ಮಮತಾ ಬ್ಯಾನರ್ಜಿಗೂ ಸೋಷಿಯಲಿಸಂಗೂ ಮದುವೆ!: ಹೀಗೊಂದು ವಿಶಿಷ್ಟ ವಿವಾಹ ಪ್ರಸಂಗ

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಸೋಷಿಯಲಿಸಂ ಮತ್ತು ಮಮತಾ ಬ್ಯಾನರ್ಜಿ ಅವರ ಮದುವೆ ಭಾನುವಾರ ನೆರವೇರಿತು. ಇದೇನು ವಿಚಿತ್ರವಾಗಿದೆಯಲ್ಲ ಎನಿಸುತ್ತಿದೆಯೇ? ಈ ಸ್ಟೋರಿ ಓದಿ...

ಮಮತಾ ಬ್ಯಾನರ್ಜಿಗೂ ಸೋಷಿಯಲಿಸಂಗೂ ಮದುವೆ!: ಹೀಗೊಂದು ವಿಶಿಷ್ಟ ವಿವಾಹ ಪ್ರಸಂಗ
Linkup
ಚೆನ್ನೈ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿನ ಎಡಪಕ್ಷಗಳನ್ನು ಧೂಳೀಪಟ ಮಾಡಿ ಅಧಿಕಾರಕ್ಕೆ ಬಂದವರು. ಎಡಪಕ್ಷಗಳು ಅವರಿಗೆ ಬದ್ಧ ರಾಜಕೀಯ ವೈರಿ. ಆದರೆ ತಮಿಳುನಾಡಿನಲ್ಲಿ ಮತ್ತು ಇಬ್ಬರೂ ಸತಿ-ಪತಿಗಳಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ! ಇದೇನು ವಿಚಿತ್ರ ಎಂದು ಕೇಳುತ್ತೀರಾ? ವಧುವಿನ ಹೆಸರು ಮಮತಾ ಬ್ಯಾನರ್ಜಿ, ವರನ ಹೆಸರು ಸೋಷಿಯಲಿಸಂ. ಇದು ತಮಾಷೆಗಾಗಿ ಯಾರೋ ಸೃಷ್ಟಿಸಿದ ಕಥೆಯಲ್ಲ. ಈ ವಿಶಿಷ್ಟ ಹೆಸರಿನ ಜೋಡಿ ದಾಂಪತ್ಯಕ್ಕೆ ಕಾಲಿರಿಸಿರುವುದು ವಿಚಿತ್ರ ಎನಿಸಿದರೂ, ನಿಜ. ತಮಿಳುನಾಡಿನ ಸೇಲಂನಲ್ಲಿ ನಡೆಯಲಿರುವ ಹೀಗೊಂದು ವಿಶಿಷ್ಟ ಹೆಸರಿನ ಜೋಡಿಯ ಮದುವೆಯ ಸುದ್ದಿ ಕೆಲವು ದಿನಗಳ ಹಿಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿತ್ತು. ಭಾನುವಾರ ಮಮತಾ ಬ್ಯಾನರ್ಜಿ ಮತ್ತು ಸೋಷಿಯಲಿಸಂ ಸಾಂಸಾರಿಕ ಬದುಕನ್ನು ಸ್ವೀಕರಿಸುವ ಮೂಲಕ ಚರ್ಚೆಗೆ ಮಂಗಳ ಹಾಡಿದ್ದಾರೆ. ವಧು ಪಿ. ಮಮತಾ ಬ್ಯಾನರ್ಜಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವೀಧರೆ. ಅವರು ಕಾಂಗ್ರೆಸ್ ಬೆಂಬಲಿತ ಕುಟುಂಬದವರು. ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು. ಪಕ್ಷದಲ್ಲಿದ್ದಾಗ ಫೈರ್ ಬ್ರ್ಯಾಂಡ್ ಎನಿಸಿದ್ದ ಮಮತಾ ಅವರ ಮೇಲಿನ ಅಭಿಮಾನದಿಂದಾಗಿ ಪೋಷಕರು ಮಗಳಿಗೆ ಮಮತಾ ಬ್ಯಾನರ್ಜಿ ಎಂದು ನಾಮಕರಣ ಮಾಡಿದ್ದರು. ಆಕೆಯನ್ನು ವರಿಸಿದ ಯುವಕ ಕೂಡ ಇಂತಹದೇ ರಾಜಕೀಯ ಬೆಂಬಲಿತ ಕುಟುಂಬದವರು. 