ದಾಬಸ್‌ಪೇಟೆಯಲ್ಲಿಅಪರಾಧ ತಡೆಗೆ ಗಸ್ತು ಹೆಚ್ಚಳ; ಪುಂಡು ಪೋಕರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ ಪಿಎಸ್‌ಐ

ದಾಬಸಪೇಟೆ ಪಟ್ಟಣ ಅತಿ ವೇಗವಾಗಿ ಬೆಳೆಯುತ್ತಿರುವ ಬೃಹತ್‌ ಕೈಗಾರಿಕಾ ಪ್ರದೇಶವಾಗಿದ್ದು, ಬದುಕು ಕಟ್ಟಿಕೊಳ್ಳಲು ಅನೇಕ ರಾಜ್ಯಗಳ ಜನರು ಬಂದು ನೆಲೆಯೂರಲು ಪ್ರಾರಂಭಿಸಿದ್ದಾರೆ. ಇದರಿಂದ ಶಾಂತವಾಗಿದ್ದ ದಾಬಸಪೇಟೆಯಲ್ಲಿಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡುತ್ತಿದೆ. ಈ ಹಿನ್ನಲೆಯಲ್ಲಿ ದಾಬಸಪೇಟೆ ಪಿಎಸ್‌ಐ ಎಂ.ಎನ್‌.ಮುರಳಿ ರಾತ್ರಿ ವೇಳೆ ದಾಬಸಪೇಟೆಯಲ್ಲಿ ಗಸ್ತು ತಿರುಗುವ ಮೂಲಕ ಅಪರಾಧಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ದಾಬಸ್‌ಪೇಟೆಯಲ್ಲಿಅಪರಾಧ ತಡೆಗೆ ಗಸ್ತು ಹೆಚ್ಚಳ; ಪುಂಡು ಪೋಕರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ ಪಿಎಸ್‌ಐ
Linkup
ದಾಬಸಪೇಟೆ: ದಾಬಸಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳವು, ದರೋಡೆ ಸೇರಿದಂತೆ ಇತರೆ ಅಪರಾಧ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ದಾಬಸಪೇಟೆ ಪಿಎಸ್‌ಐ ಎಂ.ಎನ್‌.ಮುರಳಿ ರಾತ್ರಿ ವೇಳೆ ದಾಬಸಪೇಟೆಯಲ್ಲಿ ಗಸ್ತು ತಿರುಗುವ ಮೂಲಕ ಅಪರಾಧಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ದಾಬಸಪೇಟೆ ಪಟ್ಟಣ ಅತಿ ವೇಗವಾಗಿ ಬೆಳೆಯುತ್ತಿರುವ ಬೃಹತ್‌ ಕೈಗಾರಿಕಾ ಪ್ರದೇಶವಾಗಿದ್ದು, ಬದುಕು ಕಟ್ಟಿಕೊಳ್ಳಲು ಅನೇಕ ರಾಜ್ಯಗಳ ಜನರು ಬಂದು ನೆಲೆಯೂರಲು ಪ್ರಾರಂಭಿಸಿದ್ದಾರೆ. ಇದರಿಂದ ಶಾಂತವಾಗಿದ್ದ ದಾಬಸಪೇಟೆಯಲ್ಲಿಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡುತ್ತಿದೆ. ರಾತ್ರಿ ಗಸ್ತು ಹೆಚ್ಚಳ: ಜನರಲ್ಲಿ ಉಂಟಾಗಿರುವ ಆತಂಕ ದೂರ ಮಾಡಿ ವಿಶ್ವಾಸ ಹೆಚ್ಚಿಸಲು ಹಾಗೂ ಅಪರಾಧಿಗಳಿಗೆ ಖಡಕ್‌ ಎಚ್ಚರಿಕೆ ನೀಡಲು ದಾಬಸಪೇಟೆ ಪೊಲೀಸ್‌ ಆರಕ್ಷಕ ಉಪನೀರಿಕ್ಷಕ ಎಂ.ಎನ್‌.ಮುರಳಿ ತಮ್ಮ ಪೊಲೀಸ್‌ ಪಡೆಯೊಂದಿಗೆ ದಾಬಸಪೇಟೆಯಲ್ಲಿ ರಾತ್ರಿ ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ಗಸ್ತು ತಿರುಗಿ ಪೋಲಿ ಪುಂಡರಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಅನುಮಾನ ಬಂದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದರು. ಸಿಸಿ ಕ್ಯಾಮೆರಾ ಅಳವಡಿಸಿ: ಚಿನ್ನದ ಅಂಗಡಿ, ಮೊಬೈಲ್‌ ಅಂಗಡಿ ಸೇರಿದಂತೆ ಇತರೆ ವಾಣಿಜ್ಯ ಮಳಿಗೆಗಳ ಮುಂದೆ ಸಿಸಿ ಕ್ಯಾಮೆರಾ ಅಳವಡಿಸದಿರುವ ಬಗ್ಗೆ ಅಂಗಡಿ ಮಾಲೀಕರಿಗೆ ಪ್ರಶ್ನಿಸಿದರು. ತ್ವರಿತವಾಗಿ ಅಂಗಡಿಗಳ ಮುಂದೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ತಿಳಿಸಿ, ಗ್ರಾಹಕರ ಸುರಕ್ಷತೆ ಬಗ್ಗೆಯೂ ಒತ್ತು ನೀಡುವಂತೆ ಅಂಗಡಿಯವರಿಗೆ ಎಚ್ಚರಿಕೆ ನೀಡಿದರು. ಅನುಮಾನಾಸ್ಪದ ವ್ಯಕ್ತಿಗಳು ಒಡವೆ ಮಾರಲು ಆಥವಾ ಗಿರವಿ ಇಡಲು ಮುಂದೆ ಬಂದರೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕೆಂದು ಚಿನ್ನದ ಅಂಗಡಿ ಮಾಲೀಕರಿಗೆ ತಿಳಿಸಿದರು. ಮೊಬೈಲ್‌ ಮಳಿಗೆಯವರು ಯಾವುದೇ ವಿಳಾಸದ ಪುರಾವೆ ಇಲ್ಲದೆ ನಕಲಿ ದಾಖಲೆ ನೀಡಿ, ಸಿಮ್‌ ಕಾರ್ಡ್‌ ವಿತರಿಸುತ್ತಿರುವ ಬಗ್ಗೆ ದೂರು ಕೇಳಿಬರುತ್ತಿದ್ದು, ಈ ರೀತಿ ಏನಾದರೂ ಅಪರಾಧಿಗಳಿಗೆ ನೆರವಾಗುವ ಸಲುವಾಗಿ ಸಿಮ್‌ಕಾರ್ಡ್‌ ನೀಡಿದ ಮಾಹಿತಿ ಸಿಕ್ಕರೆ ಕಾನೂನಿನಡಿ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಮತ್ತು ಕರೆನ್ಸಿ ಹಾಕಿಸಲು ಬರುವ ಹೆಣ್ಣು ಮಕ್ಕಳ ನಂಬರನ್ನು ಪೋಲಿ ಪುಂಡರಿಗೆ ನೀಡಿ ಹೆಣ್ಣು ಮಕ್ಕಳಿಗೆ ಅನಗತ್ಯ ತೊಂದರೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೊಬೈಲ್‌ ಅಂಗಡಿಯವರಿಗೆ ಎಚ್ಚರಿಕೆ ನೀಡಿದರು. ಮಾದಕ ವಸ್ತುಗಳು ಕಂಡರೆ ಮಾಹಿತಿ ನೀಡಿ: ಟೀ ಮಾರಾಟ ಮಾಡುವ ಅಂಗಡಿಗಳ ಬಳಿ ಕೂತು ಅನಗತ್ಯ ಗಲಾಟೆ ಮಾಡಿಕೊಳ್ಳುವ ಮತ್ತು ಮಾದಕ ವಸ್ತುವನ್ನು ಸಿಗರೇಟ್‌ನಲ್ಲಿ ತುಂಬಿ ಸೇದಿ ನಶೆಯ ಗುಂಗಿನಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸ್‌ ಠಾಣೆಗೆ ಬರುವ ಪ್ರಕರಣಗಳು ವರದಿಯಾಗುತ್ತಿವೆ. ಟೀ, ಕಾಫಿ ಅಂಗಡಿ ಮಾಲೀಕರು ಇಂಥ ಪ್ರಕರಣ ಕಂಡು ಬಂದರೆ ತಕ್ಷಣ ಮಾಹಿತಿ ನೀಡಿ ಎಂದು ತಿಳಿಸಿದರು. ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ: ಸಪ್ತಗಿರಿ ಲಾಡ್ಜ್‌ಗೆ ಭೇಟಿ ನೀಡಿ, ರಿಜಿಸ್ಟರ್‌ ಪರೀಶಿಲಿಸಿ, ದಾಖಲೆ ಪಡೆಯದೆ ರೂಮ್‌ ನೀಡದಂತೆ ತಿಳಿಸಿ ಹಾಗೂ ಹಲವು ದಿನಗಳಿಂದ ರೂಮಿನಲ್ಲಿ ಉಳಿದಿರುವ ವ್ಯಕ್ತಿಗಳ ಪೂರ್ವಪರ ಪರೀಶಿಲನೆ ನಡೆಸಿ, ಅನುಮಾನ ಬಂದವರನ್ನು ಪ್ರತ್ಯೇಕವಾಗಿ ವಿಚಾರಿಸಿ ಮತ್ತುಷ್ಟು ಮಾಹಿತಿ ಮತ್ತು ವಿಳಾಸ ಪಡೆದರು. ಪಟ್ಟಣದ ಶಿವಗಂಗಾ ವೃತ್ತ, ಅಗಳಕುಪ್ಪೆ ರಸ್ತೆ, ದೊಡ್ಡಬಳ್ಳಾಪುರ ರಸ್ತೆ ಹಾಗೂ ತುಮಕೂರು ರಸ್ತೆ, ಮಧುಗಿರಿ ರಸ್ತೆಗಳಲ್ಲಿನ ವಾಣಿಜ್ಯ ಮಳಿಗೆಯವರನ್ನು ಭೇಟಿ ಮಾಡಿ, ಪ್ರಕರಣದ ಬಗ್ಗೆ ಅರಿವು ಮತ್ತು ಜಾಗೃತಿ ಉಂಟು ಮಾಡಿದರು. ಎಎಸ್‌ಐ ನಾಗರಾಜು, ಸಿಬ್ಬಂದಿಗಳಾದ ಸೋಮನಾಥ ರಾಥೋಡ್‌, ಶಿವಕುಮಾರ ನಾಯ್ಕ, ಲಕ್ಷ್ಮಣನಾಯ್ಕ್‌, ಬಿ.ಎಂ.ಸಂತೋಷ್‌ ಕುಮಾರ್‌, ಪೀರ್‌ಸಾಬ್‌, ಸುರೇಶ್‌, ಮಹಿಳಾ ಸಿಬ್ಬಂದಿ ರೋಜಾ ಇದ್ದರು.