ಬೆಂಗಳೂರಿನ ಗಾನಚಂದ್ರಿಕಾ ಸಂಗೀತ ಶಾಲೆಯ ಹೊಸ ಪ್ರಯತ್ನ: ಯುಗಾದಿಗೆ ಗೀತ ಸಮರ್ಪಣೆ..

ಯುಗಾದಿಯೊಂದಿಗೆ ಆರಂಭವಾಗುವ ಹೊಸ ವರ್ಷವು ಹೊಸ ಹುರುಪು ಹಾಗೂ ಹೊಸ ಚೈತನ್ಯ ತರಲಿ ಎಂಬ ಆಶಯದೊಂದಿಗೆ ಗಾನಚಂದ್ರಿಕಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಜೊತೆಗೂಡಿ ಗೀತ ಸಮರ್ಪಣೆ ಮಾಡಿದ್ದಾರೆ.

ಬೆಂಗಳೂರಿನ ಗಾನಚಂದ್ರಿಕಾ ಸಂಗೀತ ಶಾಲೆಯ ಹೊಸ ಪ್ರಯತ್ನ: ಯುಗಾದಿಗೆ ಗೀತ ಸಮರ್ಪಣೆ..
Linkup
: ರಾಜಧಾನಿ ಬೆಂಗಳೂರಿನ ಗಾನಚಂದ್ರಿಕಾ , ಹಬ್ಬಕ್ಕೆ ಹೊಸ ಪ್ರಯತ್ನ ಮಾಡಿದೆ. ಶಾಲೆಯ ವಿದ್ಯಾರ್ಥಿಗಳೆಲ್ಲರೂ ಜೊತೆಗೂಡಿ ಹಬ್ಬಕ್ಕೆ ಗೀತ ಸಮರ್ಪಣೆ ಮಾಡಿದ್ದಾರೆ. ಯುಗಾದಿಯೊಂದಿಗೆ ಆರಂಭವಾಗುವ ಹೊಸ ವರ್ಷವು ಹೊಸ ಹುರುಪು ಹಾಗೂ ಹೊಸ ಚೈತನ್ಯ ತರಲಿ ಎಂಬ ಆಶಯದೊಂದಿಗೆ ಸಂಗೀತ ಶಾಲೆಯ ವಿದ್ಯಾರ್ಥಿಗಳು ಗೀತ ಸಮರ್ಪಣೆ ಮಾಡಿದ್ದು, ಇದು ಈ ಶಾಲೆಯ ಪ್ರಥಮ ಪ್ರಯತ್ನವಾಗಿದೆ. ಕವಿ ಮೈ. ವೆಂ. ಸೀತಾರಾಮಯ್ಯನವರ ‘ತೆರೆ ಕಿಟಕಿಯ ಬಾಗಿಲ’ ಎಂಬ ಗೀತೆಗೆ ಶ್ರೀಮತಿ ನಾಗಚಂದ್ರಿಕಾ ಭಟ್ ಅವರು ಸಂಗೀತ ನಿರ್ದೇಶನ ಮಾಡಿದ್ದು, ಅವರ ಪರಿಕಲ್ಪನೆಯೊಂದಿಗೆ ವಿಡಿಯೋ ಮೂಡಿಬಂದಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಈ ಗೀತೆ ಯೂಟ್ಯೂಬ್‌ನಲ್ಲಿ ಪ್ರಕಟವಾಗಿದೆ. ಈ ಗೀತೆಗೆ ವಿಕಾಸ್‌ ವಸಿಷ್ಟ ಅವರ ಸಂಗೀತ ಸಂಯೋಜನೆಯಿದೆ. ಸತ್ಯಾತ್ಮ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಮಾಡಲಾಗಿದೆ. ಶ್ರೀನಿಧಿ ಎಂ ಅವರು ಈ ಗೀತೆಯ ವಿಡಿಯೋ ಚಿತ್ರೀಕರಣ ಮಾಡಿದ್ದು, ಪೃಥ್ವಿಶ್ ಅವರು ವಿಡಿಯೋ ಎಡಿಟಿಂಗ್ ಹಾಗೂ ಆನ್‌ಲೈನ್ ನಿರ್ವಹಣೆ ಮಾಡಿದ್ದಾರೆ.