ಅಪರೂಪಕ್ಕೆ ಮನೆಗೆ ಬಂದು ಪತ್ನಿಯ ಶೀಲ ಶಂಕಿಸಿ ಕೊಲೆಗೈದವನು ಆಂಧ್ರದಲ್ಲಿ ಬೀದಿ ಹೆಣವಾದ!

ಮಗು ಮನೆಯಲ್ಲಿದ್ದರೆ ಪತ್ನಿ ಹತ್ಯೆ ಮಾಡುವುದು ಕಷ್ಟ ಎಂದು ಭಾವಿಸಿ ಮೊದಲು ಅಳಿಯನಿಗೆ ಕರೆ ಮಾಡಿ, ಮೊಮ್ಮಗಳನ್ನು ನೋಡಬೇಕು ಅನಿಸುತ್ತಿದೆ. ನೀಲಸಂದ್ರ ಸಂಬಂಧಿ ಮನೆಗೆ ಕರೆತರುವಂತೆ ಹೇಳಿದ್ದ. ಅದರಂತೆ ಅಳಿಯ ತನ್ನ ಮಗಳನ್ನು ಕರೆದುಕೊಂಡು ನೀಲಸಂದ್ರ ಕಡೆ ಹೋಗುತ್ತಿದ್ದಂತೆಯೇ, ಇತ್ತ ಮನೆಯಲ್ಲಿದ್ದ ಮಗ ಮತ್ತು ಸೊಸೆ ಕೆಲಸಕ್ಕೆ ತೆರಳಿದ್ದರು. ಇದೇ ಸಮಯಕ್ಕೆ ಕಾಯುತ್ತಿದ್ದ ಆರೋಪಿ ನಿಸಾರ್‌ ಮಧ್ಯಾಹ್ನ 3 ಗಂಟೆಗೆ ತನ್ನ ಮನೆಗೆ ಬಂದು ಪತ್ನಿ ಬಳಿ ಸಣ್ಣ ಸಿಲಿಂಡರ್‌ ಕೊಡುವಂತೆ ಸೂಚಿಸಿದ್ದ.

ಅಪರೂಪಕ್ಕೆ ಮನೆಗೆ ಬಂದು ಪತ್ನಿಯ ಶೀಲ ಶಂಕಿಸಿ ಕೊಲೆಗೈದವನು ಆಂಧ್ರದಲ್ಲಿ ಬೀದಿ ಹೆಣವಾದ!
Linkup
ಬೆಂಗಳೂರು: ಶೀಲ ಶಂಕಿಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ತನ್ನ ಪತ್ನಿಯನ್ನೇ ಹತ್ಯೆಗೈದು ಪರಾರಿಯಾಗಿದ್ದವನು ಆಂಧ್ರದಲ್ಲಿ ಬೀದಿ ಹೆಣವಾಗಿ ಪತ್ತೆಯಾಗಿದ್ದಾನೆ. ರಾಜೇಂದ್ರ ನಗರದ ಆಯೇಷಾ (45) ಕೊಲೆಯಾದವರು. ಇವರ ಪತಿ ನಿಸಾರ್‌ (50) ಆಂಧ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು. ಹೆಚ್ಚಾಗಿ ಮನೆಯಲ್ಲಿ ಇರದ ನಿಸಾರ್‌, ಮಸೀದಿಗಳಲ್ಲಿ ಚಂದಾ ವಸೂಲಿ ಮಾಡಿ ಮದರಸಗೆ ನೀಡುವ ಕೆಲಸ ಮಾಡುತ್ತಿದ್ದ. ಮನೆಗೆ ಬಂದ ವೇಳೆಯಲ್ಲೆಲ್ಲ ಪತ್ನಿಯ ಶೀಲ ಶಂಕಿಸಿ ಆಕೆಯೊಂದಿಗೆ ಜಗಳ ಮಾಡುತ್ತಿದ್ದ. ಇದೇ ರೀತಿ ಜಗಳವಾಗುತ್ತಿದ್ದರಿಂದ ನ.19ರಂದು ಪತ್ನಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ಪತ್ನಿ ಕೊಲೆ ಮಾಡಲೆಂದು ಬಂಕ್‌ನಿಂದ ಪೆಟ್ರೋಲ್‌ ಖರೀದಿಸಿ ಮನೆಗೆ ಬಂದಿದ್ದ. ಆಯೇಷಾ ಜತೆಗೆ ಮೊಮ್ಮಗಳೂ ಇದ್ದಳು. ಮಗು ಮನೆಯಲ್ಲಿದ್ದರೆ ಪತ್ನಿ ಹತ್ಯೆ ಮಾಡುವುದು ಕಷ್ಟ ಎಂದು ಭಾವಿಸಿ ಮೊದಲು ಅಳಿಯನಿಗೆ ಕರೆ ಮಾಡಿ, ಮೊಮ್ಮಗಳನ್ನು ನೋಡಬೇಕು ಅನಿಸುತ್ತಿದೆ. ನೀಲಸಂದ್ರ ಸಂಬಂಧಿ ಮನೆಗೆ ಕರೆತರುವಂತೆ ಹೇಳಿದ್ದ. ಅದರಂತೆ ಅಳಿಯ ತನ್ನ ಮಗಳನ್ನು ಕರೆದುಕೊಂಡು ನೀಲಸಂದ್ರ ಕಡೆ ಹೋಗುತ್ತಿದ್ದಂತೆಯೇ, ಇತ್ತ ಮನೆಯಲ್ಲಿದ್ದ ಮಗ ಮತ್ತು ಸೊಸೆ ಕೆಲಸಕ್ಕೆ ತೆರಳಿದ್ದರು. ಇದೇ ಸಮಯಕ್ಕೆ ಕಾಯುತ್ತಿದ್ದ ಆರೋಪಿ ನಿಸಾರ್‌ ಮಧ್ಯಾಹ್ನ 3 ಗಂಟೆಗೆ ತನ್ನ ಮನೆಗೆ ಬಂದು