ಬೆಂಗಳೂರು: ಆಸ್ಪತ್ರೆ ಹೊರಗೆ, ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌; ಅಗತ್ಯ ಇರುವವರಿಗೆ ತಕ್ಷಣ ಪ್ರಾಣವಾಯು!

ಈ ವಾಹನವು ನಗರದಾದ್ಯಂತ ಸಂಚರಿಸಲಿದ್ದು, ಅಗತ್ಯವಿರುವವರಿಗೆ ಆಕ್ಸಿಜನ್‌ ವ್ಯವಸ್ಥೆ ಮಾಡಲಾಗುತ್ತದೆ. ಇದರ ಯಶಸ್ಸು ಆಧರಿಸಿ ಆಕ್ಸಿ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡಲು ಚಿಂತಿಸಲಾಗಿದೆ. ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ. ತ್ರಿಲೋಕಚಂದ್ರ ತಿಳಿಸಿದರು.

ಬೆಂಗಳೂರು: ಆಸ್ಪತ್ರೆ ಹೊರಗೆ, ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌; ಅಗತ್ಯ ಇರುವವರಿಗೆ ತಕ್ಷಣ ಪ್ರಾಣವಾಯು!
Linkup
ಬೆಂಗಳೂರು: ಖಾಸಗಿ ಸ್ವಯಂ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಪ್ರಾಯೋಗಿಕವಾಗಿ ಕೋವಿಡ್‌ ಸೋಂಕಿತರಿಗೆ ಪ್ರಾಣವಾಯು ನೀಡಲು ಮೊಬೈಲ್‌ ಆಕ್ಸಿಜನ್‌ ಪೂರೈಕೆ ಬಸ್‌ ಅನ್ನು ಸಿದ್ಧಪಡಿಸಿದೆ. ಈ ಬಸ್‌ನಲ್ಲಿನ ಆಕ್ಸಿಜನ್‌ ಸೌಲಭ್ಯವು ರೋಗಿಗಳಿಗೆ ಲಭ್ಯವಾಗಲಿದೆ. ''ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಉಂಟಾಗಿದೆ. ಹೀಗಾಗಿ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಕ್ಸಿಜನ್‌ ಸಿಗದಂತಾಗಿದ್ದು, ತೀವ್ರ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿಯೇ ಬಸ್ಸಿನಲ್ಲಿಯೇ ಸೋಂಕಿತರಿಗೆ ತುರ್ತು ಆಮ್ಲಜನಕ ಪೂರೈಸಲು ನೂತನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ,'' ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು. ''ಸೋಂಕಿತರಿಗೆ ಆಕ್ಸಿಜನ್‌ ಪೂರೈಸುವ ಈ ವಿಶೇಷ ಬಸ್‌ ಅನ್ನು ಕೆ.ಸಿ.ಜನರಲ್‌ ಆಸ್ಪತ್ರೆ ಅಥವಾ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನಿಲುಗಡೆ ಮಾಡಲಾಗುವುದು. ಕೋವಿಡ್‌ ಸೋಂಕಿತರು ಚಿಕಿತ್ಸೆಗೆ ಬಂದಾಗ ತಕ್ಷಣಕ್ಕೆ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಗದಿದ್ದಾಗ, ಮೊಬೈಲ್‌ ಬಸ್ಸಿನಲ್ಲಿಯೇ ಆಮ್ಲಜನಕ ಪಡೆಯಬಹುದಾಗಿದೆ. ರೋಗಿಗಳಿಗೆ ಆಕ್ಸಿಜನ್‌ ಒದಗಿಸಲು ಅಗತ್ಯವಿರುವ ಎಲ್ಲ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ'' ಎಂದು ಹೇಳಿದರು. ಮನೆ ಬಾಗಿಲಿಗೆ ಬರಲಿದೆ ! ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಆಕ್ಸಿಜನ್‌ ನೀಡಲು 'ಆಕ್ಸಿ ಬಸ್‌' ಸಿದ್ಧವಾಗಿದೆ. ಈ ಬಸ್‌ ಆಮ್ಲಜನಕದ ಅಗತ್ಯವಿರುವ ಕೋವಿಡ್‌ ಸೋಂಕಿತರ ಮನೆ ಬಾಗಿಲಿಗೆ ತೆರಳಿ ಪ್ರಾಣವಾಯು ನೀಡಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಬಿಎಂಪಿ ಸಹಯೋಗದಲ್ಲಿ ಪ್ರಾಯೋಕವಾಗಿ ಒಂದು ಆಕ್ಸಿ ಬಸ್‌ ಸೇವೆಯನ್ನು ಶುರು ಮಾಡಿದೆ. ಖಾಸಗಿ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಶಾಲಾ ವಾಹನ ಮಾದರಿಯ ಆಕ್ಸಿ ಬಸ್‌ ಅನ್ನು ಸಿದ್ಧಪಡಿಸಿಕೊಟ್ಟಿದೆ. ಇದರಲ್ಲಿ ಚಾಲಕ ಹಾಗೂ ವೈದ್ಯಕೀಯ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಏಕಕಾಲದಲ್ಲಿ 8 ಮಂದಿ ಸೋಂಕಿತರಿಗೆ ಆಕ್ಸಿಜನ್‌ ನೀಡುವಂತಹ ವ್ಯವಸ್ಥೆ ಇದೆ. ಇದಕ್ಕಾಗಿ ಜಂಬೋ ಮತ್ತು ಸಣ್ಣ ಸಿಲಿಂಡರ್‌ಗಳು ಲಭ್ಯ ಇವೆ. ಈ ವಿಶೇಷ ಆಕ್ಸಿ ಬಸ್‌ ಅಗತ್ಯವಿರುವ ಮನೆ ಬಾಗಿಲಿಗೆ ಹೋಗಿ ಆಮ್ಲಜನಕ ಪೂರೈಸಲಿದೆ. ನಗರದ ಆರೋಗ್ಯ ಸೌಧದ ಬಳಿ ನಿಲುಗಡೆ ಮಾಡಿದ್ದ ಈ ಆಕ್ಸಿ ಬಸ್‌ ಅನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಪರಿಶೀಲಿಸಿದರು. ''ಈ ವಾಹನವು ನಗರದಾದ್ಯಂತ ಸಂಚರಿಸಲಿದ್ದು, ಅಗತ್ಯವಿರುವವರಿಗೆ ಆಕ್ಸಿಜನ್‌ ವ್ಯವಸ್ಥೆ ಮಾಡಲಾಗುತ್ತದೆ. ಇದರ ಯಶಸ್ಸು ಆಧರಿಸಿ ಆಕ್ಸಿ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡಲು ಚಿಂತಿಸಲಾಗಿದೆ,'' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ. ತ್ರಿಲೋಕಚಂದ್ರ ತಿಳಿಸಿದರು.