'ಮರೆಯಲ್ಲೇ ಮೆರೆದ ಮಹಾಮಹಿಮ'- ನಿರ್ದೇಶಕ ರೇಣುಕಾ ಶರ್ಮಾ ಬಗ್ಗೆ ನಟ ಶ್ರೀನಿವಾಸಮೂರ್ತಿ ಬಿಚ್ಚಿಟ್ಟ ನೆನಪುಗಳು

'ಅನುಪಮ', 'ಕವಿರತ್ನ ಕಾಳಿದಾಸ', 'ಅಂಜದ ಗಂಡು', 'ಶಬರಿಮಲೆ ಸ್ವಾಮಿ ಅಯ್ಯಪ್ಪ', 'ಕೊಲ್ಲೂರು ಮೂಕಾಂಬಿಕೆ'ಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿದೇರ್ಶಕ ರೇಣುಕಾ ಶರ್ಮಾ. ಅವರು ಕೊರೊನಾದಿಂದ ನಿಧನರಾಗಿದ್ದಾರೆ. ಅವರ ಬಗ್ಗೆ ಹಿರಿಯ ನಟ ಶ್ರೀನಿವಾಸಮೂರ್ತಿ ಮಾತನಾಡಿದ್ದಾರೆ.

'ಮರೆಯಲ್ಲೇ ಮೆರೆದ ಮಹಾಮಹಿಮ'- ನಿರ್ದೇಶಕ ರೇಣುಕಾ ಶರ್ಮಾ ಬಗ್ಗೆ ನಟ ಶ್ರೀನಿವಾಸಮೂರ್ತಿ ಬಿಚ್ಚಿಟ್ಟ ನೆನಪುಗಳು
Linkup
ಶ್ರೀನಿವಾಸಮೂರ್ತಿ, ಹಿರಿಯ ನಟ ಕನ್ನಡ ಚಿತ್ರರಂಗದ ಒಬ್ಬ ಉತ್ತಮ ತಂತ್ರಜ್ಞ. ಕಥೆಗಾರರ ಕಥೆಯನ್ನು ತೆರೆ ಮೇಲೆ ಅವರು ಅದ್ಭುತವಾಗಿ ತರುತ್ತಿದ್ದರು. ಅದಕ್ಕೆ ಉದಾಹರಣೆ ಎಂದರೆ 'ಕವಿರತ್ನ ಕಾಳಿದಾಸ'. ರೇಣುಕಾ ಶರ್ಮಾ ಅವರು ಬಹಳ ವರ್ಷಗಳ ಕಾಲ ದೊಡ್ಡ ದೊಡ್ಡ ನಿರ್ದೇಶಕರ ಜತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅವರು ಸ್ವತಂತ್ರ ನಿರ್ದೇಶಕರಾಗಿದ್ದೇ ಬಹಳ ತಡವಾಗಿ. ಆದರೆ ಮಾಡಿದ ಎಲ್ಲ ಸಿನಿಮಾಗಳೂ ಸೂಪರ್‌ ಹಿಟ್‌ ಆಗಿದ್ದವು. ನಾನು ಅವರ ಏಳೆಂಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಪ್ರತಿಯೊಂದು ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಬಹಳ ಸರಳ ಮತ್ತು ಮಿತಭಾಷಿ. ತಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದರು. ಕವಿರತ್ನ ಕಾಳಿದಾಸದ ಕ್ರೆಡಿಟ್‌ ಅವರದ್ದು 'ಕವಿರತ್ನ ಕಾಳಿದಾಸ' ಎಂದರೆ ಇವತ್ತಿಗೂ ಡಾ. ರಾಜ್‌ಕುಮಾರ್‌ ಮತ್ತು ಭೋಜರಾಜ ಎನ್ನುತ್ತಾರೆ. ಆದರೆ ಅದನ್ನೆಲ್ಲ ಮಾಡಿಸಿದ್ದು ರೇಣುಕಾ ಶರ್ಮಾ ಅವರೇ. ಅವರ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಾಗಲೇ ಇಲ್ಲ. ಅಣ್ಣಾವ್ರು ಕೂಡ ಅವರನ್ನು ಬಹಳ ಇಷ್ಟಪಡುತ್ತಿದ್ದರು. ಅವರ ಕೆಲಸವೇ ಎಲ್ಲರನ್ನು ಹತ್ತಿರವಾಗಿಸಿಕೊಳ್ಳುತ್ತಿತ್ತು. ಕಾಳಿದಾಸ ಸಿನಿಮಾವನ್ನು ಇವತ್ತಿಗೂ ಜನ ಕಣ್ಣು ಮಿಟುಕಿಸದೇ ನೋಡುತ್ತಾರೆ ಎಂದರೆ ಅದರಲ್ಲಿ ರೇಣುಕಾ ಶರ್ಮಾ ಅವರ ಕೆಲಸ ಬಹಳ ದೊಡ್ಡದಿದೆ. ಸ್ಕ್ರಿಪ್ಟ್‌, ಪಾತ್ರಧಾರಿಗಳ ನಟನೆ ಎಲ್ಲವೂ ಬೇರೆ. ನಟನೆಯನ್ನು ತೆಗೆಸಿ, ಒಂದು ಸಿನಿಮಾವಾಗಿಸುವ ಚಾಕಚಕ್ಯತೆ, ಕಲೆ ಬಹಳ ದೊಡ್ಡದು. ಅದು ರೇಣುಕಾ ಶರ್ಮಾ ಅವರಲ್ಲಿ ಬಹಳಷ್ಟಿತ್ತು. 