ಚಿನ್ನ ಮಾರಾಟದ ನೆಪದಲ್ಲಿ ಹಿಂದೂಸ್ತಾನ್‌ ಗೋಲ್ಡ್‌ ಕಂಪನಿಗೆ ಲಕ್ಷಾಂತರ ರೂಪಾಯಿ ವಂಚನೆ

ಜು.17ರಂದು ಸಂಜೆ ಹಿಂದೂಸ್ತಾನ್‌ ಗೋಲ್ಡ್‌ ಕಂಪನಿಯ ಕಾಲ್‌ ಸೆಂಟರ್‌ಗೆ ಕರೆ ಮಾಡಿದ ಆರೋಪಿ ತನ್ನನ್ನು ವಿವೇಕ್‌ ಎಂದು ಪರಿಚಯಿಸಿಕೊಂಡಿದ್ದ. ನನ್ನ ಬಳಿ 121 ಗ್ರಾಂ ಚಿನ್ನಾಭರಣಗಳಿದ್ದು, ಈ ಪೈಕಿ 88 ಗ್ರಾಂ ನನಗೆ ಪರಿಚಯವಿರುವ ಮಾರ್ವಾಡಿ ಅಂಗಡಿಯಲ್ಲಿಅಡವಿಟ್ಟಿದ್ದೇನೆ. ಆ ಚಿನ್ನವನ್ನು ನಿಮಗೆ ಮಾರಾಟ ಮಾಡುತ್ತೇನೆ ಎಂದು ಹೇಳಿದ್ದ.

ಚಿನ್ನ ಮಾರಾಟದ ನೆಪದಲ್ಲಿ ಹಿಂದೂಸ್ತಾನ್‌ ಗೋಲ್ಡ್‌ ಕಂಪನಿಗೆ ಲಕ್ಷಾಂತರ ರೂಪಾಯಿ ವಂಚನೆ
Linkup
ಬೆಂಗಳೂರು: ಚಿನ್ನ ಮಾರಾಟ ಮಾಡುವುದಾಗಿ ಕಾಲ್‌ಸೆಂಟರ್‌ಗೆ ಕರೆ ಮಾಡಿ ಸಿಬ್ಬಂದಿಯನ್ನು ಮನೆಗೆ ಕರೆಸಿಕೊಂಡ ಆರೋಪಿ 2.60 ಲಕ್ಷ ರೂ. ಪಡೆದು ಪರಾರಿಯಾಗಿದ್ದಾನೆ. ಹಿಂದೂಸ್ತಾನ್‌ ಗೋಲ್ಡ್‌ ಕಂಪನಿಯ ಟ್ರಾನ್ಸ್ಯಾಕ್ಷನ್‌ ಎಕ್ಸಿಕ್ಯೂಟಿವ್‌ ಚಂದನ್‌ ನೀಡಿದ ದೂರಿನ ಆಧಾರದ ಮೇರೆಗೆ ಅಂಧ್ರಹಳ್ಳಿ ನಿವಾಸಿ ವಿವೇಕ್‌ (25) ವಿರುದ್ಧ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಜು.17ರಂದು ಸಂಜೆ ಹಿಂದೂಸ್ತಾನ್‌ ಗೋಲ್ಡ್‌ ಕಂಪನಿಯ ಕಾಲ್‌ ಸೆಂಟರ್‌ಗೆ ಕರೆ ಮಾಡಿದ ಆರೋಪಿ ತನ್ನನ್ನು ವಿವೇಕ್‌ ಎಂದು ಪರಿಚಯಿಸಿಕೊಂಡಿದ್ದ. ನನ್ನ ಬಳಿ 121 ಗ್ರಾಂ ಚಿನ್ನಾಭರಣಗಳಿದ್ದು, ಈ ಪೈಕಿ 88 ಗ್ರಾಂ ನನಗೆ ಪರಿಚಯವಿರುವ ಮಾರ್ವಾಡಿ ಅಂಗಡಿಯಲ್ಲಿಅಡವಿಟ್ಟಿದ್ದೇನೆ. ಆ ಚಿನ್ನವನ್ನು ನಿಮಗೆ ಮಾರಾಟ ಮಾಡುತ್ತೇನೆ ಎಂದು ಹೇಳಿದ್ದ. ಕಂಪನಿಯ ಸಿಬ್ಬಂದಿ ಆಧಾರ್‌ ಕಾರ್ಡ್‌, ಪ್ಯಾನ್‌ಕಾರ್ಡ್‌ ಹಾಗೂ ಅಡಮಾನವಿಟ್ಟ ರಶೀದಿಗಳನ್ನು ನೀಡುವಂತೆ ಸೂಚಿಸಿದ್ದರು. ಇದಕ್ಕೆ ಒಪ್ಪದ ಆರೋಪಿ ನನ್ನ ಮನೆಗೆ ನಿಮ್ಮ ಸಿಬ್ಬಂದಿಯನ್ನು ಕಳುಹಿಸಿ ಹಣ ಕೊಟ್ಟರೆ ಚಿನ್ನಾಭರಣ ನೀಡುವುದಾಗಿ ಹೇಳಿದ್ದ. ಅದರಂತೆ ಜು.18ರಂದು ಬೆಳಗ್ಗೆ ದೂರುದಾರ ಚಂದನ್‌ ಅಂಧ್ರಹಳ್ಳಿಯಲ್ಲಿರುವ ಆರೋಪಿಯ ಮನೆಗೆ ಹೋಗಿ ದಾಖಲೆ ನೀಡಲು ಸೂಚಿಸಿದ್ದರು. ದಾಖಲೆಗಳು ಬೀರುವಿನಲ್ಲಿದ್ದು, ನೀವು ಹಣ ಕೊಟ್ಟರೆ ನಮ್ಮ ತಾಯಿಯನ್ನು ಕಳುಹಿಸಿ ಅಡಮಾನವಿಟ್ಟಿರುವ ಚಿನ್ನ ಬಿಡಿಸಿಕೊಂಡು ಬರುವುದಾಗಿ ಹೇಳಿದ್ದ. ಆರೋಪಿ ವಿವೇಕ್‌ನ ಮಾತಿಗೆ ಮರುಳಾದ ಚಂದನ್‌ 2.60 ಲಕ್ಷ ರೂ.ಗಳನ್ನು ಆತನ ತಾಯಿಯ ಕೈಗೆ ಕೊಟ್ಟಿದ್ದರು. ಹಣ ತೆಗೆದುಕೊಂಡು ಹೋದ ಮಹಿಳೆ ಮಧ್ಯಾಹ್ನವಾದರೂ ಮನೆಗೆ ವಾಪಾಸ್ಸಾಗಲಿಲ್ಲ. ಹಣ ಹಿಂತಿರುಗಿಸಿದರೆ ನಾನು ಹೋಗುತ್ತೇನೆ ಎಂದು ಚಂದನ್‌ ಆರೋಪಿ ಬಳಿ ಹೇಳಿದ್ದರು. ಅರ್ಧ ಗಂಟೆ ಮನೆಯಲ್ಲಿ ಕಾಯಿರಿ ಎಂದು ಹೇಳಿ ವಿವೇಕ್‌ ಸಹ ಹೊರ ಹೋಗಿದ್ದ. ಇತ್ತ ಸಂಜೆವರೆಗೂ ಕಾದು ಕುಳಿತು ಸುಸ್ತಾದ ಚಂದನ್‌ ಆರೋಪಿ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ ಆಫ್‌ ಆಗಿತ್ತು. ಆಗ ತಾವು ಮೋಸ ಹೋಗಿರುವುದನ್ನು ಅರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.