ಬೆಂಗಳೂರು: ವಿದ್ಯಾರ್ಥಿಯನ್ನು ಅಪಹರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್; ಆರು ಮಂದಿ ಸಹಪಾಠಿಗಳ ಬಂಧನ

ಮನೆಗೆ ಬಂದ ಅಭಿಷೇಕ್‌ ತನ್ನ ತಂದೆಯೊಂದಿಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಇನ್ಸ್‌ಪೆಕ್ಟರ್‌ ಲೋಹಿತ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ 80 ಸಾವಿರ ರೂ.ನಗದು, ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದ ಸ್ಟಾಂಪ್‌ ಪೇಪರ್‌, ಚಿನ್ನದ ಸರ ಹಾಗೂ ಚಾಕು ವಶಪಡಿಸಿಕೊಂಡಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು: ವಿದ್ಯಾರ್ಥಿಯನ್ನು ಅಪಹರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್; ಆರು ಮಂದಿ ಸಹಪಾಠಿಗಳ ಬಂಧನ
Linkup
ಬೆಂಗಳೂರು: ಪದವಿ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಆತನ ಪೋಷಕರಿಂದ 45 ಸಾವಿರ ರೂ. ಪಡೆದು ಪರಾರಿಯಾಗಿದ್ದ ಆರು ಅಪಹರಣಕಾರರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಎಲ್‌ಇ ಕಾಲೇಜಿನ ಪದವಿ ವಿದ್ಯಾರ್ಥಿಗಳಾದ ಭುವನ್‌, ಪ್ರಜ್ವಲ್‌, ಅವರ ಸ್ನೇಹಿತರಾದ ಅನಿಲ್‌, ದೀಪು, ನಿಶ್ಚಯ್‌, ಪ್ರಜ್ವಲ್‌ ಬಂಧಿತರು. ಆರೋಪಿಗಳು ಕೆಎಲ್‌ಇ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಪಾಪರೆಡ್ಡಿಪಾಳ್ಯದ ಅಭಿಷೇಕ್‌ (20)ನನ್ನು ಅಪಹರಿಸಿದ್ದರು. ಆಟೋ ಚಾಲಕನ ಪುತ್ರನಾಗಿರುವ ಅಭಿಷೇಕ್‌, ವ್ಯಾಸಂಗದ ಜತೆಗೆ ಪಾರ್ಟ್‌ ಟೈಮ್‌ ಕೆಲಸ ಮಾಡಿಕೊಂಡಿದ್ದ. ತನ್ನ ಸ್ವಂತ ಸಂಪಾದನೆಯಿಂದ ಕಾರು ಖರೀದಿಸಿದ್ದ. ಕಾರಿನಲ್ಲಿ ಕಾಲೇಜಿಗೆ ತೆರಳುವಾಗ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ ಸಮೀಪ ಕಾರನ್ನು ತಡೆದ ಆತನ ಮೂವರು ಸಹಪಾಠಿಗಳು ಹಾಗೂ ಇತರ ಮೂವರು ಆತನನ್ನು ಅಪಹರಿಸಿದ್ದರು. ಅಭಿಷೇಕ್‌ನನ್ನು ಸುಂಕದಕಟ್ಟೆ , ನೆಲಮಂಗಲ ಮತ್ತು ದಾಬಸ್‌ಪೇಟೆಯಲ್ಲಿ ಸುತ್ತಾಡಿಸಿ ಕೊನೆಗೆ ನೆಲಮಂಗಲ- ದಾಬಸ್‌ಪೇಟೆ ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಸ್ಟಾಂಪ್‌ಪೇಪರ್‌ ಮೇಲೆ 10 ಲಕ್ಷ ರೂ. ನೀಡಬೇಕೆಂಬ ಒಕ್ಕಣೆ ಬರೆಸಿಕೊಂಡು ಅಭಿಷೇಕ್‌ನಿಂದ ಬಲವಂತವಾಗಿ ಸಹಿ ಹಾಕಿಸಿಕೊಂಡು ಆತನ ಬ್ಯಾಂಕ್‌ ಖಾತೆಯಲ್ಲಿದ್ದ ಒಂದು ಲಕ್ಷ ರೂ. ಹಣವನ್ನು ಬಲವಂತವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಪಾಟೀಲ್‌ ತಿಳಿಸಿದರು. 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು:ಆರೋಪಿಗಳು, ಅಭಿಷೇಕ್‌ ತಂದೆಗೆ ದೂರವಾಣಿ ಕರೆ ಮಾಡಿ ‘ನಿಮ್ಮ ಮಗ ನಮಗೆ 10 ಲಕ್ಷ ರೂ. ನೀಡಬೇಕು. ಈ ಕೂಡಲೇ ಒಂದು ಲಕ್ಷ ರೂ.ಗಳನ್ನು ನಮ್ಮ ಖಾತೆಗೆ ವರ್ಗಾಯಿಸಬೇಕು’ ಎಂದು ಧಮಕಿ ಹಾಕಿದ್ದರು. ಮಗನ ಅಪಹರಣದಿಂದ ಆಘಾತಕ್ಕೊಳಗಾದ ಆಟೋ ಚಾಲಕ ತಮ್ಮ ಬಳಿ ಇದ್ದ ಚಿನ್ನದ ಸರ ಅಡವಿಟ್ಟು 45 ಸಾವಿರ ರೂ.ಗಳನ್ನು ಅಪಹರಣಕಾರರ ಖಾತೆಗೆ ವರ್ಗಾಯಿಸಿದ್ದರು. 45 ಸಾವಿರ ರೂ. ತಮ್ಮ ಖಾತೆಗೆ ವರ್ಗಾವಣೆಯಾಗುತ್ತಿದ್ದಂತೆ ಅಭಿಷೇಕ್‌ನನ್ನು ಅಲ್ಲೇ ಬಿಟ್ಟು ವಿಷಯ ಯಾರಿಗಾದರೂ ತಿಳಿಸಿದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದರು. ನಂತರ ಮನೆಗೆ ಬಂದ ಅಭಿಷೇಕ್‌ ತನ್ನ ತಂದೆಯೊಂದಿಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಇನ್ಸ್‌ಪೆಕ್ಟರ್‌ ಲೋಹಿತ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ 80 ಸಾವಿರ ರೂ.ನಗದು, ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದ ಸ್ಟಾಂಪ್‌ ಪೇಪರ್‌, ಚಿನ್ನದ ಸರ ಹಾಗೂ ಚಾಕು ವಶಪಡಿಸಿಕೊಂಡಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಪಹರಣ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಸುನಿಲ್‌ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.