'ಕಾಳಿದಾಸ' ಸಿನಿಮಾ ಸಮಯದಲ್ಲಿ ಸುಮಾರು 35 ದಿನಗಳ ಕಾಲ ಅವರ ಜತೆ ಕೆಲಸ ಮಾಡಿದ್ದೇನೆ. ಬಹಳ ಒಳ್ಳೆಯ ತಂತ್ರಜ್ಞರು ಅವರು. ಮಾಡಿದ್ದೆಲ್ಲವೂ ಹಿಟ್‌ ಸಿನಿಮಾಗಳು ನನಗೆ ತಿಳಿದಿರುವ ಮಟ್ಟಿಗೆ ಅವರು ನಿರ್ದೇಶಕರಾದಾಗ 40 ವರ್ಷ ದಾಟಿತ್ತು. ಹಾಗಾಗಿ ಅವರು ಕಡಿಮೆ ಸಿನಿಮಾ ಮಾಡಿದರು. ಆದರೆ ಮಾಡಿದ್ದರಲ್ಲಿ 'ಕವಿರತ್ನ ಕಾಳಿದಾಸ', 'ಅಂಜದ ಗಂಡು', 'ಶಬರಿಮಲೆ ಸ್ವಾಮಿ ಅಯ್ಯಪ್ಪ', 'ಕೊಲ್ಲೂರು ಮೂಕಾಂಬಿಕೆ' ಸಿನಿಮಾಗಳು 25 ವಾರಕ್ಕೂ ಹೆಚ್ಚಿನ ಪ್ರದರ್ಶನ ಕಂಡಿವೆ. ಇಷ್ಟೆಲ್ಲಾ ಹಿಟ್‌ ಸಿನಿಮಾ ನೀಡಿದರೂ ಅವರು ಯಾವಾಗಲೂ ಎಲೆಮರೆಯ ಕಾಯಿಯಂತೆ ಇರುತ್ತಿದ್ದರು. ಎಂದಿಗೂ ಮುನ್ನೆಲೆಯ ಪ್ರಚಾರಕ್ಕೆ ಬರಲೇ ಇಲ್ಲ. ತಾವಾಯಿತು ತಮ್ಮ ಕೆಲಸವಾಯಿತು. ಒಂದು ವರ್ಷದ ಹಿಂದೆ ಅವರನ್ನು ಭೇಟಿ ಮಾಡಿ ಮಾತನಾಡಿದ್ದೆ. ಮಗಳ ಮನೆಯಲ್ಲಿದ್ದೇನೆ ಎಂದು ಹೇಳಿದ್ದರು. ಚಿತ್ರರಂಗದ ಬಗ್ಗೆ ಏನೂ ಮಾತನಾಡಲಿಲ್ಲ. ತಾವು ಅಂದುಕೊಂಡ ಮಟ್ಟಕ್ಕೆ ಅವಕಾಶ ಸಿಗದೇ ಇದ್ದುದ್ದಕ್ಕೂ ಕೊಂಚ ಬೇಸರಗೊಂಡಿದ್ದರೋ ಏನೋ. ಸಾಹಿತ್ಯದ ಬಗ್ಗೆ, ಪೌರಾಣಿಕ ವಿಷಯ, ಐತಿಹಾಸಿಕ ವಿಷಯಗಳ ಬಗ್ಗೆ ಓದಿ ತಿಳಿದುಕೊಂಡಿದ್ದರು. ಹಾಗಾಗಿ ಅವರು ಅಂತಹ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿದ್ದರು. ಅಧ್ಯಯನ ಮಾಡದೇ ಹೋದರೆ ಆ ರೀತಿಯ ಕಥೆಗಳನ್ನು ತೆರೆ ಮೇಲೆ ತರಲು ಕಷ್ಟವಾಗುತ್ತದೆ. ತುಂಬು ಜೀವನ ನಡೆಸಿದ ರೇಣುಕಾ ಶರ್ಮಾ ಅವರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬೇಸರವಾಯಿತು. ಒಬ್ಬ ಒಳ್ಳೆಯ ತಂತ್ರಜ್ಞ ಮತ್ತು ಚಿತ್ರರಂಗದ ಬಗ್ಗೆ ತಿಳಿದುಕೊಂಡಿದ್ದ ಹಿರಿಯರನ್ನು ನಾವು ಕಳೆದುಕೊಂಡಿದ್ದೇವೆ. ದುಷ್ಯಂತನಾಗಲು ಅಣ್ಣಾವ್ರೇ ಬೇಕು ಅಂದಿದ್ರು 'ಕವಿರತ್ನ ಕಾಳಿದಾಸ' ಸಿನಿಮಾದಲ್ಲಿಶಾಕುಂತಲೆ- ದುಷ್ಯಂತನ ಪಾತ್ರಗಳು ಫ್ಲ್ಯಾಶ್‌ಬ್ಯಾಕ್‌ನಲ್ಲಿಬರುತ್ತವೆ. ಆ ಪಾತ್ರಗಳಿಗೆ ಬೇರೆ ಯಾರನ್ನು ಹಾಕುವುದು ಎಂದು ಇಡೀ ತಂಡ ಹುಡುಕುತ್ತಿದ್ದಾಗ ರೇಣುಕಾ ಶರ್ಮಾ ಅವರು ಡಾ.ರಾಜ್‌ ಅವರೇ ದುಷ್ಯಂತನಾಗಬೇಕು ಎಂದು ಐಡಿಯಾ ಕೊಟ್ಟು ಆ ಪಾತ್ರವನ್ನು ಹಾಕಿಸಿದರು. ಅದು ಇಂದಿಗೂ ಚಿರಸ್ಥಾಯಿಯಾದ ಪಾತ್ರವಾಗಿ ಉಳಿಯಿತು ಎಂದು ಶ್ರೀನಿವಾಸಮೂರ್ತಿ ಹೇಳಿದರು.