ಬಿಜೆಪಿಯಿಂದ ಪ್ರತೀ ಜಿಲ್ಲೆಗಳಲ್ಲಿ ಜನಸ್ವರಾಜ್‌ ಸಮಾವೇಶ; ನಾಲ್ಕು ಟೀಂಗಳಿಗೆ ನಾಲ್ವರ ನೇತೃತ್ವ

ಪರಿಷತ್‌ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟುಗಳನ್ನು ಬಿಜೆಪಿ ಗೆಲ್ಲಲು ನ.19 ರಿಂದ 23ರವರೆಗೆ ಸಮಾವೇಶ ನಡೆಸಲಾಗುವುದು. ಮೊದಲನೇ ತಂಡ ಮೂರು ದಿನ, ಎರಡನೇ ಹಾಗೂ ಮೂರನೇ ತಂಡ ನಾಲ್ಕು ದಿನ, ಮೂರನೇ ತಂಡ 5 ದಿನ ಪ್ರವಾಸ ನಡೆಸಲಿದೆ. ಕಳೆದ ಬಾರಿ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ 7 ಸ್ಥಾನವನ್ನು ಪಕ್ಷ ಗೆದ್ದಿತ್ತು. ಈ ಬಾರಿ ಅತಿ ಹೆಚ್ಚು ಸೀಟು ಗೆಲ್ಲುವ ಗುರಿಯೊಂದಿಗೆ ಮುಂಚಿತವಾಗಿಯೇ ಸಮಾವೇಶ ನಡೆಸಲಾಗುತ್ತಿದೆ. ಮೊದಲ ಸಮಾವೇಶದ ಆರಂಭದಲ್ಲಿ 4 ತಂಡಗಳು ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷನ ಮನೆಯಲ್ಲಿ ಉಪಾಹಾರ ಸೇವಿಸಿ ಅಲ್ಲಿಂದ ಸಮಾವೇಶಕ್ಕೆ ಹೋಗಲು ಚಿಂತಿಸಲಾಗಿದೆ ಎಂದು ರವಿ ಕುಮಾರ್ ಹೇಳಿದರು.

ಬಿಜೆಪಿಯಿಂದ ಪ್ರತೀ ಜಿಲ್ಲೆಗಳಲ್ಲಿ ಜನಸ್ವರಾಜ್‌ ಸಮಾವೇಶ; ನಾಲ್ಕು ಟೀಂಗಳಿಗೆ ನಾಲ್ವರ ನೇತೃತ್ವ
Linkup
ಬೆಂಗಳೂರು: ಪರಿಷತ್‌ನಲ್ಲಿ ತೆರವಾಗಲಿರುವ ಸ್ಥಾನಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ನ. 19ರಿಂದ ಪ್ರತಿ ಜಿಲ್ಲೆಗೆ ಒಂದರಂತೆ 'ಜನಸ್ವರಾಜ್‌ ಸಮಾವೇಶ' ನಡೆಸಲಾಗುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಹೇಳಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ''ಪರಿಷತ್‌ನ 25 ಸ್ಥಾನಗಳಿಗೆ (ಸ್ಥಳೀಯ ಸಂಸ್ಥೆ) ಸದ್ಯದಲ್ಲೇ ಚುನಾವಣೆ ಘೋಷಣೆಯಾಗಲಿದ್ದು, ಹಾಗಾಗಿ ಪಕ್ಷ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರು, ಪರಿಷತ್‌ ಸದಸ್ಯರು, ಶಾಸಕರು ಮತ್ತು ಸಂಸದರ ಸಮಾವೇಶ ನಡೆಸಲು ಪಕ್ಷ ಚಿಂತಿಸಿದೆ ಎಂದರು. ಪರಿಷತ್‌ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟುಗಳನ್ನು ಬಿಜೆಪಿ ಗೆಲ್ಲಲು ನ.19 ರಿಂದ 23ರವರೆಗೆ ಸಮಾವೇಶ ನಡೆಸಲಾಗುವುದು. ಮೊದಲ ತಂಡದ ನೇತೃತ್ವವನ್ನು ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌, ಎರಡನೇ ತಂಡಕ್ಕೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಮೂರನೇ ತಂಡಕ್ಕೆ ಸಚಿವ ಕೆ.ಎಸ್‌.ಈಶ್ವರಪ್ಪ ಹಾಗೂ ನಾಲ್ಕನೇ ತಂಡಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ್‌ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು. ಮೊದಲನೇ ತಂಡ ಮೂರು ದಿನ, ಎರಡನೇ ಹಾಗೂ ಮೂರನೇ ತಂಡ ನಾಲ್ಕು ದಿನ, ಮೂರನೇ ತಂಡ 5 ದಿನ ಪ್ರವಾಸ ನಡೆಸಲಿದೆ. ಕಳೆದ ಬಾರಿ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ 7 ಸ್ಥಾನವನ್ನು ಪಕ್ಷ ಗೆದ್ದಿತ್ತು. ಈ ಬಾರಿ ಅತಿ ಹೆಚ್ಚು ಸೀಟು ಗೆಲ್ಲುವ ಗುರಿಯೊಂದಿಗೆ ಮುಂಚಿತವಾಗಿಯೇ ಸಮಾವೇಶ ನಡೆಸಲಾಗುತ್ತಿದೆ. ಮೊದಲ ಸಮಾವೇಶದ ಆರಂಭದಲ್ಲಿ 4 ತಂಡಗಳು ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷನ ಮನೆಯಲ್ಲಿ ಉಪಾಹಾರ ಸೇವಿಸಿ ಅಲ್ಲಿಂದ ಸಮಾವೇಶಕ್ಕೆ ಹೋಗಲು ಚಿಂತಿಸಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ, ಉಗ್ರಪ್ಪನವರು ಎಲ್ಲಿ ಹೋದರೋ ಗೊತ್ತಾಗುತ್ತಿಲ್ಲ. ಉಗ್ರಪ್ಪನವರು ಪ್ರತಿ ವಿಷಯಕ್ಕೂ ಬರುತ್ತಿದ್ದರು. ಬಿಟ್‌ ಕಾಯಿನ್‌ ವಿಚಾರದಲ್ಲಿ ಕಾಂಗ್ರೆಸ್‌ನವರು ಉಡಾಫೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಟಿಕೆಟ್‌ ಕೇಳಿದ ಸಂದೇಶ್‌ ನಾಗರಾಜ್‌ ಪರಿಷತ್‌ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಕುರಿತು ಚರ್ಚೆ ನಡೆದರೂ ಕೇಂದ್ರ ನಾಯಕರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಮೈಸೂರಿಗೆ ಸಂದೇಶ್‌ ನಾಗರಾಜ್‌ ಅವರು ಪಕ್ಷದ ಟಿಕೆಟ್‌ ಕೇಳಿದ್ದಾರೆ. ಆ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ. ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯ ಸಿ.ಆರ್‌.ಮನೋಹರ್‌ ಬಿಜೆಪಿ ಸೇರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನೂ ಅನೇಕರು ಸಲ್ಲಿಸಿರುವ ಅರ್ಜಿಗಳನ್ನು ಪಕ್ಷ ಪರಿಶೀಲಿಸಲಿದೆ ಎಂದು ಎನ್‌.ರವಿಕುಮಾರ್‌ ತಿಳಿಸಿದರು.