ಬೆಂಗಳೂರು: ಲಸಿಕೆ ಹಾಕಿಸಿಕೊಳ್ಳಲು ಮತ್ತೆ ಸಾಲುಗಟ್ಟಿ ನಿಂತರು

ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿಓಮಿಕ್ರಾನ್‌ ವೈರಸ್‌ ಪತ್ತೆಯಾಗಿ ಆತಂಕ ಮೂಡಿಸಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಜನರು ಲಸಿಕೆ ಹಾಕಿಸಿಕೊಳ್ಳು ಪುನಃ ಲಸಿಕೆ ಕೇಂದ್ರಗಳಿಗೆ ಬರುತ್ತಿದ್ದಾರೆ. ಸಾಲುಗಟ್ಟಿ ನಿಂತರವಲ್ಲಿ ಮೊದಲ ಡೋಸ್‌ ಹಾಕಿಸಿಕೊಳ್ಳಲು ಬಂದವರು ಇದ್ದರು.

ಬೆಂಗಳೂರು: ಲಸಿಕೆ ಹಾಕಿಸಿಕೊಳ್ಳಲು ಮತ್ತೆ ಸಾಲುಗಟ್ಟಿ ನಿಂತರು
Linkup
ಬೆಂಗಳೂರು: ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಕಳೆದ ಒಂದು ತಿಂಗಳಿಂದ ನಿರಾಸಕ್ತಿ ತೋರಿಸಿದ್ದ ಜನರು ಹೊಸ ವೈರಸ್‌ ಭೀತಿ ಹಿನ್ನೆಲೆಯಲ್ಲಿಮತ್ತೆ ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಎರಡನೇ ಡೋಸ್‌ ಅವಧಿ ಮುಗಿದಿದ್ದರೂ ರಾಜ್ಯಾದ್ಯಂತ ಸುಮಾರು 45 ಲಕ್ಷ ಮಂದಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಸರಕಾರ ಹಾಗೂ ಆರೋಗ್ಯ ಸಿಬ್ಬಂದಿ ಪದೇ ಪದೆ ಮನವಿ ಮಾಡದರೂ, ಮೊಬೈಲ್‌ ಕರೆ ಮಾಡಿದರೂ, ಸಂದೇಶ ಕಳುಹಿಸಿದರೂ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದಾಗಿರಲಿಲ್ಲ. ಲಸಿಕೆ ಕಡ್ಡಾಯಗೊಳಿಸಬೇಕು ಎಂಬ ಚರ್ಚೆಗಳು ನಡೆದಿದ್ದವು. ಇದರ ಮಧ್ಯೆ ಮೂರು ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿಓಮಿಕ್ರಾನ್‌ ವೈರಸ್‌ ಪತ್ತೆಯಾಗಿ ಆತಂಕ ಮೂಡಿಸಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಜನರು ಲಸಿಕೆ ಹಾಕಿಸಿಕೊಳ್ಳು ಪುನಃ ಲಸಿಕೆ ಕೇಂದ್ರಗಳಿಗೆ ಬರುತ್ತಿದ್ದಾರೆ. ಸಾಲುಗಟ್ಟಿ ನಿಂತರವಲ್ಲಿ ಮೊದಲ ಡೋಸ್‌ ಹಾಕಿಸಿಕೊಳ್ಳಲು ಬಂದವರು ಇದ್ದರು. ಸೋಮವಾರ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ ಮುಂದೆ ನೂರಾರು ಮಂದಿ ಲಸಿಕೆ ಹಾಕಿಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದರು. ಲಸಿಕೆ ಕೇಂದ್ರ ಪ್ರತಿ ದಿನ ಖಾಲಿ ಇರುತ್ತಿತ್ತು. ಕಳೆದ ಒಂದು ತಿಂಗಳಿಂದ ದಿನಕ್ಕೆ ಸರಾಸರಿ 25-30 ಮಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದರು. ಸೋಮವಾರ 250ಕ್ಕೂ ಹೆಚ್ಚಿನ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ2ನೇ ಡೋಸ್‌ ಪಡೆಯುವವರ ಸಂಖ್ಯೆ ಹೆಚ್ಚಿತ್ತು ಎಂದು ಆರೋಗ್ಯ ಸಿಬ್ಬಂದಿ ಮಾಹಿತಿ ನೀಡಿದರು. ''ನಾನು ಮೂರು ತಿಂಗಳ ಹಿಂದೆಯೇ ಮೊದಲ ಡೋಸ್‌ ಹಾಕಿಸಿಕೊಂಡಿದ್ದೆ. ನಡುವೆ ನನಗೆ ಜ್ವರ ಬಂದಿತು. ಜತೆಗೆ ಮಳೆ ಇದ್ದ ಕಾರಣಕ್ಕೆ 2ನೇ ಡೋಸ್‌ ಹಾಕಿಸಿಕೊಂಡಿರಲಿಲ್ಲ. ಈಗ ಹಾಕಿಸಿಕೊಂಡಿದ್ದೇನೆ'' ಎಂದು ರಾಜಾಜಿನಗರದ ಮಲ್ಲೇಶ್‌ ತಿಳಿಸಿದರು. ಪೊಲೀಸ್‌ಗೆ ಹೆದರಿ ಲಸಿಕೆ ಪಡೆದ ಜನತೆ ನ್ಯಾಮತಿ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿಈವರೆಗೂ ಪಡೆಯದ ನಾಗರೀಕರಿಗೆ ಕಳೆದ ಮೂರು ದಿನಗಳಿಂದ ವಿಶೇಷ ಲಸಿಕಾ ಅಭಿಯಾನ ನಡೆಸಲಾಯಿತು. ಲಸಿಕೆ ಪಡೆದರೆ ಆರೋಗ್ಯ ಕೆಟ್ಟು ಜೀವಹಾನಿ ಆಗುತ್ತದೆ ಎಂದು ನಾಗರೀಕರೊಬ್ಬರು ಲಸಿಕೆ ಪಡೆಯಲು ನಿರಾಕರಿಸಿದಾಗ, ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು ತಿಳುವಳಿಕೆ ನೀಡುತ್ತಿದ್ದರು ಸಂರ್ಪೂಣವಾಗಿ ಲಸಿಕೆ ಹಾಕಿಸಿಕೊಳ್ಳುವುದಿಲ್ಲಎಂದಾಗ, ಪೊಲೀಸ್‌ ಕರೆಸಿ ಲಸಿಕೆ ಹಾಕಿಸಿಬೇಕಾಗುತ್ತದೆ ಎಂದು ಹೆದರಿಸಿ ಲಸಿಕೆ ಹಾಕಿದರು. ನಾಗರಿಕರು ಲಸಿಕೆ ಹಾಕಿಸಿಕೊಳ್ಳುದೇ ಇರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಒಂದು ವೇಳೆ ಆರೋಗ್ಯದಲ್ಲಿಏರುಪೇರಾದರೆ ನೀವೇ ಹೊಣೆಗಾರರು’ ಎಂದು ಎಚ್ಚರಿಕೆ ನೀಡಿದರು. ಲಸಿಕೆ ಪಡೆದ ದಾಖಲಾತಿ ಇದ್ದರೆ ಸರಕಾರಿ ಸೌಲಭ್ಯ ಪಡೆಯಬಹುದು. ಪರಸ್ಥಳಕ್ಕೆ ಹೋದ ವೇಳೆ ಬೇಕಾಗುತ್ತದೆ ಎಂಬುದನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮನದಟ್ಟು ಮಾಡಿದರು.