ಎಣ್ಣೆಕಾಳು ಉತ್ಪಾದನೆಯಲ್ಲಿ ಸ್ವಾವಲಂಬನೆ ಗುರಿ: ಶೋಭಾ ಕರಂದ್ಲಾಜೆ

ಮುಂದಿನ ಮೂರು ವರ್ಷದಲ್ಲಿ ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದುವುದು ಕೇಂದ್ರ ಸರಕಾರದ ಮುಂದಿನ ಗುರಿಯಾಗಿದೆ ಎಂದು ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು.

ಎಣ್ಣೆಕಾಳು ಉತ್ಪಾದನೆಯಲ್ಲಿ ಸ್ವಾವಲಂಬನೆ ಗುರಿ: ಶೋಭಾ ಕರಂದ್ಲಾಜೆ
Linkup
ಕಲಬುರಗಿ: ಮುಂದಿನ ಮೂರು ವರ್ಷದಲ್ಲಿ ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದುವುದು ಕೇಂದ್ರ ಸರಕಾರದ ಮುಂದಿನ ಗುರಿಯಾಗಿದೆ ಎಂದು ಕೇಂದ್ರದ ಖಾತೆ ರಾಜ್ಯ ಸಚಿವರಾದ ಹೇಳಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಣ್ಣೆಕಾಳು, ದ್ವಿದಳ ಧಾನ್ಯ ಬಿಟ್ಟರೆ ಬೇರೆ ಎಲ್ಲದರಲ್ಲೂ ಭಾರತ ದೇಶ ಸ್ವಾವಲಂಬನೆ ಹೊಂದಿದೆ. ಎಣ್ಣೆಕಾಳುಗಳನ್ನು ಶೇ.70ರಷ್ಟು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಇವುಗಳನ್ನು ಆಮದು ಮಾಡಿಕೊಳ್ಳುವುದಕ್ಕೇ ಏಳೂವರೆ ಸಾವಿರ ಕೋಟಿ ರೂ.ವಿದೇಶಿ ವಿನಿಮಯಕ್ಕೆ ಖರ್ಚು ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎಣ್ಣೆಕಾಳುಗಳಲ್ಲಿ ಸ್ವಾವಲಂಬನೆಗೆ ನಿರ್ಧರಿಸಿದೆ ಎಂದು ತಿಳಿಸಿದರು. ಕೃಷಿ ಜಿಡಿಪಿ ಹೆಚ್ಚಳಕ್ಕೆ ನಿರ್ಧಾರ ಏಳು ದಶಕಗಳಿಂದ ಕೃಷಿ ಜಿಡಿಪಿ ಕೇವಲ 13ರಿಂದ 14ರಷ್ಟು ಇತ್ತು. ಕಳೆದ 6 ವರ್ಷಗಳಲ್ಲಿ ಕೃಷಿ ಜಿಡಿಪಿ 20.22ರಷ್ಟಾಗಿದೆ. ಇನ್ನೂ ಕೆಲ ವರ್ಷಗಳಲ್ಲಿ 25ಕ್ಕೆ ಹೆಚ್ಚಿಸಬೇಕು ಎಂಬ ಗುರಿಯಿದೆ ಎಂದು ಹೇಳಿದರು. ರಫ್ತುದಾರರ ಸಮ್ಮೇಳನ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಜಗತ್ತಿನ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುವ ರಫ್ತುದಾರರ ಬೃಹತ್‌ ಸಮ್ಮೇಳನ ಸೆ.22ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ ಅವರು, ಇದರಿಂದ ದೇಶದ ಉತ್ಪನ್ನಗಳು ವಿದೇಶಕ್ಕೆ ರಫ್ತು ಮಾಡುವ ಕಾರ್ಯ ಯೋಜನೆಗಳು ಸಮ್ಮೇಳನದಲ್ಲಿ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು. ಕ್ಲಸ್ಟರ್‌ ಆಧಾರಿತ ಕೃಷಿ ಈಗಾಗಲೇ ನಮ್ಮಲ್ಲಿ ಕಾಫಿ, ಪೆಪ್ಪರ್‌, ರೋಸ್‌ ಈರುಳ್ಳಿಗೆ ಕ್ಲಸ್ಟರ್‌ ಮಾರ್ಕೆಟಿಂಗ್‌ ವ್ಯವಸ್ಥೆಯಿದೆ. ಇದನ್ನು ಎಲ್ಲ ಕೃಷಿ ಉತ್ಪಾದನೆಗಳಿಗೆ ಮಾಡಬೇಕು ಎಂಬ ಚಿಂತನೆಯಿದೆ. ಕ್ಲಸ್ಟರ್ಸ್ ಮತ್ತು ಟ್ರೇಡ್‌ ಮಾರುಕ್ಟಟೆಗೆ ಹೆಚ್ಚಿನ ಆದ್ಯತೆಯನ್ನು ಕೃಷಿಯಲ್ಲಿ ತರಲು ಚಿಂತಿಸಲಾಗುತ್ತಿದೆ ಎಂದು ಹೇಳಿದರು. ಶಾಸಕ ಬಸವರಾಜ ಮತ್ತಿಮೂಡ್‌, ಎಂಎಲ್‌ಸಿ ಶಶಿಲ್‌ ನಮೋಶಿ, ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ್‌ ರದ್ದೇವಾಡಗಿ, ಅಂಬಾರಾಯ ಅಷ್ಠಗಿ ಇತರರಿದ್ದರು. ದೇಶದಲ್ಲಿ 10 ಸಾವಿರ ಕೃಷಿ ಉತ್ಪಾದಕರ ಸಂಘ ಆರ್ಥಿಕವಾಗಿ ಹಿಂದುಳಿದ ರೈತರಿಗೆ ಅನುಕೂಲವಾಗಲು ಹಾಗೂ ಉತ್ಪಾದನೆ ಹೆಚ್ಚಿಸುವ ಸಲುವಾಗಿ ದೇಶದಲ್ಲಿ 10 ಸಾವಿರ ಕೃಷಿ ಉತ್ಪಾದಕರ ಸಂಘಗಳನ್ನು(ಎಫ್‌ಪಿಒ) ಮಾಡುವ ಉದ್ದೇಶ ಹೊಂದಲಾಗಿದೆ. ಈ ಸಂಘಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ. ರಾಜ್ಯದಲ್ಲಿಯೂ ಸಿಎಂ ಬಸವರಾಜ ಬೊಮ್ಮಾಯಿ 750 ಸಂಘಗಳನ್ನು ಆರಂಭಿಸುವುದಾಗಿ ತಿಳಿಸಿದ್ದು, ಸ್ವಾಗತಾರ್ಹ ವಿಷಯ ಎಂದು ಹೇಳಿದರು. ಸಕ್ಕರೆ ಕಾರಖಾನೆಗಳಿಂದ ಎಥೆನಾಲ್‌ ಕಬ್ಬು ಬೆಳೆಗಾರರ ಸಮಸ್ಯೆ ತೀರದ ಪರಿಸ್ಥಿತಿಯಿದೆ. ಆದ್ದರಿಂದ ಸಕ್ಕರೆ ಕಾರಖಾನೆಗಳು ಎಥೆನಾಲ್‌ ಉತ್ಪಾದನೆಗೆ ಒತ್ತುಕೊಡಬೇಕು. ಇದರಿಂದ ಪೆಟ್ರೋಲಿಯಂ ಬಳಕೆ ಕಡಿಮೆಯಾಗಲಿದೆ ಎಂದು ಹೇಳಿದರು. ಸ್ಥಳೀಯ ಭಾಷೆಯಲ್ಲಿ ಕಸ್ಟಮರ್‌ ಕೇರ್‌ಸೆಂಟರ್‌ ರೈತರು ಬೆಳೆವಿಮೆ ತೊಂದರೆಯಾದಾಗ ಕಾಲ್‌ಸೆಂಟರ್‌ ಕಾಲ್‌ ಮಾಡಿದಾಗ ಇಂಗ್ಲಿಷ್‌, ಹಿಂದಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದು ದೇಶಾದ್ಯಂತ ಸಮಸ್ಯೆಯಾಗಿದ್ದು, ಸ್ಥಳೀಯ ಭಾಷೆಯಲ್ಲಿ ರೈತರಿಗೆ ಅನುಕೂಲವಾಗಲು ಕಾಲ್‌ಸೆಂಟರ್‌ ಆರಂಭಿಸಲು ಚಿಂತಿಸಲಾಗುವುದು ಎಂದು ಸಚಿವರು ತಿಳಿಸಿದರು. ದೆಹಲಿಯಲ್ಲಿ ಧರಣಿ, ಮಾತುಕತೆಗೆ ಸದಾ ಸಿದ್ಧ ದಿಲ್ಲಿಯಲ್ಲಿ ರೈತರು ಧರಣಿ ಕುಳಿತಿದ್ದು, ಇವರಲ್ಲಿ ಈಗಾಗಲೇ ಕೇಂದ್ರ ಸರಕಾರ 11 ಸುತ್ತಿನ ಮಾತುಕತೆ ನಡೆಸಿದೆ. ರೈತರಿಗೆ ಬಿಲ್‌ ಯಾಕೆ ಮಾಡಿದ್ದೇವೆ ಎಂಬುದುನ್ನೂ ಸಹ ರೈತರು ಅರ್ಥ ಮಾಡಿಕೊಳ್ಳಬೇಕು. ತೊಗರಿ ಆಮದು ಅನಿವಾರ್ಯ ತೊಗರಿ ಆಮದ್‌ ನಿಲ್ಲಿಸಬೇಕೆಂದು ರೈತರ ಒತ್ತಾಯವಿದೆ ಎಂಬ ಬೇಡಿಕೆಗೆ ಉತ್ತರಿಸಿದ ಸಚಿವರು, ನಮ್ಮ ದೇಶಕ್ಕೆ ಬೇಕಾದ ಧಾನ್ಯ ಎಷ್ಟು ಬೇಕೋ ಅಷ್ಟು ನಮ್ಮಲ್ಲಿಇಲ್ಲಎಂದಾಗ ಅನಿವಾರ್ಯವಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಅನಿವಾರ್ಯತೆಯಿದೆ ಎಂದು ಹೇಳಿದರು.