ಪತ್ನಿ ಬಳಿ ಸಣ್ಣ ಸಿಲಿಂಡರ್‌ ಕೊಡುವಂತೆ ಸೂಚಿಸಿದ್ದ. ಪತ್ನಿ ಸಿಲಿಂಡರ್‌ ತರಲು ಹೋಗುತ್ತಿದ್ದಂತೆ ಆಕೆಯ ಮೇಲೆ ಪೆಟ್ರೋಲ್‌ ಸುರಿದಿದ್ದ. ಆತಂಕಗೊಂಡ ಪತ್ನಿ ಆಯೇಷಾ ಪತಿಯನ್ನು ಹೊರ ಹಾಕಿ ತಕ್ಷಣ ಬಾಗಿಲು ಲಾಕ್‌ ಮಾಡಿಕೊಂಡಿದ್ದಳು. ಆಕ್ರೋಶಗೊಂಡ ನಾಸಿರ್‌ ಮನೆಯ ಕಿಟಕಿ ಗಾಜನ್ನು ಒಡೆದಿದ್ದಾನೆ. ಈ ವೇಳೆ ಒಡೆದ ಗಾಜಿನ ಚೂರು ನಾಸಿರ್‌ ಬಲಗೈ ಸೀಳಿ ರಕ್ತ ಹರಿದಿತ್ತು. ಇಷ್ಟಾದರೂ ಸುಮ್ಮನಾಗದ ಆರೋಪಿ ನಾಸಿರ್‌ ಕಿಟಕಿಯಿಂದಲೇ ಬೆಂಕಿ ಕಡ್ಡಿ ಗೀರಿ ಆಯೇಷಾ ಮೇಲೆ ಎಸೆದಿದ್ದ. ಪರಿಣಾಮ ಆಯೇಷಾ ಮೈಗೆ ಬೆಂಕಿ ಹೊತ್ತಿಕೊಂಡಿತ್ತು. ಕಿಟಕಿ ಬಳಿ ಇದ್ದ ನಾಸಿರ್‌ ಮುಖಕ್ಕೂ ಬೆಂಕಿಯಿಂದ ಸುಟ್ಟ ಗಾಯಗಳಾಗಿತ್ತು. ಆಯೇಷಾ ಚೀರಾಟ ಕೇಳಿ ನೆರೆ-ಹೊರೆಯವರು ಬರುವ ವೇಳೆ ನಿಸಾರ್‌ ಆಂಧ್ರಪ್ರದೇಶದ ಬಸ್ಸನ್ನೇರಿ ಪರಾರಿಯಾಗಿದ್ದ. ಮದನಪಲ್ಲಿಗೆ ಪರಾರಿ ಗಂಭೀರವಾಗಿ ಗಾಯಗೊಂಡ ಆಯೇಷಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನ.20ರಂದು ಚಿಕಿತ್ಸೆ ಫಲಿಸದೆ ಆಯೇಷಾ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿಸಾರ್‌ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್‌ ಆಫ್‌ ಆಗಿತ್ತು. ಪೊಲೀಸರಿಗೆ ಸುಳಿವು ಸಿಗದಂತೆ ಆಗಾಗ ಮೊಬೈಲ್‌ ಆನ್‌ ಮಾಡಿ ಆಫ್‌ ಮಾಡುತ್ತಿದ್ದ. ಯಾರಿಗೂ ಕರೆ ಮಾಡಿರಲಿಲ್ಲ. ಟವರ್‌ ಲೊಕೇಶನ್‌ ಮೂಲಕ ಪರಿಶೀಲಿಸಿದಾಗ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಆತ ಇರುವುದು ಗೊತ್ತಾಗಿತ್ತು. ಪೊಲೀಸರು ಅಲ್ಲಿರುವ ದರ್ಗಾ, ಮಸೀದಿಯಲ್ಲಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಭಾನುವಾರ ನಿಸಾರ್‌ ಮಗ ತಂದೆಯ ಮೊಬೈಲ್‌ಗೆ ಕರೆ ಮಾಡಿದ್ದ. ಕರೆ ಸ್ವೀಕರಿಸಿದ ಸ್ಥಳೀಯರು ನಿಸಾರ್‌ ಆಂಧ್ರದ ಪೆನುಗೊಂಡದಲ್ಲಿ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು. ಮಸೀದಿ ಮುಂದೆ ಸಾವು ಪತ್ನಿಯನ್ನು ಕೊಲೆ ಮಾಡುವಾಗ ನಿಸಾರ್‌ ಕೈಗೆ, ಮುಖಕ್ಕೆ ಗಾಯವಾಗಿತ್ತು. ಸರಿಯಾದ ಚಿಕಿತ್ಸೆ ಪಡೆದಿರಲಿಲ್ಲ ಎನ್ನಲಾಗಿದೆ. ನ.22ರಂದು ಹೃದಯಾಘಾತದಿಂದ ಪೆನುಗೊಂಡದ ಮಸೀದಿಯೊಂದರ ಮುಂದೆ ಪ್ರಾಣ ಬಿಟ್ಟಿದ್ದಾನೆ. ಆಂಧ್ರದಲ್ಲೇ ಆತನ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.