29 ವರ್ಷದ ವರ ಸೋಷಿಯಲಿಸಂ ಬಿಕಾಂ ಪದವೀಧರನಾಗಿದ್ದು, ಬೆಳ್ಳಿ ಕಾಲ್ಗಡಗಗಳ ವ್ಯಾಪಾರ ನಡೆಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ಸೋಷಿಯಲಿಸಂ ಇಬ್ಬರೂ ಸಂಬಂಧಿಕರು. ಸೋಷಿಯಲಿಸಂ ಅವರ ತಂದೆ ಪಿ. ಮೋಹನ್, ಸೇಲಂನ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿದ್ದಾರೆ. ಸೋವಿಯತ್ ಒಕ್ಕೂಟ ಪತನಗೊಂಡ ಸಂದರ್ಭದಲ್ಲಿ ಅವರು ಮಗನಿಗೆ ಸೋಷಿಯಲಿಸಂ ಎಂದು ಹೆಸರಿಟ್ಟಿದ್ದರು. ವಿಶೇಷವೆಂದರೆ ಅವರ ಇನ್ನಿಬ್ಬರು ಗಂಡುಮಕ್ಕಳ ಹೆಸರು ಕಮ್ಯುನಿಸಂ ಮತ್ತು ಲೆನಿನಿಸಂ! ತಾವು ಮದುವೆಯಾಗುವ ಮುನ್ನವೇ ಹುಟ್ಟುವ ಮಕ್ಕಳಿಗೆ ಏನು ಹೆಸರಿಡಬೇಕೆಂದು ಮೋಹನ್ ನಿರ್ಧರಿಸಿದ್ದರಂತೆ. ಮಮತಾ ಬಹಳ ಗಟ್ಟಿ ಮಹಿಳೆ'ನಾನು ಹತ್ತನೇ ತರಗತಿಯಲ್ಲಿರುವಾಗ, ನನ್ನ ಹೆಸರಿನ ಬಗ್ಗೆ ಸ್ನೇಹಿತರು ಮಾತನಾಡಲು ಆರಂಭಿಸಿದ ಬಳಿಕ ಅದರ ಮಹತ್ವ ಅರ್ಥವಾಯಿತು. ಮಮತಾ ಬ್ಯಾನರ್ಜಿ ಅವರನ್ನು ಸುದ್ದಿಗಳಲ್ಲಿ ಅನೇಕ ಬಾರಿ ನೋಡಿದ್ದೇನೆ. ಅವರು ಬಹಳ ಗಟ್ಟಿಗಾತಿ. ಹೀಗೆ ಹೇಳಲು ನನಗೆ ಹೆಮ್ಮೆಯಾಗುತ್ತಿದೆ' ಎಂದು ವಧು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಎಂದೆಂದೂ ಜತೆಯಾಗಿರುತ್ತೇವೆ!ಸರಳ ಸಮಾರಂಭದಲ್ಲಿ ಇಬ್ಬರ ನೆರವೇರಿತು. ಈ ಎರಡೂ ಹೆಸರುಗಳಿಗೆ ಸಂಬಂಧಿಸಿದ ರಾಜಕೀಯ ವೈರತ್ವ, ಕೌಟುಂಬಿಕ ಸಂಬಂಧಗಳ ಮೇಲೆ ಉಂಟಾಗುವುದಿಲ್ಲ ಎಂದು ವರ ಸೋಷಿಯಲಿಸಂ ಹೇಳುತ್ತಾರೆ. 'ನಾವು ಜತೆಯಾಗುತ್ತಿರುವುದು ತುಂಬಾ ಖುಷಿಯಾಗುತ್ತಿದೆ. ಮುಂಬರುವ ಖುಷಿ ಹಾಗೂ ಸಂಕಷ್ಟದ ಸಮಯಗಳಲ್ಲಿಯೂ ನಾವು ಜತೆಯಾಗಿ ಇರುತ್ತೇವೆ. ಏನೇ ಆದರೂ ನಾವು ಇಡೀ ಬದುಕನ್ನು ಕೂಡಿ ಎದುರಿಸುತ್ತೇವೆ' ಎಂದು ಅವರು ಹೇಳಿದರು. ಸಿಪಿಐ ಮುಖ್ಯಸ್ಥ ಆರ್. ಮುದರಸನ್ ಮತ್ತು ತಿರಪುರ್ ಕ್ಷೇತ್ರದ ಸಿಪಿಐ ಸಂಸದ ಕೆ. ಸುಬ್ಬರಾಯನ್ ಸಮಾರಂಭದಲ್ಲಿ ಭಾಗವಹಿಸಿದ್ದರು.