ಪ್ರಪಂಚದಲ್ಲಿ ಈ ನೋವು ಯಾರಿಗೂ ಬರಬಾರದು: ಹಾಲು ತುಪ್ಪ ಕಾರ್ಯದ ಬಗ್ಗೆ ಶಿವಣ್ಣ ನೋವಿನ ನುಡಿ

‘’ಅಪ್ಪು ನಮಗೆ ಹಾಲು ತುಪ್ಪ ಕಾರ್ಯವನ್ನ ಮಾಡಬೇಕಿತ್ತು. ದೊಡ್ಡವರಾಗಿ ಈಗ ನಾವೇ ಅವನಿಗೆ ಮಾಡಬೇಕಾಗಿದೆ. ಪ್ರಪಂಚದಲ್ಲಿ ಯಾರಿಗೂ ಈ ನೋವು ಬರಬಾರದು’’ ಎಂದು ನೋವನ್ನ ನುಂಗಿಕೊಂಡೇ ಇಂದು ಮಾಧ್ಯಮಗಳ ಎದುರು ಶಿವರಾಜ್‌ಕುಮಾರ್ ಮಾತಿಗಿಳಿದರು.

ಪ್ರಪಂಚದಲ್ಲಿ ಈ ನೋವು ಯಾರಿಗೂ ಬರಬಾರದು: ಹಾಲು ತುಪ್ಪ ಕಾರ್ಯದ ಬಗ್ಗೆ ಶಿವಣ್ಣ ನೋವಿನ ನುಡಿ
Linkup
‘’ನಮಗೆಲ್ಲ ಅಪ್ಪು ಮಗು ಇದ್ದ ಹಾಗೆ. ಪ್ರೀತಿಯಿಂದ ಅವನನ್ನು ಸಾಕಿ ಬೆಳೆಸಿದ್ವಿ. ಪುತ್ರ ಶೋಕ ನಿರಂತರಂ ಎಂಬಂತೆ ನಮಗೂ ಅಪ್ಪು ನಿಧನದ ದುಃಖ ನಿರಂತರವಾಗಿ ಕಾಡುತ್ತಲೇ ಇರುತ್ತದೆ’’ ಎಂದು ಮಾಧ್ಯಮಗಳ ಮುಂದೆ ತೀರಾ ನೊಂದುಕೊಂಡು ರಾಘವೇಂದ್ರ ರಾಜ್ ಕುಮಾರ್ ಮಾತನಾಡಿದ್ದರು. ಇದೀಗ ಶಿವರಾಜ್ ಕುಮಾರ್ ಕೂಡ ಅಪ್ಪುಗೆ ಹಾಲು ತುಪ್ಪ ಕಾರ್ಯ ನೆರವೇರಿಸುವ ಬಗ್ಗೆ ದುಃಖದಿಂದಲೇ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ‘’ಅಪ್ಪು ನಮಗೆ ಹಾಲು ತುಪ್ಪ ಕಾರ್ಯವನ್ನ ಮಾಡಬೇಕಿತ್ತು. ದೊಡ್ಡವರಾಗಿ ಈಗ ನಾವೇ ಅವನಿಗೆ ಮಾಡಬೇಕಾಗಿದೆ. ಪ್ರಪಂಚದಲ್ಲಿ ಯಾರಿಗೂ ಈ ನೋವು ಬರಬಾರದು’’ ಎಂದು ನೋವನ್ನ ನುಂಗಿಕೊಂಡೇ ಇಂದು ಮಾಧ್ಯಮಗಳ ಎದುರು ಶಿವರಾಜ್‌ಕುಮಾರ್ ಮಾತಿಗಿಳಿದರು. ದುಃಖದ ಕಡಲಲ್ಲಿ ಶಿವಣ್ಣ ‘’ಅಪ್ಪುನ ಕಳ್ಕೊಂಡಿದ್ದೇ ಒಂದು ದೊಡ್ಡ ನೋವು. ಹಾಲು ತುಪ್ಪ ಮಾಡಬೇಕು... ಅವನು ಹುಟ್ಟಬೇಕಾದರೆ ನನಗೆ 13 ವರ್ಷ. ನಾನು ಆಡಿಸಿ ಬೆಳೆಸಿದ ಮಗು ಅವನು. ಅವನಿಗೆ ಈಗ ಹಾಲು ತುಪ್ಪ ಮಾಡಬೇಕಾಗಿರೋದು ತುಂಬಾ ನೋವಾಗುತ್ತಿದೆ. ಹಾಗ್ನೋಡಿದ್ರೆ, ಅವನು ನಮಗೆ ಆ ಕಾರ್ಯವೆಲ್ಲಾ ಮಾಡಬೇಕಾಗಿತ್ತು. ನಾವು ದೊಡ್ಡವರಾಗಿ ಈಗ ಅವನಿಗೆ ಹಾಗೆ ಮಾಡಬೇಕಾಗಿದೆ. ಈ ನೋವು ಪ್ರಪಂಚದಲ್ಲಿ ಯಾರಿಗೂ ಬರಬಾರದು. ನಾಳೆ ಹಾಲು ತುಪ್ಪ ಮಾಡ್ತಾಯಿದ್ದೇವೆ’’ ‘’ಅಭಿಮಾನಿಗಳಿಗೂ ತುಂಬಾ ನೋವಾಗಿದೆ. ಅದಕ್ಕೆ ಏನು ಹೇಳಬೇಕೋ ನನಗೂ ಗೊತ್ತಾಗುತ್ತಿಲ್ಲ. ನಾವೆಷ್ಟು ನೋವು ಅನುಭವಿಸಿದ್ದೇವೋ, ಅದಕ್ಕಿಂತ ಹತ್ತು ಪಟ್ಟು ಹೆಚ್ಚು ನೋವು ಅವರು ಅನುಭವಿಸಿದ್ದಾರೆ. ನಾವು ಯಾವ ಜನ್ಮದಲ್ಲಿ ಏನು ಪುಣ್ಯ ಮಾಡಿದ್ವೋ, ಏನೋ.. ಅಪ್ಪಾಜಿ ನಮಗೆ ಅಷ್ಟು ಪ್ರೀತಿಯನ್ನ ಗಳಿಸಿಕೊಟ್ಟು ಹೋಗಿದ್ದಾರೆ. ಅಪ್ಪು ಕೂಡ ಅಷ್ಟೇ ಪ್ರೀತಿಯನ್ನ ಗಳಿಸಿಕೊಟ್ಟು ಹೋಗಿದ್ದಾನೆ’’ ಎಂದ ಶಿವಣ್ಣ ಗದ್ಗದಿತರಾದರು. ಮನವಿ ಮಾಡಿದ ಶಿವಣ್ಣ ‘’ಅಭಿಮಾನಿಗಳು ದಯವಿಟ್ಟು ಬೇರೆ ತರಹ ತೀರ್ಮಾನ ತೆಗೆದುಕೊಳ್ಳಲು ಹೋಗಬೇಡಿ. ಎಷ್ಟೋ ಜನ ಜೀವ ಬಿಟ್ಟಿದ್ದಾರೆ. ದಯವಿಟ್ಟು ಅಂತಹ ಕೆಲಸ ಮಾಡಬೇಡಿ. ನಿಮ್ಮ ಫ್ಯಾಮಿಲಿಗೆ ನಿಮ್ಮ ಜೀವ ಮುಖ್ಯ ಆಗುತ್ತದೆ. ನಮಗೂ ಮುಖ್ಯ ಆಗುತ್ತದೆ. ಧೈರ್ಯವಾಗಿರಿ. ಅಪ್ಪು ಇದ್ದಿದ್ದರೆ, ಅವನೂ ಕೂಡ ಇದೇ ಮಾತನ್ನ ಹೇಳುತ್ತಿದ್ದ. ಜೀವ ಅನ್ನೋದೇ ಅಮೂಲ್ಯವಾದ ಉಡುಗೊರೆ. ಅದನ್ನ ಕಳ್ಕೋಬೇಡಿ. ನೋವನ್ನ ನುಂಗಿಕೊಂಡು ನಡೆಯೋನೇ ಮನುಷ್ಯ. ನಾವೂ ಕೂಡ ನೋವನ್ನ ನುಂಗಿಕೊಂಡೇ ನಡೆಯಬೇಕು. ಕೆಲಸಗಳು ನಡೆಯುತ್ತಿರಬೇಕು. ಶೋ ಶುಡ್ ಗೋ ಆನ್ ಅಂತೀವಲ್ಲಾ ಹಾಗೆ. ಅಭಿಮಾನಿಗಳ ಪ್ರೀತಿಯಿಂದಲೇ ಇಂಡಸ್ಟ್ರಿ ನಡೆಯುತ್ತಿರೋದು. ಇಂಥ ತಮ್ಮನನ್ನ ಪಡೆಯೋಕೆ ನಾವು ಹೆಮ್ಮೆ ಮಾಡಿದ್ವಿ’’ ಎಂದಿದ್ದಾರೆ ಶಿವಣ್ಣ ‘ಜೇಮ್ಸ್’ ಚಿತ್ರಕ್ಕೆ ವಾಯ್ಸ್ ಕೊಡ್ತಾರಾ ಶಿವರಾಜ್ ಕುಮಾರ್? ‘’ಜೇಮ್ಸ್’ ಚಿತ್ರಕ್ಕೆ ವಾಯ್ಸ್ ಕೊಡುವ ಬಗ್ಗೆ ನನ್ನ ಬಳಿ ಇನ್ನೂ ಬಂದಿಲ್ಲ. ಒಂದ್ವೇಳೆ ಬಂದರೆ ಖಂಡಿತ ವಾಯ್ಸ್ ಕೊಡ್ತೀನಿ. ನನ್ನ ತಮ್ಮನಿಗೆ ವಾಯ್ಸ್ ಕೊಡೋಕೆ ನನಗೆ ನಿಜವಾಗಿಯೂ ಹೆಮ್ಮೆ ಅನಿಸುತ್ತದೆ’’ ಅಂತ ಶಿವರಾಜ್ ಕುಮಾರ್ ಹೇಳಿದ್ದಾರೆ.