ಕೇಂದ್ರದ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್: ಈ ವರ್ಷದಿಂದಲೇ ಮಹಿಳೆಯರಿಗೆ ಎನ್‌ಡಿಎ ಪರೀಕ್ಷೆ

ಎನ್‌ಡಿಎ ಪರೀಕ್ಷೆಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡುವ ವ್ಯವಸ್ಥೆ ಕಲ್ಪಿಸಲು ಮುಂದಿನ ವರ್ಷದವರೆಗೆ ಸಮಯ ನೀಡಬೇಕೆಂಬ ಕೇಂದ್ರ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಕೇಂದ್ರದ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್: ಈ ವರ್ಷದಿಂದಲೇ ಮಹಿಳೆಯರಿಗೆ ಎನ್‌ಡಿಎ ಪರೀಕ್ಷೆ
Linkup
ಹೊಸದಿಲ್ಲಿ: ಈ ವರ್ಷದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ () ಪರೀಕ್ಷೆಗಳನ್ನು ತೆಗೆದುಕೊಳ್ಳಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಬುಧವಾರ ಕಡ್ಡಿಮುರಿದಂತೆ ಹೇಳಿದೆ. ಹೊಸ ವ್ಯವಸ್ಥೆಯೊಂದನ್ನು ಸ್ಥಾಪಿಸುವುದಕ್ಕಾಗಿ ಈ ನಿರ್ಧಾರವನ್ನು ಮುಂದಿನ ವರ್ಷದವರೆಗೂ ವಿಸ್ತರಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದೆ. 'ಈ ಯುವತಿಯರಲ್ಲಿ ನಾವು ಆಶಾಭಾವನೆ ಮೂಡಿಸಿದ್ದೇವೆ. ಅವರ ಆಶಾವಾದವನ್ನು ನಾವು ನಿರಾಕರಿಸಲು ಸಾಧ್ಯವಿಲ್ಲ' ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. 'ಇಂದು ಪರೀಕ್ಷೆಯಿಲ್ಲ, ನಾಳೆ ಪರೀಕ್ಷೆ' ಎಂಬ ನಿಲುವು, ಯುವ ಮಹಿಳೆಯ ಆಕಾಂಕ್ಷೆಗಳನ್ನು ಕಡೆಗಣಿಸುತ್ತದೆ ಎಂದ ನ್ಯಾಯಾಲಯ, ನವೆಂಬರ್ 14ರಂದು ಪರೀಕ್ಷಾ ಅಧಿಸೂಚನೆ ಹೊರಡಿಸುವಂತೆ ನಿರ್ದೇಶನ ನೀಡಿದೆ. ಸಶಸ್ತ್ರ ಪಡೆಗಳು ತುರ್ತು ಪರಿಸ್ಥಿತಿ ಹಾಗೂ ಸಂಕಷ್ಟದ ಸಂದರ್ಭಗಳನ್ನು ನಿಭಾಯಿಸುವ ಅತ್ಯಂತ ಪರಿಣಾಮಕಾರಿ ತಂಡಗಳಾಗಿವೆ. ಎನ್‌ಡಿಎಯಲ್ಲಿ ಯಾವುದೇ ವಿಳಂಬವಿಲ್ಲದೆ ಮಹಿಳೆಯರನ್ನು ಸೇರ್ಪಡೆಗೊಳಿಸಲು ಅಗತ್ಯ ವ್ಯವಸ್ಥೆಗಳನ್ನು ಅದು ಮಾಡಲಿದೆ ಎಂಬ ಭರವಸೆ ಇದೆ ಎಂದು ನ್ಯಾಯಮೂರ್ತಿ ಎಸ್‌ಕೆ ಕೌಲ್ ನೇತೃತ್ವದ ನ್ಯಾಯಪೀಠ ಹೇಳಿದೆ. ಮಹಿಳಾ ಅಭ್ಯರ್ಥಿಗಳೂ ಭಾಗವಹಿಸಲಿರುವ ದೇಶದ ಮೊಟ್ಟ ಮೊದಲ ಎನ್‌ಡಿಎ ಪರೀಕ್ಷೆಯನ್ನು ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಸುವುದಾಗಿ ಸರ್ಕಾರ ಹೇಳಿತ್ತು. ಈ ವರ್ಷವೇ ಮಹಿಳೆಯರಿಗೆ ಪರೀಕ್ಷೆ ಬರೆಯುವಂತೆ ಅವಕಾಶ ನೀಡಲು ಹೆಚ್ಚು ಸಮಯವಿಲ್ಲ ಎಂದು ಕೋರ್ಟ್‌ಗೆ ತಿಳಿಸಿತ್ತು. ಅವರು 2022ರ ಮೇ ತಿಂಗಳಲ್ಲಿ ಪರೀಕ್ಷೆಗೆ ಹಾಜರಾದರೆ, ಅವರ ನೇಮಕಾರಿ 2023ರ ಜನವರಿಯಲ್ಲಿ ನಡೆಯುತ್ತದೆ. ಹೀಗಾಗಿ ಇದು ಒಂದು ವರ್ಷ ವಿಳಂಬಗೊಳ್ಳಲು ನಾವು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಬಿಆರ್ ಗವಾಯ್ ಹೇಳಿದರು. ಸೇನೆಯಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳಲು ಅವಕಾಶವಿಲ್ಲದ ಎನ್‌ಡಿಎ ಪರೀಕ್ಷೆಯು ತಾರತಮ್ಯದಿಂದ ಕೂಡಿದೆ ಎಂದು ಸುಪ್ರೀಂಕೋರ್ಟ್ ಈ ಹಿಂದೆ ಸರ್ಕಾರ ಮತ್ತು ಸೇನೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ನವೆಂಬರ್ 14ರಂದು ನಡೆಯಲಿರುವ ಎನ್‌ಡಿಎ ಪ್ರವೇಶ ಪರೀಕ್ಷೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಮೇ ತಿಂಗಳ ವೇಳೆಗೆ ಕಲ್ಪಿಸಬಹುದು. ಈ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಧ್ಯಯನ ಸಮೂಹವೊಂದನ್ನು ರಚಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ್ದರು. 'ನಿಮ್ಮ ಸಮಸ್ಯೆಗಳನ್ನು ನಾವು ಒಪ್ಪಿಕೊಳ್ಳುತ್ತೇವೆ. ಅದಕ್ಕೆ ನೀವು ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಸಮರ್ಥರಿದ್ದೀರಿ ಎಂಬ ಖಾತರಿ ನನಗಿದೆ. ನಾವು ಫಲಿತಾಂಶವನ್ನು ನೋಡೋಣ. ಉದ್ದೇಶವನ್ನು ಮುಂದುವರಿಸಬಹುದು. ಪರೀಕ್ಷೆ ತೆಗೆದುಕೊಳ್ಳಲು ಸಿದ್ಧವಾಗಿರುವ ಅಭ್ಯರ್ಥಿಗಳ ಆಕಾಂಕ್ಷೆ ಹಿನ್ನೆಲೆಯಲ್ಲಿ ಸರ್ಕಾರದ ಹೇಳಿಕೆಯನ್ನು ಒಪ್ಪುವುದು ಕಷ್ಟ' ಎಂದು ನ್ಯಾಯಮೂರ್ತಿ ಬಿಆರ್ ಗವಾಯ್ ಹೇಳಿದರು. ಸಶಸ್ತ್ರ ಪಡೆಗಳು ಸಂಕಷ್ಟದ ಸಮಯದಲ್ಲಿ ತ್ವರಿತವಾಗಿ ಪ್ರತಿಸ್ಪಂದಿಸುತ್ತವೆ. ಈ ತುರ್ತು ಸನ್ನಿವೇಶವನ್ನೂ ಅದು ಎದುರಿಸಲು ಸಮರ್ಥವಾಗಿದೆ ಎಂಬ ಭರವಸೆ ಇದೆ. ನಾವು ನೀಡಿದ ಆದೇಶವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಅವರು ತಿಳಿಸಿದರು.