ಚಿತ್ರಮಂದಿರಗಳಲ್ಲಿ ‘ಮದಗಜ’ನ ಆರ್ಭಟ ಶುರು

ಶ್ರೀಮುರಳಿ ನಟನೆಯ ಬಿಗ್‌ ಬಜೆಟ್‌ ಸಿನಿಮಾ ‘ಮದಗಜ’ ಬಹುಭಾಷೆಗಳಲ್ಲಿ ಇಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಚಿತ್ರಮಂದಿರಗಳಲ್ಲಿ ‘ಮದಗಜ’ನ ಆರ್ಭಟ ಶುರು
Linkup
ಪದ್ಮಾ ಶಿವಮೊಗ್ಗ ಶ್ರೀಮುರಳಿ ನಟನೆಯ ಬಿಗ್‌ ಬಜೆಟ್‌ ಸಿನಿಮಾ ‘’ ಬಹುಭಾಷೆಗಳಲ್ಲಿ ಇಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ‘ಉಗ್ರಂ’ ಮತ್ತು ‘ಮಫ್ತಿ’ ಸಿನಿಮಾ ಖ್ಯಾತಿಯ ಸ್ಟಾರ್‌ ನಟ ಶ್ರೀಮುರಳಿ ‘ಮದಗಜ’ ಆಗಿ ಇಂದು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ಸೂರ್ಯ ಪಾತ್ರದಲ್ಲಿ ಭಾವನಾತ್ಮಕ ಮತ್ತು ಟಫ್‌ ಹೀರೊ ಆಗಿ ನಟಿಸಿದ್ದು, ನಟಿ ಆಶಿಕಾ ರಂಗನಾಥ್‌ ಅವರಿಗೆ ನಾಯಕಿಯಾಗಿದ್ದಾರೆ. ಮಾಸ್‌ ಎಂಟರ್ಟೇನ್‌ಮೆಂಟ್‌ ಸಿನಿಮಾ ಇದಾಗಿದ್ದು, ಎಸ್‌. ಮಹೇಶ್‌ ಕುಮಾರ್‌ ನಿರ್ದೇಶನ ಮಾಡಿದ್ದಾರೆ. ಚಿತ್ರವನ್ನು ನಿರ್ಮಾಪಕ ಉಮಾಪತಿ ಅವರು ತಮ್ಮ ಉಮಾಪತಿ ಫಿಲ್ಮ್ಸ್ ಬ್ಯಾನರ್‌ ಮೂಲಕ ನಿರ್ಮಾಣ ಮಾಡಿದ್ದಾರೆ. ಬಿಗ್‌ ಬಜೆಟ್‌ನ ಈ ಚಿತ್ರದ ಮೇಕಿಂಗ್‌ನಲ್ಲಿ ‘ಕೆಜಿಎಫ್‌’ ಸಿನಿಮಾ ಖ್ಯಾತಿಯ ಪ್ರಶಾಂತ್‌ ನೀಲ್‌ ಅವರು ಸಾಥ್‌ ನೀಡಿದ್ದಾರೆ ಎಂದಿದ್ದಾರೆ ನಿರ್ಮಾಪಕ ಉಮಾಪತಿ. ‘ಮದಗಜ ಸಿನಿಮಾ ರಾಜ್ಯಾದ್ಯಂತ ದಿನಕ್ಕೆ 800 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣಲಿದೆ. ಮುಂದಿನ ವಾರ ವಿದೇಶಗಳಲ್ಲಿ ರಿಲೀಸ್‌ ಆಗಲಿದೆ. ಈ ಸಿನಿಮಾವನ್ನು ಮಕ್ಕಳು ಸೇರಿದಂತೆ ಕುಟುಂಬ ಸಮೇತ ನೋಡಬಹುದು. ಇದರಲ್ಲಿ ಚಿಕ್ಕ ಲವ್‌ ಸ್ಟೋರಿ ಇದ್ದು, ಅಮ್ಮ ಮಗನ ಸೆಂಟಿಮೆಂಟ್‌ ಇದೆ. ಇದರ ಸ್ಕ್ರಿಪ್ಟ್ ಕೆಲಸದಿಂದ ಹಿಡಿದು ಕೊನೆಯವರೆಗೆ ಪ್ರಶಾಂತ್‌ ನೀಲ್‌ ನಮ್ಮ ಜತೆ ಇದ್ದರು. ಪ್ರತಿ ಶೆಡ್ಯೂಲ್‌ ಶೂಟ್‌ ಆದ ನಂತರ ಬಂದು ನೋಡಿ ಡಿಸ್ಕಸ್‌ ಮಾಡಿ ಸಲಹೆಗಳನ್ನು ನೀಡುತ್ತಿದ್ದರು. ಎಡಿಟಿಂಗ್‌ನಲ್ಲೂ ಅವರ ಪಾಲ್ಗೊಳ್ಳುವಿಕೆ ಇತ್ತು. ಅವರಿಗೆ ಸಿನಿಮಾ ಬಗ್ಗೆ ಭರವಸೆ ಇದೆ’ ಎಂದು ಅವರು ಹೇಳಿದ್ದಾರೆ. ‘ಶ್ರೀಮುರಳಿ ಬಹಳ ಒಳ್ಳೆಯ ವ್ಯಕ್ತಿ. ಅವರಿಗೆ ಹೀರೊ ಅನ್ನೋ ಹ್ಯಾಂಗೋವರ್‌ ಇಲ್ಲ. ನಿರ್ಮಾಪಕರು, ನಿರ್ದೇಶಕರಿಗೆ ಮರ್ಯಾದೆ ಕೊಡ್ತಾರೆ. ದೊಡ್ಮನೆ ಗುಣ ಅಂತಾರಲ್ಲಾ...ಅದು ಅವರಲ್ಲಿ ಬಂದುಬಿಟ್ಟಿದೆ. ವಿನಯದಿಂದ ನಡೆದುಕೊಳ್ತಾರೆ. ಸಿನಿಮಾಗಾಗಿ ಬಹಳ ಡೆಡಿಕೇಟ್‌ ಆಗಿ ಕಂಫರ್ಟ್‌ ಜೋನ್‌ ಇಲ್ಲದ ಕಡೆಯೂ ನಮಗೆ ಸಹಕರಿಸಿದ್ದಾರೆ’ ಎಂದು ಉಮಾಪತಿ ವಿವರಿಸಿದ್ದಾರೆ. ‘ಈ ಸಿನಿಮಾಗೆ ಹೆಸರು ಮಾಡಿರುವ ಉತ್ತಮ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ಅದ್ಭುತ ಕಥೆ, ಮೇಕಿಂಗ್‌ ಇದ್ದರೆ ಮಾತ್ರ ಜನರು ನೋಡುತ್ತಾರೆ. ಇಲ್ಲಂದ್ರೆ ಎರಡು ಗಂಟೆ ಯಾಕೆ ವೇಸ್ಟ್‌ ಮಾಡೋಣ ಅಂದುಕೊಳ್ತಾರೆ. ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ಮತ್ತು ನವೀನ್‌ ಛಾಯಾಗ್ರಹಣ ಮಾಡಿದ್ದಾರೆ. ವಾರಾಣಸಿ, ಹೈದರಾಬಾದ್‌ನಲ್ಲಿ ಶೂಟಿಂಗ್‌ ಮಾಡಿದ್ದೇವೆ. ಮೈಸೂರನ್ನು ಇದುವರೆಗೆ ಜನರು ನೋಡಿರದ ರೀತಿಯಲ್ಲಿ ತೋರಿಸಿದ್ದೇವೆ. ‘ಮದಗಜ’ ಸಿನಿಮಾ ರೈಟ್ಸ್‌ ದೊಡ್ಡ ಮೊತ್ತಕ್ಕೆ ಸೇಲ್‌ ಆಗಿದೆ. ತೆಲುಗು, ತಮಿಳು ಡಬ್ಬಿಂಗನ್ನು ಮುಂದಿನ ವಾರ ರಿಲೀಸ್‌ ಮಾಡುತ್ತಿದ್ದೇವೆ. ದಕ್ಷಿಣ ಭಾರತದ ಭಾಷೆ ಮತ್ತು ಹಿಂದಿ ಭಾಷೆಗಳ ರಿಮೇಕ್‌ ರೈಟ್ಸ್‌ ಕೂಡ ಸೇಲ್‌ ಆಗಿದೆ’ ಎಂದಿದ್ದಾರೆ ಅವರು. ಈ ಸಿನಿಮಾ ಪೈರಸಿ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನೂ ಅವರು ತೆಗೆದುಕೊಂಡಿದ್ದಾರಂತೆ. ‘ಈಗ ಪೈರಸಿ ತಡೆಯಲು ಒಂದು ಟೆಕ್ನಿಕಲ್‌ ಟೀಮ್‌ ಇದೆ. ಅವರಿಗೆ ಈ ಜವಾಬ್ದಾರಿ ನೀಡಿದ್ದೇವೆ. ಯಾರೇ ಸಿನಿಮಾ ಪೈರಸಿ ಮಾಡಿದರೂ ಅವರ ಪೇಜ್‌ ಕೂಡಲೇ ಡಿಲಿಟ್‌ ಆಗುತ್ತದೆ. ಪೈರಸಿ ಮಾಡಿದವರ ಮೇಲೂ ಕೇಸ್‌ ಹಾಕುತ್ತೇವೆ’ ಎಂದು ಉಮಾಪತಿ ಎಚ್ಚರಿಸಿದ್ದಾರೆ.