ಪಂಜಾಬ್‌ ಕಾಂಗ್ರೆಸ್‌ನಲ್ಲಿ ಏನಾಗ್ತಿದೆ? ಸಿಧುಗೆ ಬೆಂಬಲ ಸೂಚಿಸಿ ಎರಡೇ ದಿನಕ್ಕೆ ರಾಜೀನಾಮೆ ನೀಡಿದ ಸಚಿವೆ!

ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್‌ ಸಿಂಗ್‌ ಸಿಧು ರಾಜೀನಾಮೆ ನೀಡಿದ ಬೆನ್ನಿಗೆ ಇದೀಗ ಸಚಿವೆ ರಜಿಯಾ ಸುಲ್ತಾನಾ ಮಂಗಳವಾರ ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಂಜಾಬ್‌ ಕಾಂಗ್ರೆಸ್‌ನಲ್ಲಿ ಏನಾಗ್ತಿದೆ? ಸಿಧುಗೆ ಬೆಂಬಲ ಸೂಚಿಸಿ ಎರಡೇ ದಿನಕ್ಕೆ ರಾಜೀನಾಮೆ ನೀಡಿದ ಸಚಿವೆ!
Linkup
ಚಂಡೀಗಢ: ಬಿಗಡಾಯಿಸುವ ಸೂಚನೆ ಕಾಣಿಸುತ್ತಿದೆ. ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಿಗೆ ಇದೀಗ ಸಚಿವರೊಬ್ಬರು ಮಂಗಳವಾರ ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್‌ ಸರಕಾರದಲ್ಲಿ ಸಂಪುಟದರ್ಜೆ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ ಎರಡೇ ದಿನಕ್ಕೆ ಮಲೆರ್‌ಕೋಟ್ಲಾ ಶಾಸಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಧು ನಡೆ ಬೆಂಬಲಿಸಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ. "ಸಿಧು ಸಾಹೇಬರು ತತ್ವಗಳನ್ನು ಹೊಂದಿರುವ ಮನುಷ್ಯ. ಅವರು ಪಂಜಾಬ್‌ ಹಾಗೂ ಪಂಜಾಬಿಯತ್‌ಗಾಗಿ ಹೋರಾಡುತ್ತಿದ್ದಾರೆ," ಎಂದು ರಜಿಯಾ ಸುಲ್ತಾನಾ ಹೊಗಳಿದ್ದಾರೆ. ಪಂಜಾಬ್‌ನ ಹಿತದೃಷ್ಟಿಯಿಂದ ನಾನು ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಅವರ ರಾಜೀನಾಮೆ ಬೆನ್ನಿಗೆ ಇದೀಗ ತುರ್ತು ಸಂಪುಟ ಸಭೆ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಪಿಪಿಸಿಸಿ ಅಧ್ಯಕ್ಷರಾಗಿದ್ದ ನವಜೋತ್‌ ಸಿಂಗ್‌ ಮಂಗಳವಾರ ಮುಂಜಾನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಗಾಂಧಿ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದ್ದರು. ಸಿಎಂ ಬದಲಾವಣೆಯಿಂದ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟು ಬಗೆಹರಿಯಿತು ಎಂದು ನಿರೀಕ್ಷಿಸುತ್ತಿದ್ದ ಗಾಂಧಿ ಕುಟುಂಬ ಇದರಿಂದ ಅಕ್ಷರಶಃ ದಾರಿ ಕಾಣದಾಗಿದೆ. ತಮ್ಮ ರಾಜೀನಾಮೆ ಪತ್ರವನ್ನು ಕ್ರಿಕೆಟಿಗ ಕಂ ರಾಜಕಾರಣಿ ನವಜೋತ್‌ ಸಿಂಗ್‌ ಸಿಧು ಟ್ಟೀಟ್‌ ಮಾಡಿದ್ದು, ಪಂಜಾಬ್‌ ಸಂಪುಟದ ಬೆಳವಣಿಗೆಗಳ ಬಗ್ಗೆ ಅಸಮಧಾನಗೊಂಡಿರುವುದನ್ನು ಅದು ಸೂಚಿಸುತ್ತಿದೆ. "ರಾಜಿಯೊಂದಿಗೆ ಮನುಷ್ಯನ ನಡತೆಯ ಕುಸಿತವು ಆರಂಭವಾಗುತ್ತದೆ. ಪಂಜಾಬ್‌ನ ಭವಿಷ್ಯ ಮತ್ತು ಪಂಜಾಬ್‌ನ ಕಲ್ಯಾಣಕ್ಕಾಗಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಆದ್ದರಿಂದ, ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ," ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ನವಜೋತ್‌ ಸಿಂಗ್‌ ಸಿಧು ಹೇಳಿದ್ದಾರೆ. ಅವರನ್ನು ಕಳೆದ ಜುಲೈನಲ್ಲಿ ಪಿಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪಂಜಾಬ್‌ ಮುಖ್ಯಮಂತ್ರಿಯಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅಧಿಕಾರ ಸ್ವೀಕರಿಸಿ, ಸಂಪುಟ ವಿಸ್ತರಣೆ ನಡೆದ ಬೆನ್ನಲ್ಲೇ ಸಿಧು ರಾಜೀನಾಮೆ ನಿರ್ಧಾರ ಹೊರಬಿದ್ದಿದೆ. ಸಿಧು ಬೆಂಬಲಿಗರ ಒತ್ತಡದ ಹಿನ್ನೆಲೆಯಲ್ಲಿ ಕ್ಯಾ. ಅಮರೀಂದರ್‌ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ದಲಿತರೊಬ್ಬರನ್ನು ಕಾಂಗ್ರೆಸ್‌ ಸಿಎಂ ಸ್ಥಾನಕ್ಕೆ ಕರೆತಂದಿತ್ತು. ಆದರೆ ಸಿಧು ಅಸಮಾಧಾನ ಮಾತ್ರ ಇನ್ನೂ ತಣಿದಿಲ್ಲ. ಚನ್ನಿ ಮಾಡಿದ ಸಂಪುಟ ಬದಲಾವಣೆಗಳ ಬಗ್ಗೆ ಸಿಧು ಅಸಮಾಧಾನಿತರಾಗಿದ್ದರು ಎನ್ನಲಾಗಿದೆ. ಮರಳು ಮಾಫಿಯಾದಲ್ಲಿ ಶಾಮೀಲಾಗಿರುವ ಆರೋಪ ಹೊತ್ತು ಅಮರೀಂದರ್‌‌ ಸಿಂಗ್‌ ಸಂಪುಟದಿಂದ ನಿರ್ಗಮಿಸಿದ್ದ ರಾಣಾ ಗುರ್ಜಿತ್‌ ಸಿಂಗ್‌ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಂತೆ ಸಿಎಂಗೆ ಸಿಧು ಮನವಿ ಮಾಡಿದ್ದರು. ಆದರೆ ಸಿಧು ಮಾಡಿದ ಮನವಿಯನ್ನು ಚನ್ನಿ ಪರಿಗಣಿಸಿರಲಿಲ್ಲ. ಇದೂ ಅವರ ರಾಜೀನಾಮೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