ಗಲ್ವಾನ್ ಸಂಘರ್ಷಕ್ಕೆ ಒಂದು ವರ್ಷ: ಹುತಾತ್ಮ ಯೋಧರನ್ನು ನೆನೆದು ಕಣ್ಣೀರಿಟ್ಟ ಭಾರತ

ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನೀ ಸೈನಿಕರೊಂದಿಗೆ ಹಿಂಸಾತ್ಮಕ ಸಂಘರ್ಷ ನಡೆಸಿ ಭಾರತವು ತನ್ನ 20 ಯೋಧರನ್ನು ಕಳೆದುಕೊಂಡು ಮಂಗಳವಾರಕ್ಕೆ ಒಂದು ವರ್ಷ. ಈ ಸಂದರ್ಭದಲ್ಲಿ ದೇಶದ ಜನತೆ ಹುತಾತ್ಮರಿಗೆ ವಂದನೆ ಸಲ್ಲಿಸಿದೆ.

ಗಲ್ವಾನ್ ಸಂಘರ್ಷಕ್ಕೆ ಒಂದು ವರ್ಷ: ಹುತಾತ್ಮ ಯೋಧರನ್ನು ನೆನೆದು ಕಣ್ಣೀರಿಟ್ಟ ಭಾರತ
Linkup
ಹೊಸದಿಲ್ಲಿ: ಲಡಾಖ್‌ನ ಗಡಿ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಸಮೀಪದ ಗಲ್ವಾನ್ ಕಣಿವೆಯಲ್ಲಿ ಮತ್ತು ಚೀನೀ ಪಡೆಗಳ ನಡುವೆ ಭೀಕರ ಮುಖಾಮುಖಿ ಸಂಘರ್ಷ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ, ಹಿಂಸಾಚಾರದಲ್ಲಿ ಮೃತಪಟ್ಟ ಯೋಧರಿಗೆ , ರಾಜಕೀಯ ಮುಖಂಡರು ವಂದನೆ ಸಲ್ಲಿಸಿದರು. 'ಅವರ ಶೌರ್ಯ ಪರಾಕ್ರಮವು ದೇಶದ ನೆನಪಿನಾಳದಲ್ಲಿ ಎಂದೆಂದಿಗೂ ಶಾಶ್ವತವಾಗಿ ಇರಲಿದೆ' ಎಂದು ರಕ್ಷಣಾ ಸಚಿವಾಲಯದ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ಪ್ರಧಾನ ನಿರ್ದೇಶನಾಲಯ ಟ್ವೀಟ್ ಮಾಡಿದೆ. ಸೇನಾ ಮುಖ್ಯಸ್ಥ ಎಂಎಂ ನರವಾಣೆ ಮತ್ತು ಇತರೆ ಎಲ್ಲ ಶ್ರೇಣಿಯ ಅಧಿಕಾರಿಗಳು, ಗಲ್ವಾನ್ ಕಣಿವೆಯಲ್ಲಿ ಭಾರತದ ಭೂಪ್ರದೇಶ ಹಾಗೂ ಸಾರ್ವಭೌಮತೆಯನ್ನು ರಕ್ಷಿಸಲು ಕೆಚ್ಚೆದೆಯಿಂದ ಹೋರಾಡಿ ಹುತಾತ್ಮರಾದ ಯೋಧರಿಗೆ ಗೌರವ ಅರ್ಪಿಸಿದರು. ದೇಶದ ಅನೇಕ ಭಾಗಗಳಲ್ಲಿ ಜನರು ಸಾಮಾಜಿಕ ಜಾಲತಾಣಗಳು ಹಾಗೂ ಕಾರ್ಯಕ್ರಮಗಳ ಮೂಲಕ ಯೋಧರ ಸಾಹಸವನ್ನು ಸ್ಮರಿಸಿ ಮೌನಾಚರಣೆ ಸಲ್ಲಿಸಿದರು. ಮೇಜರ್ ಜನರಲ್ ಆಕಾಶ್ ಕೌಶಿಕ್ ಅವರು ಲೇಹ್‌ನ ಯುದ್ಧ ಸ್ಮಾರಕದಲ್ಲಿ ಹೂಗುಚ್ಛ ಇರಿಸಿ ಹುತಾತ್ಮ ಸೈನಿಕರನ್ನು ನೆನೆದರು. ತೆಲಂಗಾಣದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಕೈಗಾರಿಕಾ ಸಚಿವ ಕೆಟಿ ರಾಮರಾವ್ ಅವರು ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. 