ಬಿಬಿಎಂಪಿ ಮಾಜಿ ಸದಸ್ಯ ಶಿವಪ್ಪ ಸೂಸೈಡ್‌ ಕೇಸ್; ಆತ್ಮಹತ್ಯೆಗೆ ಪ್ರಚೋದಿಸಿದ 9 ಮಂದಿ ವಿರುದ್ಧ ದೂರು

ಆರೋಪಿಗಳು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಎಂ.ಬಿ.ಶಿವಪ್ಪ ಅವರಿಗೆ ಮೋಸ ಮಾಡಿದ್ದು, ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಮಾಜಿ ಸದಸ್ಯ ಶಿವಪ್ಪ ಸೂಸೈಡ್‌ ಕೇಸ್; ಆತ್ಮಹತ್ಯೆಗೆ ಪ್ರಚೋದಿಸಿದ 9 ಮಂದಿ ವಿರುದ್ಧ ದೂರು
Linkup
ಬೆಂಗಳೂರು: ಬೃಹತ್‌ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ.ಬಿ.ಶಿವಪ್ಪ ಆತ್ಮಹತ್ಯೆಗೆ ಅವರ ಸ್ನೇಹಿತರು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ 9 ಮಂದಿ ವಿರುದ್ಧ ಮೃತರ ಪತ್ನಿ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ. ಮೃತರ ಸ್ನೇಹಿತರಾದ ವಿ.ಧನಂಜಯಗೌಡ, ಬಿ.ಅರುಣ್‌ ಕುಮಾರ್‌, ಅಶೋಕ್‌ ಕುಮಾರ್‌, ಸುಮನ್‌ ಸೇನಾ ಕೋಟ್ಯಾನ್‌, ವೆಂಕಟರಮಣ ರೆಡ್ಡಿ, ರಮಣರೆಡ್ಡಿ, ಕಾಶಿನಾಥ್‌, ಮನೀಸ್‌ ಚಂದಕ್‌ ಮತ್ತು ಗೊವಿಂದರಾಜು ಎಂಬುವವರ ವಿರುದ್ಧ ಮೃತ ಎಂ.ಬಿ.ಶಿವಪ್ಪ ಅವರ ಪತ್ನಿ ಗಾಯತ್ರಿ ದೂರು ನೀಡಿದ್ದಾರೆ. ಈ ಆರೋಪಿಗಳು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಎಂ.ಬಿ.ಶಿವಪ್ಪ ಅವರಿಗೆ ಮೋಸ ಮಾಡಿದ್ದು, ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ದೂರಿನ ವಿವರತಮ್ಮ ಪತಿ ಎಂ.ಬಿ.ಶಿವಪ್ಪ ಅವರು ಎಂಟು ವರ್ಷಗಳ ಹಿಂದೆ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಹಣ ತೊಡಗಿಸಲು ಮುಂದಾದಾಗ ಧನಂಜಯ ಗೌಡ, ರಮಣರೆಡ್ಡಿ, ಬಿ.ಅರುಣ್‌ಕುಮಾರ್‌, ಅಶೋಕ್‌ಕುಮಾರ್‌, ಸುಮನ್‌ ಸೇನಾ ಕೋಟ್ಯಾನ್‌ ಪರಿಚಯವಾಗಿತ್ತು. ಈ ವೇಳೆ ಆರೋಪಿಗಳು ಪತಿಯ ಹೆಸರಿನಲ್ಲಿದ್ದ ನಾಗರಬಾವಿಯಲ್ಲಿನ ಎರಡು ನಿವೇಶನಗಳ ತಕರಾರು ಬಗೆಹರಿಸುವುದಾಗಿ ಮೋಸದಿಂದ ಶಿವಪ್ಪ ಹಾಗೂ ಪುತ್ರ ವಿನಯ್‌ನಿಂದ ಚೆಕ್‌ ಪಡೆದು ಅಗ್ರಿಮೆಂಟ್‌ ಮಾಡಿಕೊಂಡಿದ್ದರು. ಅಂತೆಯೇ ಚಿಕ್ಕಪೇಟೆಯ ಸ್ವತ್ತುಗಳನ್ನು ವೆಂಕಟರಮಣ ರೆಡ್ಡಿ ಮತ್ತು ರಮಣ ರೆಡ್ಡಿ ಹೆಸರಿಗೆ ಮೋಸದಿಂದ ನೋಂದಣಿ ಮಾಡಿದ್ದರು. ಬಳಿಕ ಖಾಲಿ ಚೆಕ್‌ಗಳ ವಿಚಾರವಾಗಿ ಪತಿ ಹಾಗೂ ಪುತ್ರನ ವಿರುದ್ಧ ದೂರು ದಾಖಲಿಸಿದ್ದರು. ಅದರಂತೆ 4 ಕೋಟಿ ರೂ. ಹಣ ಕೊಡದಿದ್ದಲ್ಲಿ ಮರ್ಯಾದೆ ತೆಗೆಯುವುದಾಗಿ ಬೆದರಿಸುತ್ತಿದ್ದರು ಎಂಬ ವಿಚಾರವನ್ನು ಪತಿ ನನ್ನ ಬಳಿ ಹೇಳಿಕೊಂಡಿದ್ದರು ಎಂದು ಗಾಯತ್ರಿ ದೂರಿನಲ್ಲಿ ತಿಳಿಸಿದ್ದಾರೆ. ಇತ್ತ ಮೈಸೂರು ನಿವಾಸಿ ಕಾಶಿನಾಥ್‌ ಮತ್ತು ಕುಟುಂಬದವರು, ಮನೀರ್‌ ಚಂದಕ್‌ ಹಾಗೂ ಗೋವಿಂದರಾಜು ಎಂಬುವವರು ಗೊರೂರು ಗ್ರಾಮದ ಸ್ವತ್ತನ್ನು ಮಾರಾಟ ಮಾಡುವುದಾಗಿ ತಿಳಿಸಿ ಶಿವಪ್ಪ ಮತ್ತು ಅವರ ಪಾಲುದಾರರಿಂದ ಹಣ ಪಡೆದು ಸ್ವತ್ತನ್ನು ನೋಂದಣಿ ಮಾಡದೇ ಕಿರಕುಳ ನೀಡುತ್ತಿದ್ದರು. ಕಳೆದೊಂದು ವಾರದಿಂದ ಈ ವ್ಯಕ್ತಿಗಳು ಪತಿ ಎಂ.ಬಿ.ಶಿವಪ್ಪ ಅವರಿಗೆ ಮಗನ ಭವಿಷ್ಯ ಹಾಳು ಮಾಡುತ್ತೇವೆ. ನಿನ್ನ ಕುಟುಂಬದ ಸದಸ್ಯರನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರಚೋದಿಸಿದ್ದರು. ಇದರ ಬೆನ್ನಲ್ಲೇ ಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗಾಯತ್ರಿ ದೂರಿನಲ್ಲಿ ಕೋರಿದ್ದಾರೆ.