಡಿದ್ದಳು. ''ಒಂದು ವೇಳೆ ಪೂಜೆ ಮಾಡಿಸದೆ ಹೋದರೆ ನಿಮಗೆ ತೊಂದರೆ ಆಗಬಹುದು. ಇಲ್ಲವೇ ರಕ್ತಕಾರಿ ಸಾಯಬಹುದು'' ಎಂದು ಭೀತಿ ಹುಟ್ಟಿಸಿದ್ದಳು. ಇದರಿಂದ ಆತಂಕಕ್ಕೆ ಒಳಗಾದ ಮಹಿಳೆ ತನ್ನ ಪತಿ ಜತೆ ಚರ್ಚಿಸಿ ವಾಮಾಚಾರ ಮಾಡಿಸಲು ಒಪ್ಪಿಕೊಂಡಿದ್ದರು. ಇದರಂತೆ ಆರೋಪಿ ಹಾಗೂ ಆಕೆಯ ಸಹಚರರು ಮಾಟ ಮಂತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ಮನೆಯ ಮೂಲೆಗಳಲ್ಲಿಟ್ಟು ಹೋಗಿದ್ದರು. ಎಲ್ಲಾ ಮುಗಿದ ಬಳಿಕ ಮೊದಲ ಕಂತಿನಲ್ಲಿ 1.42 ಕೋಟಿ ರೂ. ನೀಡಿದ್ದಾರೆ. ನಂತರ 30 ಲಕ್ಷ, ಬಳಿಕ 1.72 ಕೋಟಿ ರೂ., ಮತ್ತೆ 1.90 ಕೋಟಿ ಹೀಗೆ ಹಲವು ಕಂತುಗಳಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 4.41 ಕೋಟಿ ರೂ. ಹಣವನ್ನು ಆರೋಪಿಗಳು ಸುಲಿಗೆ ಮಾಡಿದ್ದರು. 13 ವಿವಿಧ ಬ್ಯಾಂಕ್‌ ಖಾತೆಗಳಿಂದ ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಸಮಸ್ಯೆ ಪರಿಹಾರವಾಗದಿದ್ದಾಗ ಅನುಮಾನ 4.41 ಕೋಟಿ ರೂಪಾಯಿ ನೀಡಿದರೂ ಸಮಸ್ಯೆ ಪರಿಹಾರ ಕಾಣದಿದ್ದಾಗ ದಂಪತಿಗೆ ಅನುಮಾನ ಪ್ರಾರಂಭವಾಗಿದೆ. ತಮ್ಮ ಪತಿಯೊಂದಿಗೆ ಆರೋಪಿಯ ಮನೆಗೆ ತೆರಳಿ ಹಣ ಆಭರಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಆರೋಪಿ ಜಯಶ್ರೀ ಹಾಗೂ ಆಕೆಯ ಸಹಚರರು ದಂಪತಿ ಮೇಲೆ ದೌರ್ಜನ್ಯವೆಸಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಹಣ ಪಡೆದು ಮೋಸ ಮಾಡಿರುವುದು ಹಾಗೂ ಮಹಿಳೆಗೆ ಮಾನಹಾನಿ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.