ಕೆರೆ ಒತ್ತುವರಿ: ಬೆಂಗಳೂರಿನ 2 ಬಹುಮಹಡಿ ಕಟ್ಟಡಗಳ ನೆಲಸಮಕ್ಕೆ ಎನ್‌ಜಿಟಿ ಆದೇಶ

ಪರಿಸರ ಹಾನಿ ಪುನಶ್ಚೇತನಕ್ಕೆ ಗೋದ್ರೆಜ್‌ ಪ್ರಾಪರ್ಟಿಸ್‌ಗೆ ಯೋಜನಾ ವೆಚ್ಚದ ಶೇ.10 ರಷ್ಟು ದಂಡ ವಿಧಿಸುವುದಾಗಿ ಎನ್‌ಜಿಟಿ ತಿಳಿಸಿದೆ. ಪರಿಸರ ಇಲಾಖೆ ಈ ಮೊದಲು ಸಲ್ಲಿಸಿದ್ದ ಅರ್ಜಿಯಲ್ಲಿ ಯೋಜನಾ ವೆಚ್ಚವು 310 ಕೋಟಿ ರೂ. ಎಂದು ತಿಳಿಸಿತ್ತು. ಆದ್ದರಿಂದ 31 ಕೋಟಿ ರೂ. ದಂಡ ಪಾವತಿಸಲು ನಿರ್ದೇಶಿಸಲಾಗಿದೆ.

ಕೆರೆ ಒತ್ತುವರಿ: ಬೆಂಗಳೂರಿನ 2 ಬಹುಮಹಡಿ ಕಟ್ಟಡಗಳ ನೆಲಸಮಕ್ಕೆ ಎನ್‌ಜಿಟಿ ಆದೇಶ
Linkup
: ನಗರದ ಕೈಕೊಂಡ್ರಹಳ್ಳಿ ಕೆರೆಯ ಬಳಿ ಗೋದ್ರೆಜ್‌ ಪ್ರಾಪರ್ಟೀಸ್‌ ಮತ್ತು ವಂಡರ್‌ ಪ್ರಾಜೆಕ್ಟ್ಸ್ ಡೆವಲಪ್‌ಮೆಂಟ್‌ಗೆ ಸೇರಿದ ಎರಡು ನಿರ್ಮಾಣಕ್ಕೆ 2018ರ ಜನವರಿ 10ರಂದು ಪರಿಸರ ಇಲಾಖೆ ನೀಡಿದ್ದ ಅನುಮತಿಯನ್ನು ಶುಕ್ರವಾರ ರದ್ದುಗೊಳಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (), ಬಹುಮಹಡಿ ಕಟ್ಟಡಗಳನ್ನು ತಕ್ಷಣ ನೆಲಸಮಗೊಳಿಸಲು ಆದೇಶಿಸಿದೆ. ನಗರದ ಎಚ್‌.ಪಿ. ರಾಜಣ್ಣ ಎಂಬುವವರು ಗೋದ್ರೆಜ್‌ ಪ್ರಾಪರ್ಟಿ ಮತ್ತು ವಂಡರ್‌ ಪ್ರಾಜೆಕ್ಟ್ಸ್ ಡೆವಲಪ್‌ಮೆಂಟ್‌ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ವಿಚಾರಣೆ ನಡೆಸಿದ ಎನ್‌ಜಿಟಿ, ಶುಕ್ರವಾರ ಈ ಆದೇಶ ನೀಡಿದೆ. ಎನ್‌ಜಿಟಿ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೊರೆ: 'ಎನ್‌ಜಿಟಿ ಆದೇಶ ಗಮನಕ್ಕೆ ಬಂದಿದೆ. ನಮ್ಮ ಸಮರ್ಥನೆ ಮತ್ತು ವಾದವನ್ನು ಎನ್‌ಜಿಟಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಈ ಪ್ರಕರಣದಲ್ಲಿ ನಮ್ಮ ಅರ್ಹತೆ ಮತ್ತು ನಿಯಮ ಪಾಲನೆ ಬಗ್ಗೆ ನಮಗೆ ವಿಶ್ವಾಸವಿದೆ. ಜವಾಬ್ದಾರಿಯುತ ಕಾರ್ಪೊರೆಟ್‌ ವ್ಯವಹಾರಸ್ಥರಾಗಿ ಸಂಬಂಧಿತ ಎಲ್ಲ ನಿಯಮಗಳನ್ನು ಅನುಸರಿಸಿದ್ದೇವೆ. ಎನ್‌ಜಿಟಿ ಆದೇಶವನ್ನು ಸುಪ್ರೀಕೋರ್ಟ್‌ನಲ್ಲಿ ಪ್ರಶ್ನಿಸಲು ಉದ್ದೇಶಿಸಲಾಗಿದೆ' ಎಂದು ಗೋದ್ರೆಜ್‌ ಪ್ರಾಪರ್ಟೀಸ್‌ನ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಯೋಜನಾ ವೆಚ್ಚದ ಶೇ.10 ರಷ್ಟು ದಂಡ: ಪರಿಸರ ಹಾನಿ ಪುನಶ್ಚೇತನಕ್ಕೆ ಗೋದ್ರೆಜ್‌ ಪ್ರಾಪರ್ಟಿಸ್‌ಗೆ ಯೋಜನಾ ವೆಚ್ಚದ ಶೇ.10 ರಷ್ಟು ದಂಡ ವಿಧಿಸುವುದಾಗಿ ಎನ್‌ಜಿಟಿ ತಿಳಿಸಿದೆ. ಪರಿಸರ ಇಲಾಖೆ ಈ ಮೊದಲು ಸಲ್ಲಿಸಿದ್ದ ಅರ್ಜಿಯಲ್ಲಿ ಯೋಜನಾ ವೆಚ್ಚವು 310 ಕೋಟಿ ರೂ. ಎಂದು ತಿಳಿಸಿತ್ತು. ಆದ್ದರಿಂದ 31 ಕೋಟಿ ರೂ. ದಂಡ ಪಾವತಿಸಲು ನಿರ್ದೇಶಿಸಲಾಗಿದೆ. ಆದೇಶದಲ್ಲಿ ಏನಿದೆ..? - ಪರಿಸರ ಅನುಮತಿ ರದ್ದು, ಬಹು ಮಹಡಿ ಕಟ್ಟಡ ನೆಲಸಮಕ್ಕೆ ಆದೇಶ - ಬಹುಮಹಡಿ ಕಟ್ಟಡ ನೆಲಸಮ ಮತ್ತು ಕೆರೆ ಪರಿಸರ ಪುನಶ್ಚೇತನಗೊಳಿಸಲು 31 ಕೋಟಿ ರೂ. ದಂಡ. - ಕೆರೆ ವ್ಯಾಪ್ತಿಯಲ್ಲಿ ಒಳಚರಂಡಿ ಪೈಪ್‌ಲೈನ್‌ ಅಳವಡಿಸಲು ಅವಕಾಶ ಮಾಡಿಕೊಟ್ಟ ಬಿಬಿಎಂಪಿಗೆ 10 ಲಕ್ಷ ರೂ. ದಂಡ - ಬಿಬಿಎಂಪಿ, ರಾಜ್ಯ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೇತೃತ್ವದಲ್ಲಿ ಪ್ರಾಧಿಕಾರ ರಚನೆ - ಪ್ರಾಧಿಕಾರದ ಮೂಲಕ ದಂಡ ಸ್ವೀಕರಿಸಿ, ಕೆರೆ ಪುನಶ್ಚೇತನ, ಸುತ್ತಮುತ್ತ ಅರಣ್ಯೀಕರಣಕ್ಕೆ ಬಳಸುವುದು - ಕೆರೆ ಪುನಶ್ಚೇತನ ಯೋಜನೆಯನ್ನು ಎರಡು ತಿಂಗಳಲ್ಲಿ ಸಿದ್ಧಗೊಳಿಸಿ, ಒಂದು ವರ್ಷದೊಳಗೆ ಕಾರ್ಯರೂಪಕ್ಕೆ ತರುವುದು - ದಂಡ ಮೊತ್ತ ಕೊರತೆ ಕಂಡುಬಂದಲ್ಲಿ ಅಗತ್ಯ ಹಣಕಾಸಿನ ಸಂಪನ್ಮೂಲವನ್ನು ಬಿಬಿಎಂಪಿ ಭರಿಸಬೇಕು ಅಧಿಕಾರಿಗಳಿಗೆ ಎನ್‌ಜಿಟಿ ಛೀಮಾರಿ: ಬೆಳ್ಳಂದೂರು, ವರ್ತೂರು ಹಾಗೂ ಅಗರ ಕೆರೆಗಳ ಪುನಶ್ಚೇತನ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳಿಗೆ ಬೆಂಡೆತ್ತಿದ ಎನ್‌ಜಿಟಿ, ಕೈಕೊಂಡ್ರಹಳ್ಳಿ ಕೆರೆ ಬಳಿ ಪರಿಸರ ನಿಯಮಗಳ ಉಲ್ಲಂಘನೆ ಬಗ್ಗೆ ಅಧಿಕಾರಿಗಳ ಸಮರ್ಥನೆಯನ್ನು ಖಂಡಿಸಿದೆ. ಅಧಿಕಾರಿಗಳ ವಾಮಮಾರ್ಗದ ಉದ್ದೇಶ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಚ್ಚರಿಕೆ ನೀಡಿದೆ. 'ಕೆರೆ ಬಳಿ ಪರಿಸರ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗುವುದು' ಎಂದು ಎನ್‌ಜಿಟಿ ಹೇಳಿದೆ.