2020ರ ಜೂನ್ 15-16ರ ರಾತ್ರಿಯಿಡೀ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಸೇನೆಗಳ ಸೈನಿಕರು ದೊಣ್ಣೆ, ಲೋಹದ ವಸ್ತು, ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದರು. ಈ ಭಯಾನಕ ಸಂಘರ್ಷದಲ್ಲಿ ಭಾರತದ 20 ಸೈನಿಕರು ಜೀವ ಕಳೆದುಕೊಂಡಿದ್ದರು. ಚೀನಾ ಕೂಡ ಅಪಾಯ ಸಾವು ನೋವುಗಳನ್ನು ಅನುಭವಿಸಿದ್ದರೂ, ಅದು ಮೃತಪಟ್ಟ ಸೈನಿಕ ವಿವರಗಳನ್ನು ಸರಿಯಾಗಿ ಬಹಿರಂಗಪಡಿಸಿಲ್ಲ. 16 ಬಿಹಾರ್ ರೆಜಿಮೆಂಟ್‌ನ ಕಮಾಂಡಿಂಗ್ ಅಧಿಕಾರಿಯಾಗಿದ್ದ ಕರ್ನಲ್ ಬಿ. ಸಂತೋಷ್ ಬಾಬು ಕೂಡ ಈ ಸಂಘರ್ಷದಲ್ಲಿ ಹುತಾತ್ಮರಾಗಿದ್ದರು. ಅವರಿಗೆ ದೇಶದ ಎರಡನೇ ಅತಿ ದೊಡ್ಡ ಯುದ್ಧ ಪುರಸ್ಕಾರವಾದ ಮಹಾವೀರ ಚಕ್ರ ಪುರಸ್ಕಾರವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗಿದೆ. ಹಿಂಸಾಚಾರದ ವೇಳೆ ಚೀನೀ ಪಡೆಗಳು ಬಂಧಿಸಿದ್ದ ಭಾರತದ ಹತ್ತು ಮಂದಿ ಸೈನಿಕರನ್ನು ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆಗಳ ಬಳಿಕ ಭಾರತಕ್ಕೆ ಹಿಂದಿರುಗಿಸಲಾಗಿತ್ತು. ತನ್ನ ಐವರು ಸೇನಾಧಿಕಾರಿಗಳು ಮತ್ತು ಸೈನಿಕರು ಮೃತಪಟ್ಟಿದ್ದಾಗಿ ಫೆಬ್ರವರಿಯಲ್ಲಿ ಚೀನಾ ಒಪ್ಪಿಕೊಂಡಿತ್ತು. ಆದರೆ ಚೀನೀಯರ ಸಾವಿನ ಸಂಖ್ಯೆ ಇನ್ನೂ ಅಧಿಕವಾಗಿದೆ ಎಂದು ನಂಬಲಾಗಿದೆ. ಹುತಾತ್ಮರಿಗೆ ನ್ಯಾಯ ಒದಗಿಸಿ: ಕಾಂಗ್ರೆಸ್ ಸಂಘರ್ಷದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವ ಸುಳ್ಳುಗಳನ್ನು ದೇಶ ಮರೆತಿಲ್ಲ ಎಂದು ಕಾಂಗ್ರೆಸ್ ಹೇಳಿದೆ. 'ನಮ್ಮ 20 ಸೈನಿಕರು ಹುತಾತ್ಮರಾಗಿರುವುದನ್ನು, ಚೀನಾವು ಭಾರತದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವುದನ್ನು ಮತ್ತು ಪ್ರಧಾನಿ ನಮ್ಮ ದೇಶಕ್ಕೆ ಹೇಳಿರುವ ಸುಳ್ಳುಗಳನ್ನು ಭಾರತ ಮರೆತಿಲ್ಲ. ಗಲ್ವಾನ್‌ನ ನಮ್ಮ ಹುತಾತ್ಮರಿಗೆ ನ್ಯಾಯಕ್ಕಾಗಿ ದೇಶ ಒತ್ತಾಯಿಸುತ್ತಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. 'ಗಲ್ವಾನ್‌ನಲ್ಲಿ ನಮ್ಮ ದೇಶದ ಗಡಿಯನ್ನು ರಕ್ಷಿಸುವಾಗ ತಮ್ಮ ಪ್ರಾಣಗಳನ್ನು ತೆತ್ತ ಎಲ್ಲ ಧೈರ್ಯಶಾಲಿ ಮಕ್ಕಳಿಗೆ ವಂದನೆಗಳು. ನಮ್ಮ 20 ಯೋಧರು ಹುತಾತ್ಮರಾಗಿ ಒಂದು ವರ್ಷವಾಯಿತು. ಚೀನೀಯರು ಈಗಲೂ ನಮ್ಮ ಭೂಮಿಯನ್ನು ಬಲವಂತವಾಗಿ ಆಕ್ರಮಿಸಿದ್ದಾರೆ. ದೇಶವನ್ನು ರಕ್ಷಿಸುವಲ್ಲಿ ಮೋದಿ ಸರಕಾರ ವಿಫಲವಾಗಿದೆ' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಆರೋಪಿಸಿದ್ದಾರೆ.