ಈ ಚಿತ್ರದಲ್ಲಿರುವ ಬಾಲಕರು ಈಗ ದಕ್ಷಿಣ ಭಾರತದ 'ಸ್ಟಾರ್' ನಟರು; ಯಾರೆಂದು ಗುರುತಿಸಿ

ಇಲ್ಲಿರುವ ಬಾಲಕರು ಈ ಹಳೆಯ ಫೋಟೋ ನೋಡಿದರೆ, ನಿಮಗೆ ಯಾರು ನೆನಪಾಗುತ್ತಾರೆ? ಊಹಿಸಿ. ಈ ಮೂವರು ಈಗ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇಡೀ ಭಾರತವೇ ಇವರ ಬಗ್ಗೆ ಮಾತನಾಡುತ್ತದೆ. ಇವರ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿಸುತ್ತವೆ. ಗೆಸ್ ಮಾಡಿ, ಯಾರಿರಬಹುದು ಇವರು?

ಈ ಚಿತ್ರದಲ್ಲಿರುವ ಬಾಲಕರು ಈಗ ದಕ್ಷಿಣ ಭಾರತದ 'ಸ್ಟಾರ್' ನಟರು; ಯಾರೆಂದು ಗುರುತಿಸಿ
Linkup
ಈ ಬ್ಲ್ಯಾಕ್‌ & ವೈಟ್‌ ಫೋಟೋದಲ್ಲಿರುವ ಮೂವರು ಬಾಲಕರು ಯಾರು? ಯಾಕೆಂದರೆ, ಈ ಫೋಟೋ ಸೋಮವಾರ ಸಖತ್ ವೈರಲ್ ಆಗಿದೆ. ಯಾರು ಇರಬಹುದು ಇವರು ಎಂಬ ಚರ್ಚೆ ನಡೆದಿದೆ. ಸಣ್ಣ ಸುಳಿವು ಏನೆಂದರೆ, ಈ ಮೂವರು ಬಾಲಕರು ಅಣ್ಣ-ತಮ್ಮಂದಿರು! ಜೊತೆಗೆ ಚಿತ್ರರಂಗದಲ್ಲಿ ಸಕ್ರಿಯರವಾಗಿರುವ ನಟರು/ನಿರ್ಮಾಪಕರು. ಈಗಲಾದರೂ ಗೊತ್ತಾಗಿರಲೇಬೇಕಲ್ಲ? ಹೌದು, ಈ ಫೋಟೋದಲ್ಲಿ ಇರುವುದು ಟಾಲಿವುಡ್‌ 'ಮೆಗಾ ಸ್ಟಾರ್' . ಅವರು ಎತ್ತಿಕೊಂಡಿರುವುದು 'ಪವರ್ ಸ್ಟಾರ್' ಪವನ್ ಕಲ್ಯಾಣ್‌ ಅವರನ್ನು. ಇನ್ನು, ಜೊತೆಗೆ ಇರುವುದು ಮತ್ತೋರ್ವ ಸಹೋದರ ! ಸಹೋದರರ ದಿನಕ್ಕೆ ಸ್ಪೆಷಲ್‌ ಫೋಟೋಇಂದು (ಮೇ 24) . ಹಾಗಾಗಿ, ಚಿರು ತಮ್ಮ ಸಹೋದರರ ಜೊತೆಗೆ ಇರುವ ಈ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ಚಿರುಗೆ ತಮ್ಮಂದಿರ ಮೇಲೆ ಅಪಾರವಾದ ಪ್ರೀತಿ. ಹಾಗೆಯೇ, ತಮ್ಮ ನಾಗ ಬಾಬು ಅವರಿಗೆ ಅಣ್ಣ ಚಿರಂಜೀವಿ ಎಂದರೆ ಅಪಾರ ಗೌರವ, ಪ್ರೀತಿ, ಕಾಳಜಿ. ಹಾಗೆಯೇ ಪವನ್‌ ಕಲ್ಯಾಣ್‌ ಅವರನ್ನು ಕಂಡರೆ ಮನೆಯ ಎಲ್ಲರಿಗೂ ತುಂಬ ಪ್ರೀತಿ. ಸಹೋದರರ ದಿನದ ಅಂಗವಾಗಿ ಚಿರು ಹಂಚಿಕೊಂಡ ಈ ಫೋಟೋ ಸಖತ್ ವೈರಲ್ ಆಗಿದೆ. ಅಂದಹಾಗೆ, ಚಿರು ಫ್ಯಾಮಿಲಿಯಲ್ಲಿ ಯಾರಿಗೂ ಸಿನಿಮಾ ನಂಟು ಇರಲಿಲ್ಲ. ಚಿರಂಜೀವಿ ಅವರೇ ಮೊದಲ ಬಾರಿಗೆ ಬಣ್ಣ ಹಚ್ಚಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಆನಂತರ ತಮ್ಮ ನಾಗ ಬಾಬು ಅವರನ್ನು ಪರಿಚಯಿಸಿದರು. ನಟ/ನಿರ್ಮಾಪಕರಾಗಿ ನಾಗ ಬಾಬು ಜನಪ್ರಿಯರಾದರು. ಆನಂತರ 1997ರಲ್ಲಿ ಪವನ್‌ ಕಲ್ಯಾಣ್‌ ಅವರನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸಿದರು. ನಾಗ ಬಾಬು ಹೆಚ್ಚು ಪೋಷಕ ಪಾತ್ರಗಳಲ್ಲೇ ಬ್ಯುಸಿ ಆದರು. ಈಗಲೂ ತೆಲುಗಿನ ಜನಪ್ರಿಯ ನಟರಲ್ಲಿ ಒಬ್ಬರು. ಒಂದಷ್ಟು ಸಮಯ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡಿದ್ದ ಚಿರು, ಈಗ ಪುನಃ ಫಾರ್ಮ್‌ನಲ್ಲಿದ್ದಾರೆ. ಇನ್ನು, ಚಿರು ಕುಟುಂಬದಿಂದ ಸಹೋದರರು ಮಾತ್ರವಲ್ಲದೆ, ಮತ್ತೊಂದು ಪೀಳಿಗೆಯ ನಟರು ಕೂಡ ಕಾಲಿಟ್ಟಿದ್ದಾರೆ. ಚಿರು ಪುತ್ರ ರಾಮ್ ಚರಣ್, ಅಳಿಯ ಕಲ್ಯಾಣ್ ದೇವ್‌, ನಾಗ ಬಾಬು ಪುತ್ರ ವರುಣ್ ತೇಜ್‌, ಪುತ್ರಿ ನಿಹಾರಿಕಾ ಕೊನಿಡೆಲ, ಚಿರು ಸಹೋದರಿಯ ಪುತ್ರರಾದ ಸಾಯಿ ಧರಮ್‌ ತೇಜ್‌, ವೈಷ್ಣವ್ ತೇಜ್‌ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮುಂದಿನ ಕೆಲ ವರ್ಷಗಳಲ್ಲಿ ಪವನ್‌ ಕಲ್ಯಾಣ್ ಪುತ್ರ ಅಕಿರಾ ನಂದನ್ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ. ಹೀಗೆ ಟಾಲಿವುಡ್‌ಗೆ ಮೆಗಾ ಸ್ಟಾರ್ ಫ್ಯಾಮಿಲಿ ಕೊಡುಗೆ ಸಾಕಷ್ಟಿದೆ.