'ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ…'- ರಕ್ಷಿತ್‌ ಶೆಟ್ಟಿ ಕೊಟ್ಟ 'ಬ್ರೇಕಿಂಗ್ ನ್ಯೂಸ್' ಇದೆ ನೋಡಿ!

'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಅವರು ಸಿಂಪಲ್ ಆಗಿಯೇ ದೊಡ್ಡದೊಂದು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. 'ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ...' ಎಂದು ಹೇಳುತ್ತಲೇ ಅಭಿಮಾನಿಗಳಿಗೆ ದೊಡ್ಡದೊಂದು ಸರ್ಪ್ರೈಸ್ ನೀಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

'ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ…'- ರಕ್ಷಿತ್‌ ಶೆಟ್ಟಿ ಕೊಟ್ಟ 'ಬ್ರೇಕಿಂಗ್ ನ್ಯೂಸ್' ಇದೆ ನೋಡಿ!
Linkup
ನಟ/ನಿರ್ದೇಶಕ ರಕ್ಷಿತ್‌ ಶೆಟ್ಟಿ ಒಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಜುಲೈ 11ರಂದು ಒಂದು ಉತ್ತರ ಕೊಡ್ತಿನಿ ಅಂತ ಅವರು ಈಚೆಗೆ ಹೇಳಿದ್ದರು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಅಂದಹಾಗೆ, ಆ ವಿಷಯದ ಹೆಸರು 'ರಿಚರ್ಡ್‌ ಆಂಟನಿ'! ಹೌದು, ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಸಲ ಬರೀ ನಟನೆ ಮಾತ್ರವಲ್ಲ, ನಿರ್ದೇಶನಕ್ಕೂ ಅವರು ಮುಂದಾಗಿದ್ದಾರೆ. 'ಉಳಿದವರು ಕಂಡಂತೆ' ಚಿತ್ರದ ಕಥೆಯನ್ನು 'ರಿಚರ್ಡ್‌ ಆಂಟನಿ' ಮೂಲಕ ಮುಂದುವರಿಸೋಕೆ ಅವರು ಸಜ್ಜಾಗಿದ್ದಾರೆ. 'ರಿಚರ್ಡ್‌ ಆಂಟನಿ' ಹಣ ಹಾಕುತ್ತಿರುವುದು ! ಹೊಂಬಾಳೆ ಬ್ಯಾನರ್‌ನ 10ನೇ ಸಿನಿಮಾ ಇದು ಕೆಲ ದಿನಗಳ ಹಿಂದಷ್ಟೇ ಹೊಂಬಾಳೆ ಫಿಲ್ಮ್ಸ್‌ನ 9ನೇ ಸಿನಿಮಾ 'ದ್ವಿತ್ವ' ಅನೌನ್ಸ್ ಆಗಿತ್ತು. ಪುನೀತ್ ರಾಜ್‌ಕುಮಾರ್ ಮತ್ತು ಪವನ್‌ ಕುಮಾರ್ ಕಾಂಬಿನೇಷನ್‌ನ ಆ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅದು ಅನೌನ್ಸ್ ಆಗಿ ಕೆಲವೇ ದಿನಗಳಲ್ಲಿ ಇದೀಗ 10ನೇ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ಘೋಷಣೆ ಮಾಡಿದೆ. ಈ ಬಾರಿ ವಿಜಯ್ ಕಿರಗಂದೂರು ಅವರು ರಕ್ಷಿತ್ ಶೆಟ್ಟಿ ಜೊತೆ ಕೈ ಜೋಡಿಸಿದ್ದಾರೆ. 'ಉಳಿದವರು ಕಂಡಂತೆ' ಚಿತ್ರದ 'ರಿಚ್ಚಿ' ಪಾತ್ರದ ಮುಂದುವರಿದ ಭಾಗವೇ '' ಎನ್ನಲಾಗಿದೆ. ರಕ್ಷಿತ್ ಶೆಟ್ಟಿ ಹೇಳಿದ್ದೇನು? ಚಿತ್ರದ ಟೈಟಲ್ ಅನ್ನು ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ, 'ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ... 'ರಿಚರ್ಡ್ ಆಂಟನಿ'- ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ.. ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ' ಎಂದು ಹೇಳಿಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ ತೆರೆಕಂಡ 'ಉಳಿದವರು ಕಂಡಂತೆ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಕಲೆಕ್ಷನ್ ಮಾಡಿರಲಿಲ್ಲ. ಆದರೆ, ಅದೊಂದು ಕಲ್ಟ್‌ ಕ್ಲಾಸಿಕ್ ಸಿನಿಮಾವಾಗಿ ಉಳಿದುಕೊಂಡಿದೆ. ಇಂದಿಗೂ ಆ ಸಿನಿಮಾವನ್ನು ಜನರು ಪ್ರೀತಿಯಿಂದ ನೋಡುತ್ತಾರೆ. ನಿರ್ದೇಶನದ ಮೊದಲ ಸಿನಿಮಾದಲ್ಲಿ ಬಹಳಷ್ಟು ಪ್ರಯೋಗಾತ್ಮಕವಾಗಿ ಕೆಲಸ ಮಾಡಿದ್ದರು ರಕ್ಷಿತ್ ಶೆಟ್ಟಿ. 'ರಿಚರ್ಡ್ ಆಂಟನಿ' ಬಳಗ ಹೇಗಿದೆ? 'ಹೊಂಬಾಳೆ ಫಿಲ್ಮ್ಸ್‌ಗೆ ಇಂದು ಹರುಷದ ದಿನ, ನಮ್ಮ 10ನೇ ಸಿನಿಮಾದ ಶೀರ್ಷಿಕೆ ಅನಾವರಣ ಮಾಡುತ್ತಿದ್ದೇವೆ. ಚಿತ್ರಕ್ಕೆ 'ರಿಚರ್ಡ್ ಆಂಟನಿ' ಎಂದು ಹೆಸರಿಡಲಾಗಿದ್ದು, ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಅವರು ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗೂ ಕರಮ್ ಚಾವ್ಲಾ ಛಾಯಾಗ್ರಹಣವಿರುತ್ತದೆ. ಜನವರಿ, 2022ರಿಂದ ಚಿತ್ರೀಕರಣ ಪ್ರಾರಂಭವಾಗುತ್ತದೆ. ನಿಮ್ಮೆಲ್ಲರ ಸಹಕಾರ ಹಾಗೂ ಪ್ರೀತಿಗೆ ನಾವು ಚಿರಋಣಿ' ಎಂದು ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಹೇಳಿಕೊಂಡಿದ್ದಾರೆ. ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ತಿಕ್ ಗೌಡ ಕೆಲಸ ಮಾಡಲಿದ್ದು, ಸಾಹಸ ನಿರ್ದೇಶನವನ್ನು ವಿಕ್ರಮ್ ಮೋರ್ ಮಾಡಲಿದ್ದಾರೆ.